ಬಂಧಿತ ಸೆಂಥಿಲ್ ಬಾಲಾಜಿಗೆ ಮತ್ತೊಂದು ಶಾಕ್, ಮಂತ್ರಿ ಮಂಡಲದಿಂದ ವಜಾಗೊಳಿಸಿದ ರಾಜ್ಯಪಾಲ!

Published : Jun 29, 2023, 08:15 PM IST
ಬಂಧಿತ ಸೆಂಥಿಲ್ ಬಾಲಾಜಿಗೆ ಮತ್ತೊಂದು ಶಾಕ್, ಮಂತ್ರಿ ಮಂಡಲದಿಂದ ವಜಾಗೊಳಿಸಿದ ರಾಜ್ಯಪಾಲ!

ಸಾರಾಂಶ

ಉದ್ಯೋಗಕ್ಕಾಗಿ ಲಂಚ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ತಮಿಳುನಾಡಿನ ಸಚಿವ ವಿ ಸೆಂಥಿಲ್‌ನನ್ನು ಮಂತ್ರಿ ಮಂಡಲದಿಂದ ವಜಾಗೊಳಿಸಲಾಗಿದೆ. ರಾಜ್ಯಪಾಲರು ಈ ನಿರ್ಧಾರ ಘೋಷಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಚೆನ್ನೈ(ಜೂ.29) ಉದ್ಯೋಗಕ್ಕಾಗಿ ಲಂಚ ಪ್ರಕರಣದಲ್ಲಿ  ಜಾರಿ ನಿರ್ದೇಶನಾಲಯದಿಂದ ಅರೆಸ್ಟ್ ಆಗಿರವ ವಿ ಸೆಂಥಿಲ್‌ಗೆ ಇದೀದ ರಾಜ್ಯಪಾಲರು ಶಾಕ್ ನೀಡಿದ್ದಾರೆ. ಬಂಧಿತ ಸೆಂಥಿಲ್ ಬಾಲಾಜಿಯನ್ನ ರಾಜ್ಯಪಾಲರು ಮಂತ್ರಿ ಮಂಡಲದಿಂದ ವಜಾಗೊಳಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿ ಸೆಂಥಿಲ್ ಬಾಲಾಜಿಯನ್ನು ಈ ತಕ್ಷಣದಿಂದಲೇ ಮಂತ್ರಿ ಮಂಡಲದಿಂದ ವಜಾಗೊಳಿಸಲಾಗಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಆದೇಶ ಹೊರಡಿಸಿದ್ದಾರೆ. ಇದೀಗ ರಾಜ್ಯಾಪಾಲರ ಆದೇಶ ವಿವಾದಕ್ಕೆ ಕಾರಣವಾಗಿದೆ. ಕ್ಯಾಬಿನೆಟ್‌ನಲ್ಲಿ ನಿರ್ಧಾರವಾಗಬೇಕಿದ್ದ ಘೋಷಣೆ ರಾಜ್ಯಪಾಲರು ಮಾಡಿದ್ದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

2014ರಲ್ಲಿ ಸಾರಿಗೆ ಇಲಾ​ಖೆ​ಯಲ್ಲಿ ನೌಕರಿ ನೀಡಲು ಲಂಚ ಪಡೆದ ಪ್ರಕ​ರ​ಣಕ್ಕೆ ಸಂಬಂಧಿ​ಸಿದ ಅಕ್ರಮ ಹಣ ವರ್ಗಾ​ವಣೆ ಕೇಸಿ​ನಲ್ಲಿ ತಮಿ​ಳು​ನಾ​ಡಿನ ಅಬ​ಕಾರಿ ಸಚಿವ ಹಾಗೂ ಪ್ರಭಾ​ವಿ ಡಿಎಂಕೆ ಮುಖಂಡ ಸೆಂಥಿಲ್‌ ಬಾಲಾಜಿ ಅವ​ರನ್ನು ಜಾರಿ ನಿರ್ದೇ​ಶ​ನಾ​ಲಯ (ಇ.ಡಿ.) ಬುಧ​ವಾರ ಬಂಧಿಸಿತ್ತು. ಸೆಂಥಿಲ್‌ ಬಾಲಾಜಿ 2011ರಿಂದ 2014ರವ​ರೆಗೆ ಅಣ್ಣಾ​ಡಿ​ಎಂಕೆ​ಯ​ಲ್ಲಿ​ದ್ದರು ಹಾಗೂ ಜಯ​ಲ​ಲಿತಾ ಸಂಪು​ಟ​ದಲ್ಲಿ ಸಾರಿಗೆ ಸಚಿ​ವ​ರಾ​ಗಿ​ದ್ದ​ರು. ಆಗ ಅವರು ಸಾರಿಗೆ ಇಲಾ​ಖೆ​ಯಲ್ಲಿ ನೌಕರಿ ಕೊಡಿ​ಸಲು ಸಾವಿ​ರಾರು ಜನ​ರಿಂದ ಕೋಟ್ಯಂತರ ರು. ಲಂಚ ಪಡೆ​ದಿ​ದ್ದರು ಎಂಬ ದೂರು ದಾಖ​ಲಾ​ಗಿತ್ತು. ಇದಕ್ಕೆ ಸಂಬಂಧಿ​ಸಿದ ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣದ ತನಿ​ಖೆ​ಯನ್ನು ಇ.ಡಿ. ನಡೆ​ಸು​ತ್ತಿ​ದೆ.

ಬಂಧನಕ್ಕೆ ಒಳಪಟ್ಟ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಸಚಿವನಿಗೆ ತುರ್ತು ಶಸ್ತ್ರಚಿಕಿತ್ಸೆ

ತಮಿಳುನಾಡಿನ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿತ್ತ. ಇತ್ತ ಬಾಲಾಜಿ ಅವರ ಕರೂ​ರಿನ ಆ​ಸ್ತಿ​ಗಳ ಮೇಲೆ ಇ.ಡಿ. ದಾಳಿ ನಡೆ​ಸಿತ್ತು. ಬುಧ​ವಾರ ನಸು​ಕಿ​ನಲ್ಲಿ ಅವ​ರನ್ನು ಬಂಧಿ​ಸಿ​ತು. ಈ ವೇಳೆ ಭಾರಿ ಹೈಡ್ರಾಮಾ ಸೃಷ್ಟಿ​ಯಾ​ಯಿ​ತು. ಬಾಲಾ​ಜಿ ಅವರು ತಾವು ಅಸ್ವ​ಸ್ಥ​ಗೊಂಡಿ​ದ್ದಾ​ಗಿ ಇ.ಡಿ. ಸಿಬ್ಬಂದಿಯ ಜೀಪಿ​ನಲ್ಲೇ ರೋದಿ​ಸಿ​ದರು. ಬಳಿಕ ಅವ​ರನ್ನು ಚೆನ್ನೈ​ನ ಒಮಂದು​ರಾ​ರ್‌​ನ​ಲ್ಲಿ​ರು​ವ ಮಲ್ಟಿಸ್ಪೆಷಾ​ಲಿಟಿ ಸರ್ಕಾರಿ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಯಿ​ತು. ಅಲ್ಲಿ ಬೆಳಗ್ಗೆ 10.40ಕ್ಕೆ ಅವ​ರಿಗೆ ಕೊರೋ​ನರಿ ಆ್ಯಂಜಿಯೋಗ್ರಾಂ ಮಾಡ​ಲಾ​ಯಿತು. ವೈದ್ಯರು ಅವ​ರಿ​ಗೆ ಹೃದ​ಯದ ಬೈಪಾಸ್‌ ಸರ್ಜ​ರಿಯ ಸಲ​ಹೆ​ ನೀಡಿ​ದ್ದರು. ಇತ್ತೀಚೆಗೆ ಸೆಂಥಿಲ್‌ಗೆ ಯಶಸ್ವಿ ಹೃದಯ ಚಿಕಿತ್ಸೆ ಮಾಡಲಾಗಿತ್ತು. 

Breaking: ತಮಿಳುನಾಡು ಸರ್ಕಾರಕ್ಕೆ ಶಾಕ್‌: ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಸಚಿವ ವಿ. ಸೆಂಥಿಲ್ ಬಾಲಾಜಿ ಬಂಧಿಸಿದ ಇಡಿ

ಬಾಲಾಜಿ ಕರೂರು ಹಾಗೂ ಕೊಯ​ಮ​ತ್ತೂರು ಭಾಗದ ಪ್ರಭಾವಿ ನಾಯಕ. 2000ದ ದಶ​ಕ​ದಲ್ಲಿ ಡಿಎಂಕೆ​ಯಿಂದ ರಾಜ​ಕೀಯ ಆರಂಭಿ​ಸಿ​ದರು. ಆದರೆ ಕಾಲಾ​ನಂತರ ಅಣ್ಣಾ​ಡಿ​ಎಂಕೆಗೆ ಹೋಗಿ 2011-14ರ ಅವ​ಧಿ​ಯಲ್ಲಿ ಜಯಾ ಸಂಪು​ಟದ ಸಚಿ​ವ​ರಾ​ದ​ರು. ಜಯಾ ಜೈಲಿಗೆ ಹೋದಾಗ ಕ್ಷೌರ ಮಾಡಿ​ಸಿ​ಕೊ​ಳ್ಳದೇ ವ್ರತಾ​ಚ​ರ​ಣೆ​ಯನ್ನೂ ಮಾಡಿ​ದರು. ಆದರೆ ಜಯಾ ಜೈಲಿಂದ ಹೊರ​ಬಂದ ನಂತರ ಬಾಲಾಜಿ ಅವ​ರನ್ನು ಅದ್ಯಾ​ವುದೋ ಕಾರ​ಣಕ್ಕೆ ಪಕ್ಷ​ದಿಂದ ಹೊರ​ದ​ಬ್ಬಿ​ದರು. ಬಳಿಕ ಬಾಲಾ​ಜಿ ಟಿಟಿವಿ ದಿನ​ಕ​ರನ್‌ರ ಪಕ್ಷ ಸೇರಿದರು. ಆದರೆ ಕೆಲ ದಿನ​ಗ​ಳ​ಲ್ಲೇ ಡಿಎಂಕೆ ತೆಕ್ಕೆಗೆ ಮರ​ಳಿದ ಬಾಲಾಜಿ, ಸ್ಟಾಲಿನ್‌ ಸಂಪು​ಟ​ದಲ್ಲಿ ಅಬ​ಕಾರಿ ಹಾಗೂ ವಿದ್ಯುತ್‌ ಸಚಿ​ವ​ರಾ​ದರು. ಸಂಘ​ಟ​ನಾ ಚತು​ರ​ನಾದ ಬಾಲಾಜಿ ಕರೂರು ಹಾಗೂ ಕೊಯ​ಮ​ತ್ತೂರು ಜಿಲ್ಲೆ​ಗ​ಳಲ್ಲಿ ಪಕ್ಷದ ಉಸ್ತು​ವಾರಿ ವಹಿಸಿ ಒಂದು ಸೀಟನ್ನೂ ಅಣ್ಣಾ ಡಿಎಂಕೆಗೆ ಗೆಲ್ಲಲು ಅವ​ಕಾಶ ನೀಡಿ​ರ​ಲಿಲ್ಲ. ಹೀಗಾಗಿ ಸಿಎಂ ಸ್ಟಾಲಿ​ನ್‌ಗೆ ಬಾಲಾಜಿ ಎಂದರೆ ಇನ್ನಿ​ಲ್ಲದ ಅಚ್ಚು​ಮೆ​ಚ್ಚು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌