ಕೇರಳದ ಕೊರಟ್ಟಿ ಚರ್ಚ್ಗೆ ಸುರೇಶ್ ಗೋಪಿ ಭೇಟಿ ನೀಡಿ ಕಾಣಿಕೆ ಅರ್ಪಿಸಿದರು. ವಕ್ಫ್ ಕಾನೂನು ತಿದ್ದುಪಡಿಯು ಮುಸ್ಲಿಂ ಸಮುದಾಯಕ್ಕೆ ಅನುಕೂಲಕರ ಮತ್ತು ಮುನಂಬಂ ಪ್ರದೇಶದ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಇದೇ ವೇಳೆ ಹೇಳಿದರು.
ತ್ರಿಶೂರ್: ಕೇರಳದ ಕೊರಟ್ಟಿ ಸೇಂಟ್ ಮೇರಿಸ್ ಫೊರೋನಾ ಚರ್ಚ್ಗೆ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ ನೀಡಿ ಕಾಣಿಕೆ ಅರ್ಪಿಸಿದರು. ಸುರೇಶ್ ಗೋಪಿ ಈ ಚರ್ಚ್ಗೆ ಬಾಳೆಹಣ್ಣು, ರೇಷ್ಮೆ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿದರು. ಇದೇ ವೇಳೆ ಚರ್ಚ್ನ ಪಾದ್ರಿ ಸಚಿವ ಸುರೇಶ್ ಗೋಪಿ ತಲೆಯ ಮೇಲೆ ಕೈ ಇಟ್ಟು ಪ್ರಾರ್ಥಿಸಿ ಆಶೀರ್ವದಿಸಿದರು. ನಂತರ ಸುರೇಶ್ ಗೋಪಿ ಚರ್ಚ್ನಿಂದ ಹೊರಟರು. ಈ ಸಂದರ್ಭದಲ್ಲಿ ಸಚಿವ ಸುರೇಶ್ ಗೋಪಿಗೆ ಚರ್ಚ್ನ ಪಾದ್ರಿ ಏಸು ಮಾತೆಯ ಸಣ್ಣ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು.
ಅದೇ ಸಮಯದಲ್ಲಿ, ವಕ್ಫ್ ಕಾನೂನು ತಿದ್ದುಪಡಿಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಬಗ್ಗೆ ಮಾತನಾಡಿದ ಸುರೇಶ್ ಗೋಪಿ , ವಕ್ಫ್ ಒಂದು ಒಳ್ಳೆಯ ಸಂಸ್ಥೆ ಮತ್ತು ಅದರಲ್ಲಿನ ಕ್ರೂರ ವಿಷಯಗಳನ್ನು ಕೊನೆಗೊಳಿಸಲಾಗಿದೆ. ಇದು ಮುಸ್ಲಿಂ ಸಮುದಾಯಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಭಾರತದಲ್ಲಿ ಈ ಕ್ರೌರ್ಯವನ್ನು ಕೊನೆಗೊಳಿಸಲಾಗಿದೆ ಎಂದು ಹೇಳಿದ ಸುರೇಶ್ ಗೋಪಿ, ಮಸೂದೆ ಅಂಗೀಕಾರವು ಕೇರಳದ ಮುನಂಬಂ ಪ್ರದೇಶದ ಸಮಸ್ಯೆಗೂ ಪರಿಹಾರ ನೀಡುತ್ತದೆ ಎಂದು ಹೇಳಿದರು.
ಹೊಸ ವಕ್ಫ್ ಕಾಯ್ದೆಯಿಂದ ಯಾವುದೇ ಆತಂಕ ಇಲ್ಲ, ಕುತಂತ್ರವಿಲ್ಲದ ತಜ್ಞರನ್ನು ಕೇಳಿ. ವಿರೋಧ ಪಕ್ಷವು ಜನರನ್ನು ವಿಭಜಿಸಲು ಪ್ರಯತ್ನಿಸಲಿಲ್ಲವೇ? ಮುಸ್ಲಿಮರಿಗೆ ತೊಂದರೆಯಾಗುತ್ತದೆ ಎಂದು ಅವರು ಸಂಸತ್ತಿನಲ್ಲಿ ಹೇಳಲಿಲ್ಲವೇ? ಎಂದರು.
ವಕ್ಪ್ ತಿದ್ದುಪಡಿ ಮಸೂದೆ ಜಾರಿ ಬಳಿಕ ಮುನಂಬಮ್ನಲ್ಲಿ ಸಂಭ್ರಮಾಚರಣೆ
ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವಾದ ನಂತರ ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಮ್ನಲ್ಲಿರುವ ವಿವಾದಿತ 400 ಎಕರೆ ಭೂಮಿಯ ಬಗ್ಗೆ ಮತ್ತೆ ಮಾಧ್ಯಮಗಳ ಗಮನ ಸೆಳೆದಿದೆ. ಅಲ್ಲಿ ಸುಮಾರು 600 ಕುಟುಂಬಗಳಿದ್ದು, ಅವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು - ತಲೆಮಾರುಗಳಿಂದ ತಾವು ವಾಸಿಸುತ್ತಿರುವ ಭೂಮಿಯ ಮೇಲೆ ವಕ್ಫ್ ಮಂಡಳಿಯ ಹಕ್ಕು ಸಾಧಿಸುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾದ ನಂತರ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಇದನ್ನು ಮುನಂಬಮ್ ಜನರು ಸೇರಿದಂತೆ ಎಲ್ಲಾ ನಾಗರಿಕರಿಗೆ ಆಸ್ತಿಯ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯುವತ್ತ ಒಂದು ಮಹತ್ವದ ಹೆಜ್ಜೆ ಇದು ಎಂದು ಬಣ್ಣಿಸಿದ್ದರು.
ವಕ್ಫ್ ಮಸೂದೆಯನ್ನು ವಿರೋಧಿಸಿದ ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಅವರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ, 'ನಿನ್ನೆ ನಮ್ಮ ಸಂಸತ್ತಿನಲ್ಲಿ ನಾವು ಕಂಡದ್ದು ವಿರೋಧ ಪಕ್ಷದ ತುಷ್ಟೀಕರಣ ರಾಜಕೀಯದ ನಾಚಿಕೆಯಿಲ್ಲದ ಪ್ರದರ್ಶನವಾಗಿದೆ. ಮುನಂಬಮ್ ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು, ಇಂಡಿ ಮೈತ್ರಿಕೂಟದ ಪಾಲುದಾರರು ಸುಳ್ಳುಗಳನ್ನು ಹರಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನಿನ್ನೆಯ ವಕ್ಫ್ ಚರ್ಚೆಯು ಕೇರಳದ ಜನರಿಗೆ ಈ ಸ್ಪಷ್ಟ ಸತ್ಯವನ್ನು ಬಹಿರಂಗಪಡಿಸಿತು' ಎಂದು ಹೇಳಿದರು.
ಈ ಮಸೂದೆಯಿಂದ ಕೇರಳದ ಮುನಂಬಮ್ನಲ್ಲಿ ಜನ ಸಂಭ್ರಮಾಚರಣೆ ನಡೆಸಿದ್ದರು.