ತೆಲಂಗಾಣ: ಅರಣ್ಯನಾಶ ಬೆನ್ನಲ್ಲೇ ಮತ್ತೊಂದು ಕಡೆ 30 ಎಕರೆ ಉದ್ಯಾನವನಕ್ಕೆ ಬೆಂಕಿ, ಬೆಲೆಬಾಳುವ ಮರಗಳು ಭಸ್ಮ!

Published : Apr 04, 2025, 11:52 AM ISTUpdated : Apr 04, 2025, 11:57 AM IST
ತೆಲಂಗಾಣ: ಅರಣ್ಯನಾಶ ಬೆನ್ನಲ್ಲೇ ಮತ್ತೊಂದು ಕಡೆ 30 ಎಕರೆ ಉದ್ಯಾನವನಕ್ಕೆ  ಬೆಂಕಿ, ಬೆಲೆಬಾಳುವ ಮರಗಳು ಭಸ್ಮ!

ಸಾರಾಂಶ

ತೆಲಂಗಾಣದ ಗಚಿಬೌಲಿಯಲ್ಲಿ 400 ಎಕರೆ ಅರಣ್ಯ ನಾಶಕ್ಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಖಮ್ಮಂನ ವೆಲುಗುಮಟ್ಲಾ ಅರ್ಬನ್ ಪಾರ್ಕ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 30 ಎಕರೆ ಪ್ರದೇಶದ ಮರಗಳು ಸುಟ್ಟುಹೋಗಿವೆ. ಕೃಷಿ ಜಮೀನಿನಿಂದ ಹಬ್ಬಿದ ಬೆಂಕಿಯನ್ನು ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಸೇರಿ ನಂದಿಸಿದರು.

ತೆಲಂಗಾಣ ಸರ್ಕಾರವು ಬಹು-ಮೂಲಸೌಕರ್ಯ ಮತ್ತು ಐಟಿ ಪಾರ್ಕ್‌ಗಳ ಅಭಿವೃದ್ಧಿಗಾಗಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ಭೂಮಿ ನಾಶಕ್ಕೆ  ಗುರುವಾರ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅರಣ್ಯ ನಾಶ ಮಾಡುತ್ತಿರುವ ವೇಳೆ ಪ್ರಾಣಿ ಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. 

ಇದೀಗ  ತೆಲಂಗಾಣದ ಮತ್ತೊಂದು ಕಡೆ ಬೆಂಕಿ ಬಿದ್ದು, ಅಉಮಾರು 30 ಎಕರೆ ಪ್ರದೇಶದಲ್ಲಿದ್ದ ಮರಗಳು ಸುಟ್ಟು ಕರಕಲಾಗಿದೆ. ಖಮ್ಮಂನ ವೆಲುಗುಮಟ್ಲಾ ಅರ್ಬನ್ ಪಾರ್ಕ್‌ನಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು 30 ಎಕರೆ ಪ್ರದೇಶದಲ್ಲಿದ್ದ ಮರಗಳು ಸುಟ್ಟು ಕರಕಲಾಗಿವೆ.

ಕಾಂಚ ಗಚ್ಚಿಬೌಲಿ ಮರಗಳ ಮಾರಣಹೋಮ; 'ಮುಖ್ಯ ಕಾರ್ಯದರ್ಶಿ ಜೈಲಿಗೆ ಹೋಗ್ತಾನೆ' ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌!

ಉದ್ಯಾನವನದಲ್ಲಿ ಬೆಳೆದ ವಿವಿಧ ಜಾತಿಯ ಮರಗಳು ಕೂಡ ಬೆಂಕಿಯಲ್ಲಿ ಸುಟ್ಟು ಭಸ್ಮವಾದವು. ಕೃಷಿ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಹೊತ್ತಿಸಿದ ಪೊದೆಯಿಂದ ಹುಟ್ಟಿದ ಬೆಂಕಿಯ ಕಿಡಿ 135 ಎಕರೆಗಳಷ್ಟು ವಿಸ್ತೀರ್ಣದ ನಗರ ಉದ್ಯಾನವನಕ್ಕೆ ಬಹು ಬೇಗನೆ ಹರಡಿಕೊಂಡು ಈ ದುರಂತ ನಡೆದಿದೆ.

Telangana: 400 ಎಕರೆ ವಿವಿ ಭೂಮಿಯನ್ನು 10 ಸಾವಿರ ಕೋಟಿಗೆ ಹರಾಜು ಹಾಕಲು ಮುಂದಾದ ಕಾಂಗ್ರೆಸ್‌ ಸರ್ಕಾರ!

ವಿಷ್ಯ ತಿಳಿದ ತಕ್ಷಣ ಮೂರು ಅಗ್ನಿಶಾಮಕ ವಾಹನಗಳು  ಉದ್ಯಾನವನಕ್ಕೆ ಧಾವಿಸಿ ಸತತ ಮೂರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸಲಾಯ್ತು. ಜೊತೆಗೆ ಸ್ಥಳೀಯ ನಿವಾಸಿಗಳು ಕೂಡ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ