'ಚೀನಾ ವಸ್ತು ಬಾಯ್ಕಾಟ್ ಮಾಡಿ': ಗಡಿಯತ್ತ ಹೊರಟು ನಿಂತ ಯೋಧ ಹೇಳಿದ್ದಿಷ್ಟು

Suvarna News   | Asianet News
Published : Jun 26, 2020, 03:15 PM ISTUpdated : Jun 26, 2020, 04:22 PM IST
'ಚೀನಾ ವಸ್ತು ಬಾಯ್ಕಾಟ್ ಮಾಡಿ': ಗಡಿಯತ್ತ ಹೊರಟು ನಿಂತ ಯೋಧ ಹೇಳಿದ್ದಿಷ್ಟು

ಸಾರಾಂಶ

ಈಗಾಗಲೇ ಪ್ರಧಾನಿ ಸೇರಿ ಪ್ರಮುಖರು ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಕರೆ ನೀಡಿದ್ದಾರೆ. ಸೆಲೆನ್ರಿಟಿಗಳಿಗೂ ಚೀನಾ ಉತ್ಪನ್ನಗಳಿಗೆ ಜಾಹೀರಾತು ನೀಡದಂತೆ ಸೂಚಿಸಲಾಗಿದೆ. ಈ ನಡುವೆಯೇ ಗಡಿ ಕಾಯಲು ಹೊರಟು ನಿಂತ ಯೋಧನೊಬ್ಬನ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಜೂ.26): ಭಾರತ ಹಾಗೂ ಚೀನಾ ನಡುವೆ ನಡೆದ ದಾಳಿ ಪ್ರತಿದಾಳಿಯಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಸಾಮಾನ್ಯ ಜನರು ಚೀನಾ ಆ್ಯಪ್, ವಸ್ತುಗಳನ್ನು ಬಹಿಷ್ಕರಿಸುವುದು ಚೀನಾಗೆ ಭಾರತೀಯರು ನೀಡಬಹುದಾದ ದೊಡ್ಡ ಆರ್ಥಿಕ ಹೊಡೆತ.

ಈಗಾಗಲೇ ಪ್ರಧಾನಿ ಸೇರಿ ಪ್ರಮುಖರು ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಕರೆ ನೀಡಿದ್ದಾರೆ. ಸೆಲೆನ್ರಿಟಿಗಳಿಗೂ ಚೀನಾ ಉತ್ಪನ್ನಗಳಿಗೆ ಜಾಹೀರಾತು ನೀಡದಂತೆ ಸೂಚಿಸಲಾಗಿದೆ. ಈ ನಡುವೆಯೇ ಗಡಿ ಕಾಯಲು ಹೊರಟು ನಿಂತ ಯೋಧನೊಬ್ಬನ ವಿಡಿಯೋ ವೈರಲ್ ಆಗಿದೆ.

‘ಬಾಯ್ಕಾಟ್‌’ ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!

ಚೀನಾದಿಂದ ಎಲೆಕ್ಟ್ರಾನಿಕ್ಸ್, ಟಾಯ್ಸ್, ಮೊಬೈಲ್  ಸೇರಿ ಬಹಳಷ್ಟು ವಿದಧ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತೀಯರು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಚೀನಾ ವಸ್ತುಗಳನ್ನು ಬಳಸುತ್ತಿದ್ದಾರೆ. ಇದೀಗ ಹೆಚ್ಚಿನ ಜನ ಬಾಯ್ಕಾಟ್ ಚೀನಾ ಅಭಿಯಾನದ ಭಾಗವಾಗಿದ್ದಾರೆ.

ಈ ನಡುವೆ ಯೋಧನೊಬ್ಬ ಮಾಡಿರುವ ವಿಡಿಯೋ ಎಲ್ಲೆಡೆ ಓಡಾಡುತ್ತಿದೆ. ಭಾರತೀಯ ಯೋಧನೊಬ್ಬ ಟ್ರಕ್‌ನಿಂದ ಇಳಿದು, ಸಶಸ್ತ್ರನಾಗಿ ಟ್ರಕ್ ಹೋಗಲಾದ ರಸ್ತೆಯಲ್ಲಿ ನಡೆದು ಗಡಿ ಸೇರುವ ಸಂದರ್ಭ ಈ ವಿಡಿಯೋ ಮಾಡಲಾಗಿದೆ.

ಬಾಯ್ಕಾಟ್ ಚೀನಾ, ಚೀನಾ ವಸ್ತು ಎಂದು ಕಂಡುಹಿಡಿಯುವುದು ಹೇಗೆ?

ನೀವು ಅಲ್ಲಿ ಆರಾಮವಾಗಿರಿ. ನಾವು ನಮಗೆ ಆದಷ್ಟು ದೇಶ ಸೇವೆ ಮಾಡುತ್ತಿದ್ದೇವೆ. ನೀವು ಸ್ವಲ್ಪ ಚೀನಾ ಆ್ಯಪ್ ಡಿಲೀಟ್ ಮಾಡಿ. ನಾವು ಇಲ್ಲಿದ್ದೇವೆ. ಇಂತಹ ಪ್ರದೇಶದಲ್ಲಿ ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ. ನೀವು ಕುಳಿತಲ್ಲಿಯೇ ಚೀನಾ ಆ್ಯಪ್ ಡಿಲೀಟ್ ಮಾಡುವ ಮೂಲಕ ದೇಶ ಸೇವೆ ಮಾಡಬಹುದು ಎಂದು ಹೇಳಿದ್ದಾರೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!