ಪಿಎಂ ಕಿಸಾನ್‌ ನಿಧಿಯ 12ನೇ ಕಂತು ಬಿಡುಗಡೆಗೂ ಮುನ್ನ ಸರ್ಕಾರದಿಂದ ಮಹತ್ವದ ಬದಲಾವಣೆ!

Published : Jul 18, 2022, 01:12 PM ISTUpdated : Jul 18, 2022, 01:16 PM IST
ಪಿಎಂ ಕಿಸಾನ್‌ ನಿಧಿಯ 12ನೇ ಕಂತು ಬಿಡುಗಡೆಗೂ ಮುನ್ನ ಸರ್ಕಾರದಿಂದ ಮಹತ್ವದ ಬದಲಾವಣೆ!

ಸಾರಾಂಶ

ಪಿಎಂ ಕಿಸಾನ್ ಸಮ್ಮಾನ್ ನಿಧಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ನಿಯಮವು ನಿಮ್ಮ ಸ್ಥಿತಿಯನ್ನು ಪರಿಶೀಲಿಸುವುದಕ್ಕೆ ಸಂಬಂಧಿಸಿದೆ. ಈಗ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಸ್ಟೇಟಸ್‌ ಪರಿಶೀಲಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಸ್ಟೇಟಸ್‌ ಪರಿಶೀಲಿಸುವ ವಿಧಾನವನ್ನು ಸರ್ಕಾರ ಬದಲಾಯಿಸಿದೆ. ಈ ವಿಧಾನದ ಬಗ್ಗೆ ಮಾಹಿತಿ

ನವದೆಹಲಿ(ಜು.18): ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ (ಪಿಎಂ ಕಿಸಾನ್) ಪ್ರಮುಖ ಬದಲಾವಣೆ ಮಾಡಲಾಗಿದೆ. ಈಗ ನಿಮ್ಮ ಆಧಾರ್ ಸಂಖ್ಯೆಯಿಂದ ಫಲಾನುಭವಿಯ ಸ್ಟೇಸ್‌ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದರರ್ಥ ನೀವು ಈ ಮೊದಲು ಆಧಾರ್ ಸಂಖ್ಯೆಯನ್ನು ನಮೂದಿಸಿದ ತಕ್ಷಣ ನಿಮ್ಮ ಸ್ಟೇಟಸ್‌ ಸುಲಭವಾಗಿ ನೋಡಬಹುದಿತ್ತು, ಆದರೆ ಇನ್ಮುಂದೆ ಹಾಗಾಗುವುದಿಲ್ಲ. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಪಿಎಂ ಕಿಸಾನ್ 12 ನೇ ಕಂತಿನ ಸ್ಥಿತಿಯನ್ನು ನೀವು ಹೇಗೆ ನೋಡಲು ಸಾಧ್ಯವಾಗುತ್ತದೆ? ಇಲ್ಲಿದೆ ವಿವರ

ಕೊನೆಗೂ Pm Kisan Samman Nidhi ವೆಬ್‌ನಲ್ಲಿ ಬಂತು ಕನ್ನಡ!

ನೋಂದಣಿ ಮತ್ತು ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತದೆ

ಸರ್ಕಾರವು ನಿಮಗಾಗಿ ಬೇರೊಂದು ಸೌಲಭ್ಯವನ್ನು ಮರುಸ್ಥಾಪಿಸಿದೆ ಎಂಬುವುದು ಉಲ್ಲೇಖನೀಯ. ಮತ್ತೊಮ್ಮೆ ನಿಮ್ಮ ಮೊಬೈಲ್ ಸಂಖ್ಯೆಯಿಂದ ನಿಮ್ಮ ಸ್ಥಿತಿಯನ್ನು ಪರಿಶೀಲಿಸಬಹುದು. ನಿಮ್ಮ ನೋಂದಣಿ ಸಂಖ್ಯೆಯನ್ನು ಸಹ ನೀವು ನೆನಪಿಸಿಕೊಂಡರೆ, ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಸ್ಟೇಟಸ್‌ ಪರಿಶೀಲಿಸಬಹುದು. ನೀವು 12 ನೇ ಕಂತು ಯಾವಾಗ ಪಡೆಯುತ್ತೀರಿ? ಖಾತೆಗೆ ಹಣ ಬಂದಿದೆಯಾ ಅಥವಾ ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದೆ? ಎಂಬುದು ನಿಮಗೆ ಸುಲಭವಾಗಿ ತಿಳಿಯುತ್ತದೆ. ಈ ಬದಲಾವಣೆಯೊಂದಿಗೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾದಾಗಿನಿಂದ 9 ಬದಲಾವಣೆಗಳಾಗಿವೆ.

ವ್ಯವಸ್ಥೆ ಈಗಾಗಲೇ ಸಾಕಷ್ಟು ಬದಲಾಗಿದೆ

ನೀವು PM ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೋಂದಾಯಿಸಿದ ತಕ್ಷಣ ನಿಮ್ಮ ಸ್ಥಿತಿಯನ್ನು ನೀವು ಪರಿಶೀಲಿಸಬಹುದು. ನಿಮ್ಮ ಅರ್ಜಿಯ ಸ್ಥಿತಿ, ಬ್ಯಾಂಕ್ ಖಾತೆಗೆ ಎಷ್ಟು ಕಂತು ಬಂದಿದೆ ಇತ್ಯಾದಿ. ಈ ಹಿಂದೆ ಯಾವುದೇ ರೈತರು ಪಿಎಂ ಕಿಸಾನ್ ಪೋರ್ಟಲ್‌ಗೆ ಹೋಗಿ ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಸ್ಟೇಟಸ್‌ ಮಾಹಿತಿಯನ್ನು ಪಡೆಯಬಹುದು. ನಂತರ, ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯಿಂದ ಸ್ಥಿತಿಯನ್ನು ನೋಡುವ ಸೌಲಭ್ಯವನ್ನು ನಿಲ್ಲಿಸಲಾಯಿತು. ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಮಾತ್ರ ಸ್ಥಿತಿಯನ್ನು ಪರಿಶೀಲಿಸಲು ನಿಯಮವನ್ನು ಮಾಡಲಾಗಿದೆ. ಆದರೆ ಇದೀಗ ಆಧಾರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ತೆಗೆದು ಮೊಬೈಲ್ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ.

ರೈತರಿಗೆ ಕೊಂಚ ನಿರಾಳ: ಪಿಎಂ ಕಿಸಾನ್ ಯೋಜನೆ ಸಂಬಂಧ ಮಹತ್ವದ ಮಾಹಿತಿ!

ಸ್ಟೇಟಸ್‌ ಹೇಗೆ ಪರಿಶೀಲಿಸುವುದು?

ಮೊದಲು pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡುವುದು ಮೊದಲ ಮಾರ್ಗವಾಗಿದೆ. ಎಡಭಾಗದಲ್ಲಿರುವ ಸಣ್ಣ ಬಾಕ್ಸ್‌ನಲ್ಲಿ ಫಲಾನುಭವಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ, ನಿಮ್ಮ ನೋಂದಣಿ ಸಂಖ್ಯೆ ನಿಮಗೆ ತಿಳಿದಿದ್ದರೆ, ಅದನ್ನು ಭರ್ತಿ ಮಾಡಿ ಮತ್ತು ನಿಮ್ಮ ಸ್ಥಿತಿಯನ್ನು ಪರಿಶೀಲಿಸಿ. ಹುಡುಕಾಟದ ಮೂಲಕ ಆಯ್ಕೆಯಲ್ಲಿ ನೋಂದಣಿ ಸಂಖ್ಯೆಯ ಬದಲಿಗೆ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡುವುದು ಇನ್ನೊಂದು ಮಾರ್ಗವಾಗಿದೆ. ಇದರ ನಂತರ, ಮೌಲ್ಯವನ್ನು ನಮೂದಿಸಿ ಬಾಕ್ಸ್‌ನಲ್ಲಿ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಎಂಟರ್ ಇಮೇಜ್ ಟೆಕ್ಸ್ಟ್ ಪಕ್ಕದಲ್ಲಿರುವ ಬಾಕ್ಸ್‌ನಲ್ಲಿ ಇಮೇಜ್ ಕೋಡ್ ಅನ್ನು ನಮೂದಿಸಿ ಮತ್ತು ಡೇಟಾ ಪಡೆಯಿರಿ ಕ್ಲಿಕ್ ಮಾಡಿ.

ನೋಂದಣಿ ಸಂಖ್ಯೆಯನ್ನು ಹೇಗೆ ತಿಳಿಯುವುದು?

ಎಡಭಾಗದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ತಿಳಿಯಿರಿ ಎಂಬ ಲಿಂಕ್ ಅನ್ನು ನೀವು ನೋಡಬಹುದಾಗಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಹೊಸ ಪುಟಕ್ಕೆ ಎಂಟರ್‌ ಆಗುತ್ತೀರಿ. ಇದರಲ್ಲಿ, ನಿಮ್ಮ PM ಕಿಸಾನ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ. ಅದರ ನಂತರ Get Mobile OTP ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಸಂಖ್ಯೆಗೆ OTP ಬರುತ್ತದೆ. ಕೊಟ್ಟಿರುವ ಬಾಕ್ಸ್‌ನಲ್ಲಿ OTP ಅನ್ನು ನಮೂದಿಸಿ ಮತ್ತು ವಿವರಗಳನ್ನು ಪಡೆಯಿರಿ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಸಂಖ್ಯೆ ಮತ್ತು ಹೆಸರು ನಿಮ್ಮ ಮುಂದೆ ಇರುತ್ತದೆ.

PM Kisan eKYC: ಪಿಎಂ ಕಿಸಾನ್ ಯೋಜನೆ ಇ-ಕೆವೈಸಿ ಪೂರ್ಣಗೊಳಿಸದ ರೈತರು ಚಿಂತಿಸಬೇಕಾಗಿಲ್ಲ, ಜುಲೈ 31ರ ತನಕ ಇದೆ ಸಮಯಾವಕಾಶ

ಹಣ ಬರದಿದ್ದರೆ, ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ನಿಮಗೆ ಸಾಧ್ಯವಾಗುತ್ತದೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ನೇರವಾಗಿ ತಲುಪದಿದ್ದರೆ, ನೀವು ಸಹಾಯವಾಣಿಗೆ ಮಾತನಾಡಬಹುದು. ಇದಕ್ಕಾಗಿ ನೀವು 155261 ಮತ್ತು 011-24300606 ಅನ್ನು ಡಯಲ್ ಮಾಡುವ ಮೂಲಕ ವಿಚಾರಿಸಬಹುದು.

ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೈತರನ್ನು ಬಲಪಡಿಸಲು ಮತ್ತು ಆರ್ಥಿಕವಾಗಿ ಸಹಾಯ ಮಾಡಲು ಪ್ರಾರಂಭಿಸಲಾಗಿದೆ. ಈ ಸಮ್ಮಾನ್ ನಿಧಿ ಯೋಜನೆಯಡಿ, ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ, ಇದು ತಲಾ 2000 ರೂಪಾಯಿಗಳ ಮೂರು ಕಂತುಗಳಲ್ಲಿ ಲಭ್ಯವಿದೆ. ದೇಶದಾದ್ಯಂತ 12.5 ಕೋಟಿ ರೈತರು ಪಿಎಂ ಕಿಸಾನ್ ನಿಧಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಯೋಜನೆಯ ಲಾಭ ಪಡೆಯಲು ಕೆವೈಸಿ ಅಗತ್ಯ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಹೊಂದುವುದು ಅವಶ್ಯಕ. KYC ಅನ್ನು ನವೀಕರಿಸಲು ಕೊನೆಯ ದಿನಾಂಕ ಮೇ 31 ಆಗಿದೆ. ನಿಮ್ಮ KYC ಅನ್ನು ಕೊನೆಯ ದಿನಾಂಕದೊಳಗೆ ನವೀಕರಿಸದಿದ್ದರೆ, ನಂತರ ನೀವು PM ಕಿಸಾನ್ ರೂ 2,000 ಕಂತುಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್