ಇದು ಟ್ರೈನೋ, ಓಪನ್‌ ಶವರ್‌ ಬೋಗಿಯೋ: ಎಸಿ ಕೋಚ್‌ನಲ್ಲಿ ನೀರು ಸೋರಿಕೆ ವಿರುದ್ಧ ನೆಟ್ಟಿಗರ ವ್ಯಂಗ್ಯ

Published : Jun 26, 2023, 02:17 PM IST
ಇದು ಟ್ರೈನೋ, ಓಪನ್‌ ಶವರ್‌ ಬೋಗಿಯೋ: ಎಸಿ ಕೋಚ್‌ನಲ್ಲಿ ನೀರು ಸೋರಿಕೆ ವಿರುದ್ಧ ನೆಟ್ಟಿಗರ ವ್ಯಂಗ್ಯ

ಸಾರಾಂಶ

ಮುಂಬೈ - ಇಂದೋರ್‌ ನಡುವಣ  ಆವಂತಿಕಾ ಎಕ್ಸ್‌ಪ್ರೆಸ್‌ ರೈಲಿನ ಎಸಿ ಬೋಗಿಯಲ್ಲಿ ನೀರು ಸೋರಿಕೆಯಾಗುತ್ತಿರುವ ವಿಡಿಯೋ ವೈರಲ್‌ ಆಗಿದ್ದು,ಈ ವಿಡಿಯೋವನ್ನು ನಂತರ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಹೊಸದಿಲ್ಲಿ (ಜೂನ್ 26, 2023): ಪ್ಯಾಸೆಂಜರ್ ರೈಲು ಬೋಗಿಯೊಂದರ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಈ ಹಿನ್ನೆಲೆ ಭಾರತೀಯ ರೈಲ್ವೆ ವಿರುದ್ಧ ಅಪಸ್ವರ ವ್ಯಕ್ತವಾಗಿದೆ. ಆವಂತಿಕಾ ಎಕ್ಸ್‌ಪ್ರೆಸ್‌ ರೈಲಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದ್ದು, ಮಳೆಯ ಸಮಯದಲ್ಲಿ ಎಸಿ ಕೋಚ್‌ನ ಹೀನಾಯ ಸ್ಥಿತಿಯ ಬಗ್ಗೆ ಕೋಪವನ್ನು ವ್ಯಕ್ತಪಡಿಸಿದ ಪ್ರಯಾಣಿಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಮುಂಬೈ - ಇಂದೋರ್‌ ನಡುವಣ  ಆವಂತಿಕಾ ಎಕ್ಸ್‌ಪ್ರೆಸ್‌ ರೈಲಿನ ಎಸಿ ಬೋಗಿಯಲ್ಲೇ ಈ ಘಟನೆ ನಡೆದಿದ್ದು, ಈ ವಿಡಿಯೋವನ್ನು ನಂತರ ಕಾಂಗ್ರೆಸ್‌ ಸಹ ಟ್ವೀಟ್‌ ಮಾಡಿದೆ. ಅಲ್ಲದೆ,  "ರೈಲ್ವೆಗಾಗಿ ಬರಿ ಪ್ರಚಾರದ ಬದಲು ಏನಾದರೂ ಕೆಲಸ ಮಾಡಬಹುದಿತ್ತು.  ಧ್ವಜವನ್ನು ತೋರಿಸುವ ರೈಲ್ವೆ ಸಚಿವರು ಪ್ರಸ್ತುತ ವಿದೇಶದಲ್ಲಿದ್ದಾರೆ, ಈ ಹಿನ್ನೆಲೆ ಹೆಸರಿಸಲಾದ ರೈಲ್ವೆ ಸಚಿವರು ಗಮನಹರಿಸಬೇಕು’’ ಎಂಬ ಕ್ಯಾಪ್ಷನ್‌ ಹಾಕಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವ್ಯಂಗ್ಯವಾಡಿದೆ.  

 

ಇದನ್ನು ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!

ಹಾಗೆ, ಮಹಿಳಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಈ ಬಗ್ಗೆ ಟ್ವೀಟ್ ಮಾಡಿ, ಭಾರತೀಯ ರೈಲ್ವೆ ದುಸ್ಥಿತಿಗೆ ಯಾರು ಹೊಣೆ ಎಂದೂ ಹಂಚಿಕೊಂಡಿದ್ದಾರೆ. 

ರೈಲ್ವೆ ಇಲಾಖೆ ವಿರುದ್ಧ ನೆಟ್ಟಿಗರ ಆಕ್ರೋಶ
"ಭಾರತೀಯ ರೈಲ್ವೇ ತೆರೆದ ಶವರ್ ಸೌಲಭ್ಯದೊಂದಿಗೆ ಹೊಸ ಸೂಟ್ ಕೋಚ್ ಅನ್ನು ಪ್ರಾರಂಭಿಸಿದೆ" ಎಂದು ಟ್ವಿಟ್ಟರ್‌ ಬಳಕೆದಾರರು ವ್ಯಂಗ್ಯಭರಿತ ಪೋಸ್ಟ್‌ನಲ್ಲಿ ಹೇಳಿದ್ದಾರೆ. "ಭಾರತೀಯ ರೈಲ್ವೇ ಈ ರೈಲುಗಳಲ್ಲಿ ಪ್ರಯಾಣಿಕರಿಗೆ ಶವರ್ ಜೆಲ್, ಶಾಂಪೂ ಮತ್ತು ಬಾತ್ರೋಬ್ ಅನ್ನು ಒದಗಿಸಲು ಚರ್ಚಿಸುತ್ತಿವೆ" ಎಂದೂ ಬಳಕೆದಾರರು ಟ್ರೋಲ್‌ ಮಾಡಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್‌ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!

ಇನ್ನೊಬ್ಬ ಬಳಕೆದಾರರು - ‘’2 - ಟೈರ್‌ AC ಸೀಟಿಗೆ ಪ್ರೀಮಿಯಂ ಶುಲ್ಕವನ್ನು ಪಾವತಿಸಿದ್ದರೂ ಸಹ ಪ್ರಯಾಣಿಕರು ಗಮನಾರ್ಹ ಅನಾನುಕೂಲತೆಗಳನ್ನು ಸಹಿಸಿಕೊಳ್ಳುತ್ತಾರೆ. ಈ ಕೋಚ್‌ನ ಪ್ರಯಾಣಿಕರಿಗೆ ಶುಲ್ಕವನ್ನು ಮರುಪಾವತಿಸಲು #ಭಾರತೀಯ ರೈಲ್ವೆ ಪರಿಗಣಿಸುತ್ತದೆಯೇ??? ಗಂಭೀರವಾಗಿ ಹೇಳುವುದಾದರೆ, ರೈಲ್ವೆ ಸೇವೆಯ ಗುಣಮಟ್ಟವು ಪ್ರತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ಇದು ಆಳವಾಗಿ ನಿರಾಶಾದಾಯಕವಾಗಿದೆ’’ ಎಂದೂ ಕಿಡಿ ಕಾರಿದ್ದಾರೆ.

ಹಾಗೆ, ಮತ್ತೊಬ್ಬರು ಬಳಕೆದಾರರು “ಶವರ್ ಸೌಲಭ್ಯದೊಂದಿಗೆ ಮೊದಲನೇ ಎಸಿ ರೈಲು? ಅದರಲ್ಲಿ ತಪ್ಪೇನಿದೆ." "ವಂದೇ ಭಾರತ್ ಅನ್ನು ಮಳೆ ನೀರು ಕೊಯ್ಲು ಜೊತೆಗೆ ಸೇರಿಸಲಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ. "@ಅಶ್ವಿನಿ ವೈಷ್ಣವ್- ರೈಲುಗಳಲ್ಲಿ ಉನ್ನತ ತಂತ್ರಜ್ಞಾನದ ಕೂಲಿಂಗ್ ವ್ಯವಸ್ಥೆಗೆ ಧನ್ಯವಾದಗಳು" ಎಂದೂ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: IRCTCಯನ್ನೂ ಅದಾನಿ ಸ್ವಾಧೀನಪಡಿಸಿಕೊಳ್ತಾರೆ ಎಂದ ಕಾಂಗ್ರೆಸ್‌: ರೈಲ್ವೆ ಬುಕಿಂಗ್ ಪ್ಲಾಟ್‌ಫಾರ್ಮ್‌ ತಿರುಗೇಟು

ಈ ವಿಡಿಯೋ ಹೆಚ್ಚು ವೈರಲ್‌ ಆಗುತ್ತಿದ್ದ ಆಗೆ, ಪಶ್ಚಿಮ ರೈಲ್ವೆ ಪ್ರತಿಕ್ರಿಯೆ ನೀಡಿದ್ದು, ಈ ಸಮಸ್ಯೆಯನ್ನು ತಕ್ಷಣವೇ ಹಾಜರುಪಡಿಸಲಾಗಿದೆ ಮತ್ತು ಆವಂತಿಕಾ ಎಕ್ಸ್‌ಪ್ರೆಸ್‌ನ ಎಲ್ಲಾ ಕೋಚ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಎಂದು ಹೇಳಿದೆ.

ಮುಂಬೈನಿಂದ ಇಂದೋರ್‌ಗೆ ಹೋಗುವ ಆವಂತಿಕಾ ಎಕ್ಸ್‌ಪ್ರೆಸ್‌ನ ಎಸಿ ವೆಂಟ್‌ಗಳಿಂದ ಮಳೆ ನೀರು ಸೋರಿಕೆಯಾಗುತ್ತಿರುವುದನ್ನು ವೈರಲ್ ವಿಡಿಯೋ ತೋರಿಸಿದ ನಂತರ ರೈಲ್ವೆ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ. ಎರಡು ಹಂತದ ಕೋಚ್‌ನ ಸೀಲಿಂಗ್‌ನಿಂದ ಬರ್ತ್‌ಗಳು ಮತ್ತು ನೆಲದ ಮೇಲೆ ನೀರು ಬೀಳುತ್ತಿರುವ ನಡುವೆ ವಯಸ್ಸಾದ ಪುರುಷ ಪ್ರಯಾಣಿಕರು ಕೆಳಗಿನ ಬರ್ತ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಪ್ರಯಾಣಿಕರೇ ಹುಷಾರ್‌: ರೈಲಲ್ಲಾಗುವ ಕಳ್ಳತನಕ್ಕೆ ರೈಲ್ವೆ ಇಲಾಖೆ ಜವಾಬ್ದಾರಿಯಲ್ಲ ಎಂದ ಸುಪ್ರೀಂಕೋರ್ಟ್‌

“ಎಲ್ಲಾ ಆವಂತಿಕಾ ಎಕ್ಸ್‌ಪ್ರೆಸ್ ಕೋಚ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಮತ್ತು ಸಮಸ್ಯೆಯನ್ನು ತ್ವರಿತವಾಗಿ ಹಾಜರುಪಡಿಸಲಾಗಿದೆ. ರೈಲು ತನ್ನ ರಿಟರ್ನ್‌ ಜರ್ನಿ ಪ್ರಾರಂಭಿಸಿದೆ, ಈಗ ಅಂತಹ ಯಾವುದೇ ಸಮಸ್ಯೆಗಳಿಲ್ಲ ”ಎಂದು ಪಶ್ಚಿಮ ರೈಲ್ವೆ ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದು,  ನೀರಿನ ಸೋರಿಕೆಯ ಸುದ್ದಿ ವರದಿಗೆ ಪ್ರತಿಕ್ರಿಯಿಸಿದೆ. ಹಾಗೆ, "ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮತ್ತು ಪ್ರಯಾಣಿಕರ ಕುಂದುಕೊರತೆಗಳನ್ನು ಪರಿಹರಿಸಲು ಪಶ್ಚಿಮ ರೈಲ್ವೆ ಯಾವುದೇ ಕಲ್ಲನ್ನು ಬಿಡುವುದಿಲ್ಲ." ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು, ಮೈಸೂರಿನಿಂದ ಹೊರಡುವ ಟ್ರೈನ್‌ ಸೇರಿದಂತೆ ಈ 15 ರೈಲುಗಳ ಸೇವೆ ತಾತ್ಕಾಲಿಕ ಸ್ಥಗಿತ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ