Published : Jul 12, 2025, 07:46 AM ISTUpdated : Jul 12, 2025, 10:23 PM IST

India News Live: ರಾತ್ರೋರಾತ್ರಿ ಗಂಡನ ಕೈಚಳಕಕ್ಕೆ ಪತ್ನಿ ಶಾಕ್; ಗೌರವ ಉಳಿಸಿಕೊಳ್ಳಲು ಕಳ್ಳನ ನೇಮಿಸಿದ ಹೆಂಡ್ತಿ!

ಸಾರಾಂಶ

ಬೆಂಗಳೂರು (ಜುಲೈ 12): ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನದ ಭೀಕರ ದುರಂತಕ್ಕೆ ಇಂಧನ ಸ್ವಿಚ್‌ ಆಫ್‌ ಆಗಿದ್ದೇ ಕಾರಣ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಟೇಕ್‌ಆಫ್‌ ಆದ ಕೆಲವೇ ಸೆಕೆಂಡ್‌ಗಳಲ್ಲಿ ಇಂಧನ ಸ್ವಿಚ್‌ಗಳು ಆಫ್‌ ಆದವು. ಕೂಡಲೇ ಒಬ್ಬ ಪೈಲಟ್‌, 'ಏಕೆ ಆಫ್‌ ಮಾಡಿದೆ' ಎಂದು ಕೇಳುತ್ತಾರೆ. 'ನಾನು ಮಾಡಿಲ್ಲ' ಎಂದು ಮತ್ತೊಬ್ಬರು ಹೇಳಿರುವುದು ವಿಮಾನದಲ್ಲಿ ರೆಕಾರ್ಡ್‌ ಆಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:23 PM (IST) Jul 12

ರಾತ್ರೋರಾತ್ರಿ ಗಂಡನ ಕೈಚಳಕಕ್ಕೆ ಪತ್ನಿ ಶಾಕ್; ಗೌರವ ಉಳಿಸಿಕೊಳ್ಳಲು ಕಳ್ಳನ ನೇಮಿಸಿದ ಹೆಂಡ್ತಿ!

ಮೊಬೈಲ್ ಕಳ್ಳತನ ಪ್ರಕರಣವೊಂದು ಅನೈತಿಕ ಸಂಬಂಧವನ್ನು ಬಯಲು ಮಾಡಿದೆ. ಗಂಡನ ಮೊಬೈಲ್‌ನಲ್ಲಿದ್ದ ಗೆಳೆಯನೊಂದಿಗಿನ ಖಾಸಗಿ ಫೋಟೋಗಳನ್ನು ಅಳಿಸಲು ಪತ್ನಿಯೇ ಕಳ್ಳತನ ಮಾಡಿಸಿದ್ದಾಳೆ.

Read Full Story

07:25 PM (IST) Jul 12

ಭಾರತೀಯ ಮೂಲದ ವರುಣ್ ಗೂಗಲ್‌ನ 2.4 ಬಿಲಿಯನ್ AI ಹೂಡಿಕೆ ಹೇಗೆ ತಮ್ಮದಾಗಿಸಿಕೊಂಡರು, ಶೈಕ್ಷಣಿಕ ಅರ್ಹತೆಯೇನು?

ವರುಣ್ ಮೋಹನ್, ವಿಂಡ್‌ಸರ್ಫ್ ಸಹ-ಸ್ಥಾಪಕ, ಗೂಗಲ್‌ನೊಂದಿಗೆ $2.4 ಬಿಲಿಯನ್ ಒಪ್ಪಂದ ಮಾಡಿಕೊಂಡಿದ್ದಾರೆ. MIT ಪದವೀಧರರಾದ ಮೋಹನ್, AI-ಚಾಲಿತ ಡೆವಲಪರ್ ಸಾಧನಗಳನ್ನು ಕ್ರಾಂತಿಗೊಳಿಸುತ್ತಿದ್ದಾರೆ.  

Read Full Story

06:57 PM (IST) Jul 12

ಸ್ಮಶಾನದ ಪೊದೆಯಲ್ಲಿ ಕಾರ್; ಜನರನ್ನ ನೋಡ್ತಿದ್ದಂತೆ ಚಡ್ಡಿ ಸರಿ ಮಾಡಿಕೊಳ್ಳುತ್ತಾ ಬಂದ BJP ನಾಯಕ

ಬಿಜೆಪಿ ಮುಖಂಡ ರಾಹುಲ್ ವಾಲ್ಮೀಕಿ ವಿವಾಹಿತ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೋ ವೈರಲ್ ಆಗಿದೆ.  ಕ್ಷಮೆ ಕೇಳಿರುವ ವಿಡಿಯೋ ಕೂಡ ಹರಿದಾಡುತ್ತಿದೆ. ಇದೇ ರೀತಿಯ ಘಟನೆಗಳು ಮಧ್ಯಪ್ರದೇಶದಲ್ಲೂ ವರದಿಯಾಗಿವೆ.

Read Full Story

06:48 PM (IST) Jul 12

ದೇಶದ ಪ್ರಭಾವಿ ಮಹಿಳೆಯರು ಕಲಿತ ಈ ಬಾಲಕಿಯರ ಶಾಲೆಯ ಯಶಸ್ಸಿನ ಗುಟ್ಟೇನು?

ಡೆಹ್ರಾಡೂನ್‌ನಲ್ಲಿರುವ ವೆಲ್ಹ್ಯಾಮ್ ಬಾಲಕಿಯರ ಶಾಲೆ, ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ರಾಜಕೀಯ, ಚಿತ್ರರಂಗ, ಮತ್ತು ಇತರ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಬೆಳೆಸಿದ ಈ ಶಾಲೆಯ ವಿಶೇಷತೆಗಳೇನು?
Read Full Story

06:12 PM (IST) Jul 12

ಅಹಮದಾಬಾದ್ ವಿಮಾನ ದುರಂತದ ವರದಿಯನ್ನು ಪ್ರಶ್ನಿಸಿದ ಪೈಲಟ್‌ಗಳ ಸಂಘ ALPA

ಏರ್ ಇಂಡಿಯಾ ಫ್ಲೈಟ್ 171ರ ಪ್ರಾಥಮಿಕ ತನಿಖಾ ವರದಿಯ ನಂತರ, ಭಾರತೀಯ ಪೈಲಟ್‌ಗಳ ಸಂಘ (ALPA ಇಂಡಿಯಾ) AAIB ಮೇಲೆ ಪಕ್ಷಪಾತದ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದೆ. 

Read Full Story

03:50 PM (IST) Jul 12

2025ರಲ್ಲಿಯೇ 15 ಸಾವಿರ ಉದ್ಯೋಗಿಗಳ ವಜಾ ಮಾಡಿದ ಮೈಕ್ರೋಸಾಫ್ಟ್‌, ಕೆಲಸದಲ್ಲಿ ಉಳಿಯಲು AI ಜ್ಞಾನ ಕಡ್ಡಾಯ!

2025 ರಲ್ಲಿ ಎರಡು ಹಂತಗಳಲ್ಲಿ 15,000 ಉದ್ಯೋಗಿಗಳನ್ನು ಅಮೇರಿಕನ್ ಟೆಕ್ ದೈತ್ಯ ಮೈಕ್ರೋಸಾಫ್ಟ್ ವಜಾಗೊಳಿಸಿದೆ

Read Full Story

03:37 PM (IST) Jul 12

ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಬೆಂಗಳೂರು ಮಹಿಳೆ! ಹಣ ಬಂದದ್ದೆಲ್ಲಿಂದ?

ಬೆಂಗಳೂರಿನ ಮಹಿಳೆಯೊಬ್ಬರ ಅಜ್ಜ 20 ವರ್ಷಗಳ ಹಿಂದೆ ಮಾಡಿದ ಹೂಡಿಕೆ ಅವರಿಗೆ ಕೋಟಿ ಕೋಟಿ ಲಾಭ ತಂದುಕೊಟ್ಟಿದೆ. ಲಾರ್ಸನ್ & ಟೂಬ್ರೋ ಕಂಪನಿಯ ಷೇರುಗಳು ಬೋನಸ್ ಮತ್ತು ವಿಭಜನೆಯಿಂದಾಗಿ ಹೆಚ್ಚಾಗಿ, ಮೊಮ್ಮಗಳಿಗೆ ₹1.72 ಕೋಟಿ ಸಿಕ್ಕಿದೆ.
Read Full Story

03:27 PM (IST) Jul 12

ಭಾರತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಬೆಳ್ಳಿ ಬೆಲೆ!

ಭಾರತದಲ್ಲಿ ಬೆಳ್ಳಿಯ ಬೆಲೆಗಳು ಹೆಚ್ಚಾಗಿ ಅಂತರರಾಷ್ಟ್ರೀಯ ದರಗಳನ್ನು ಅನುಸರಿಸುತ್ತವೆ. ಅವು ರೂಪಾಯಿ-ಡಾಲರ್ ವಿನಿಮಯ ದರವನ್ನೂ ಅವಲಂಬಿಸಿರುತ್ತದೆ. ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಂಡರೆ ಮತ್ತು ಜಾಗತಿಕ ಬೆಲೆಗಳು ಸ್ಥಿರವಾಗಿದ್ದರೆ, ಭಾರತೀಯ ಖರೀದಿದಾರರಿಗೆ ಬೆಳ್ಳಿ ದುಬಾರಿಯಾಗುತ್ತದೆ.

 

Read Full Story

02:59 PM (IST) Jul 12

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಇಸ್ಲಾಂ, 10 ವರ್ಷಗಳಲ್ಲಿ ಜಗತ್ತಿನಲ್ಲಿ ಮುಸ್ಲಿಂ ಜನಸಂಖ್ಯೆ 34.7 ಕೋಟಿ ಹೆಚ್ಚಳ!

2010 ಮತ್ತು 2020 ರ ನಡುವೆ ಜಾಗತಿಕ ಮುಸ್ಲಿಂ ಜನಸಂಖ್ಯೆಯು 347 ಮಿಲಿಯನ್ ಜನರಿಂದ ಹೆಚ್ಚಾಗಿದೆ, ಇದು ಜಾಗತಿಕ ಧಾರ್ಮಿಕ ಭೂದೃಶ್ಯದಲ್ಲಿ ಗಮನಾರ್ಹ ಜನಸಂಖ್ಯಾ ಬದಲಾವಣೆಯನ್ನು ರೂಪಿಸಿದೆ.

 

Read Full Story

02:06 PM (IST) Jul 12

ಭಾರತದಲ್ಲಿ ಎಕ್ಸ್‌ Subscription Fees ಭಾರೀ ಇಳಿಕೆ ಮಾಡಿದ ಎಲಾನ್‌ ಮಸ್ಕ್‌!

ಸೋಶಿಯಲ್‌ ಮೀಡಿಯಾ ವೇದಿಕೆ ಮೊಬೈಲ್ ಅಪ್ಲಿಕೇಶನ್‌ನ ಪ್ರೀಮಿಯಂ ಖಾತೆ ಚಂದಾದಾರಿಕೆ ಶುಲ್ಕವನ್ನು ಸುಮಾರು ಶೇ. 48 ರಷ್ಟು ಕಡಿತಗೊಳಿಸಿ, ಮಾಸಿಕ ಆಧಾರದ ಮೇಲೆ ಈ ಹಿಂದೆ ವಿಧಿಸುತ್ತಿದ್ದ 900 ರೂ.ಗಳಿಂದ 470 ರೂ.ಗಳಿಗೆ ಇಳಿಸಿದೆ.

 

Read Full Story

01:05 PM (IST) Jul 12

ಜಗತ್ತಿನ 10 ಅತಿದೊಡ್ಡ ಬ್ಯಾಂಕ್‌ಗಳು, ಲಿಸ್ಟ್‌ನಲ್ಲೇ ಇಲ್ಲ ಎಸ್‌ಬಿಐ, ಎಚ್‌ಡಿಎಫ್‌ಸಿ..!

ಜಾಗತಿಕ ಬ್ಯಾಂಕಿಂಗ್ ದೈತ್ಯ ಸಂಸ್ಥೆಗಳಿಗೆ ಹೋಲಿಸಿದರೆ ಭಾರತೀಯ ಬ್ಯಾಂಕುಗಳ ಆಸ್ತಿ ಗಾತ್ರ ತೀರಾ ಕಡಿಮೆ ಎಂದು ಹೋಲಿಕೆ ತೋರಿಸುತ್ತದೆ. ಚೀನಾದ ಐಸಿಬಿಸಿ ಬ್ಯಾಂಕ್ ಭಾರತದ ಎಸ್‌ಬಿಐಗಿಂತ 12 ಪಟ್ಟು ಹೆಚ್ಚು ಆಸ್ತಿ ಹೊಂದಿದೆ. 

Read Full Story

01:04 PM (IST) Jul 12

ಏರ್‌ಇಂಡಿಯಾ ದುರಂತ, ಆ 98 ಸೆಕೆಂಡುಗಳಲ್ಲಿ ನಡೆದಿದ್ದೇನು? ಇಲ್ಲಿದೆ ಪಿನ್ ಟು ಪಿನ್ ಮಾಹಿತಿ

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ AI171 ವಿಮಾನ ಅಪಘಾತದ 98 ಸೆಕೆಂಡುಗಳ ಘಟನಾವಳಿಗಳನ್ನು ಪ್ರಾಥಮಿಕ ವರದಿ ವಿವರಿಸುತ್ತದೆ. ಎಂಜಿನ್ ಸ್ಥಗಿತದಿಂದಾಗಿ 260 ಜನರು ಸಾವನ್ನಪ್ಪಿದ ಈ ದುರಂತದ ಕ್ಷಣ ಕ್ಷಣದ ವಿವರಗಳನ್ನು ವರದಿ ಒಳಗೊಂಡಿದೆ.
Read Full Story

12:11 PM (IST) Jul 12

Air India Crash Report Take Aways - AAIB 15 ಪುಟದ ವರದಿಯ ಮಿಸ್‌ ಮಾಡಲೇಬಾರದ ಅಂಶಗಳು

ಜೂನ್ 12 ರಂದು, AI171 ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟಿತ್ತು. ಆದರೆ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕ್ ಆಫ್ ಆದ ಕೆಲವು ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು, ಒಬ್ಬ ಪ್ರಯಾಣಿಕರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದರು.

 

Read Full Story

11:32 AM (IST) Jul 12

Air India Crash Report - ಸಹ ಪೈಲಟ್‌ನ ನಿಯಂತ್ರಣದಲ್ಲಿತ್ತು ವಿಮಾನ, ಮೇಲ್ವಿಚಾರಣೆ ಮಾಡುತ್ತಿದ್ದ ಪೈಲಟ್‌!

ಏರ್ ಇಂಡಿಯಾ ವಿಮಾನ ಅಪಘಾತದ ಆರಂಭಿಕ ತನಿಖಾ ವರದಿ ಹೊರಬಿದ್ದಿದೆ. ವಿಮಾನ ಹಾರಾಟ ನಡೆಸುವ ಸಮಯದಲ್ಲಿ, ಸಹ-ಪೈಲಟ್ ವಿಮಾನವನ್ನು ಹಾರಿಸುತ್ತಿದ್ದರು ಮತ್ತು ಕ್ಯಾಪ್ಟನ್ ಅದನ್ನು ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

 

Read Full Story

09:55 AM (IST) Jul 12

AAIB ರಿಪೋರ್ಟ್‌ ಬೆನ್ನಲ್ಲೇ ಹೇಳಿಕೆ ರಿಲೀಸ್‌ ಮಾಡಿದ ಬೋಯಿಂಗ್‌!

ಏರ್ ಇಂಡಿಯಾ ಡ್ರೀಮ್‌ಲೈನರ್‌ನಲ್ಲಿ ವಿಮಾನದ ಮಧ್ಯೆ ಇಂಧನ ಕಡಿತದ ಬಗ್ಗೆ ಪ್ರಾಥಮಿಕ ವರದಿಗಳು ಸೂಚಿಸಿವೆ.

 

Read Full Story

09:01 AM (IST) Jul 12

'ಮಾತೃ ಭಾಷೆ ನಮ್ಮ ತಾಯಿಯಂತೆ, ಹಿಂದಿ ನಮ್ಮ ಅಜ್ಜಿ ಇದ್ದಂತೆ' - ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಹಿಂದಿ ಭಾಷೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹಿಂದಿ ಕಲಿಕೆಯಿಂದ ಯುವಜನರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿಯನ್ನು ತಿರಸ್ಕರಿಸುವುದು ಭವಿಷ್ಯದ ಅವಕಾಶಗಳಿಗೆ ಮಾರಕ ಎಂದಿದ್ದಾರೆ.
Read Full Story

08:39 AM (IST) Jul 12

ಅಹಮದಾಬಾದ್‌ ಏರ್‌ ಇಂಡಿಯಾ ಕ್ರ್ಯಾಶ್‌ ಬಗ್ಗೆ AAIB ರಿಪೋರ್ಟ್‌ ಬಿಡುಗಡೆ, ಚಿತ್ರಗಳ ಜೊತೆ ಪೂರ್ಣ ಮಾಹಿತಿ!

ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪ್ರಾಥಮಿಕ ಸಂಗತಿಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಈ ದಾಖಲೆಯನ್ನು ಸಿದ್ಧಪಡಿಸಲಾಗಿದೆ. ಮಾಹಿತಿಯು ಪ್ರಾಥಮಿಕವಾಗಿದ್ದು ಬದಲಾವಣೆಗೆ ಒಳಪಟ್ಟಿರುತ್ತದೆ.

 

Read Full Story

07:50 AM (IST) Jul 12

ಏರ್‌ ಇಂಡಿಯಾ ಪತನಕ್ಕೆ ಇಂಧನ ಸ್ವಿಚ್ಚಾಫ್‌ ಕಾರಣ

ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯು ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ.

 

Read Full Story

07:50 AM (IST) Jul 12

ಅಮೆರಿಕದಲ್ಲಿ ಟ್ರಂಪ್‌ ಉದ್ಯೋಗ ಕಡಿತ ಪರ್ವ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಸರ್ಕಾರಿ ವ್ಯವಸ್ಥೆಯಲ್ಲಿ ವೆಚ್ಚ ಕಡಿತ ಆಂದೋಲನ ಆರಂಭಿಸಿದ್ದಾರೆ. ಇದರ ಅಂಗವಾಗಿ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ವಜಾಗೊಳಿಸಲು ವಿದೇಶಾಂಗ ಇಲಾಖೆ ಮುಂದಾಗಿದೆ.

 

Read Full Story

07:49 AM (IST) Jul 12

ಪಾಕ್‌ಗೆ ದೋವಲ್‌ ದಿಟ್ಟ ಸವಾಲು

ಪಾಕಿಸ್ತಾನ ಹೇಳಿಕೆಗೆ ಸಾಕ್ಷಿಯಾಗಿ ಭಾರತಕ್ಕೆ ಆದ ಒಂದೇ ಒಂದು ಹಾನಿಯ ಫೋಟೋ ತೋರಿಸಲಿ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸವಾಲು ಹಾಕಿದ್ದಾರೆ.

 

Read Full Story

07:49 AM (IST) Jul 12

ತಾಯಿ ಮಾಡಿದ ಮನೆಯೂಟ ಸವಿಯಲು ಕಾದಿರುವೆ : ಶುಭಾಂಶು

ಐದಾರು ವರ್ಷಗಳಿಂದ ವಿದೇಶದಲ್ಲಿದ್ದ ಕಾರಣ ಮನೆಯೂಟ ಸವಿಯಲು ಸಾಧ್ಯವಾಗಿಲ್ಲ. ಬಾಹ್ಯಾಕಾಶ ಕೇಂದ್ರದಿಂದ ವಾಪಸಾದ ಕೂಡಲೇ ತಾಯಿ ಮಾಡಿದ ಅಡುಗೆ ಸವಿಯಲು ಕಾತರನಾಗಿರುವೆ ಎಂದು ಜು.14ರಂದು ಅಂತರಿಕ್ಷದಿಂದ ವಾಪಸಾಗುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಿಳಿಸಿದ್ದಾರೆ.

 

Read Full Story

07:48 AM (IST) Jul 12

ಜನರ ಚುಚ್ಚು ಮಾತಿಗೆ ಬೇಸತ್ತು ರಾಧಿಕಾ ಕೊಂದ ತಂದೆ

ಹರ್ಯಾಣದ ಗುರುಗ್ರಾಮದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರ ಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಕೌಟುಂಬಿಕ ಕಲಹವೇ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಮಗಳ ರೀಲ್ಸ್ ಹುಚ್ಚು, ಜನರ ಚುಚ್ಚು ಮಾತು ತಂದೆ ದೀಪಕ್‌ ಯಾದವ್‌ನನ್ನು ಕೆರಳಿಸಿತ್ತು.

 

Read Full Story

07:48 AM (IST) Jul 12

ಬಿಹಾರದಲ್ಲೂ ಬಿಜೆಪಿ ಚುನಾವಣಾ ಹೈಜಾಕ್ ಯತ್ನ : ರಾಹುಲ್‌

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ರಾಜಕೀಯ ಜಟಾಪಟಿ ಮುಂದುವರೆದಿದ್ದು, ‘ ಬಿಜೆಪಿ ಮಹಾರಾಷ್ಟ್ರದಲ್ಲಿ ನಡೆಸಿದಂತೆ ಬಿಹಾರದಲ್ಲಿಯೂ ಚುನಾವಣೆ ಹೈಜಾಕ್ ಮಾಡಲು ಯತ್ನಿಸುತ್ತಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

 

Read Full Story

07:47 AM (IST) Jul 12

1 ಬಿಟ್‌ ಕಾಯಿನ್‌ ಬೆಲೆ ₹1 ಕೋಟಿ : ದಾಖಲೆ

ಕ್ರಿಪ್ಟೋಕರೆನ್ಸಿಯು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ 1 ಬಿಟ್‌ಕಾಯಿನ್‌ ಬೆಲೆ 1 ಕೋಟಿ ರು. ದಾಟಿದೆ. 2010ರಲ್ಲಿ ಕೇವಲ 34 ರು. ಇದ್ದ 1 ಬಿಟ್‌ಕಾಯಿನ್‌ ಬೆಲೆಯು 2025ರಲ್ಲಿ 1 ಕೋಟಿ ರು. ದಾಟಿದೆ.

 

Read Full Story

07:47 AM (IST) Jul 12

12 ಮರಾಠಾ ಕೋಟೆ ವಿಶ್ವಪರಂಪರೆ ಪಟ್ಟಿಗೆ

024-5ನೇ ಸಾಲಿನ ಯುನೆಸ್ಕೋ ವಿಶ್ವಪರಂಪರೆ ಪಟ್ಟಿ ಘೋಷಣೆ ಆಗಿದ್ದು, ಇದರಲ್ಲಿ ‘ಮರಾಠಾ ಸೇನಾ ಭೂದೃಶ್ಯಗಳು’ ಎಂದೇ ಖ್ಯಾತಿ ಪಡೆದಿರುವ 12 ಐತಿಹಾಸಿಕ ಮರಾಠಾ ಕೋಟೆಗಳು ಸ್ಥಾನ ಪಡೆದುಕೊಂಡಿವೆ.

 

Read Full Story

More Trending News