Published : Oct 09, 2025, 07:48 AM ISTUpdated : Oct 09, 2025, 10:44 PM IST

India News Live: Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ

ಸಾರಾಂಶ

ನವದೆಹಲಿ (ಅ.9): 156 ವರ್ಷ ಹಳೆಯ ಟಾಟಾ ಸಮೂಹದಲ್ಲಿ ಅಧಿಕಾರದ ಕಿತ್ತಾಟ ಶುರುವಾಗಿದೆ. ಟಾಟಾ ಸನ್ಸ್ ನಿರ್ದೇಶಕರ ನೇಮಕ ವಿಚಾರದಲ್ಲಿ ಟಾಟಾ ಟ್ರಸ್ಟ್‌ನಲ್ಲಿ ನೊಯೆಲ್ ಟಾಟಾ ಮತ್ತು ಮೆಹ್ಲಿ ಮಿಸ್ತ್ರಿ ಬಣಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು, ದೇಶದ ಆರ್ಥಿಕತೆಯ ಮೇಲಿನ ಪರಿಣಾಮದ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯಪ್ರವೇಶಿಸಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:44 PM (IST) Oct 09

Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ

ಹಿಂದಿ ಬಿಗ್‌ಬಾಸ್‌ ಸೀಸನ್‌ 4ರಲ್ಲಿ ಅಲಿ ಮರ್ಚೆಂಟ್‌ರನ್ನು ಮದುವೆಯಾಗಿದ್ದ ನಟಿ ಸಾರಾ ಖಾನ್, ಶೋ ಮುಗಿದ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆದಿದ್ದರು. ಇದೀಗ 15 ವರ್ಷಗಳ ಬಳಿಕ, ಸಾರಾ ಖಾನ್ ತಮಗಿಂತ ನಾಲ್ಕು ವರ್ಷ ಚಿಕ್ಕವರಾದ ನಟ ಮತ್ತು ನಿರ್ಮಾಪಕ ಕ್ರಿಶ್ ಪಾಠಕ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ.
Read Full Story

09:00 PM (IST) Oct 09

ಜಾನ್ಸನ್ & ಜಾನ್ಸನ್ ಪೌಡರ್‌ನಿಂದ ಕ್ಯಾನ್ಸರ್‌ - ಮತ್ತೊಂದು ಕೇಸ್‌- 80 ಬಿಲಿಯನ್‌ ರೂ. ದಂಡಕ್ಕೆ ಕೋರ್ಟ್ ಆದೇಶ

ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರ ಕುಟುಂಬವು ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ, ಕ್ಯಾಲಿಫೋರ್ನಿಯಾ ನ್ಯಾಯಾಲಯವು ಕಂಪನಿಗೆ ಸುಮಾರು 80 ಬಿಲಿಯನ್ ರೂಪಾಯಿಗಳಷ್ಟು ಭಾರಿ ದಂಡವನ್ನು ವಿಧಿಸಿದೆ.  

Read Full Story

08:08 PM (IST) Oct 09

ಕೆಲಸ ಹುಡುಕುವವರಿಗೆ ಗುಡ್ ನ್ಯೂಸ್, ಲಿಂಕ್ಡ್‌ಇನ್‌ನಲ್ಲಿ ಸ್ಯಾಲರಿ ನಿರೀಕ್ಷೆ, ನೋಟಿಸ್ ಪೀರಿಯೆಡ್‌ಗೆ ಅವಕಾಶ

ಕೆಲಸ ಹುಡುಕುವವರಿಗೆ ಗುಡ್ ನ್ಯೂಸ್, ಲಿಂಕ್ಡ್‌ಇನ್‌ನಲ್ಲಿ ಸ್ಯಾಲರಿ ನಿರೀಕ್ಷೆ, ನೋಟಿಸ್ ಪೀರಿಯೆಡ್‌ಗೆ ಅವಕಾಶ ನೀಡಲಾಗಿದೆ. ಓಪನ್ ಟು ವರ್ಕ್ ಆಯ್ಕೆ ಬಳಸುವವರು ತಮ್ಮ ವಾರ್ಷಿಕ ವೇತನ ನಿರೀಕ್ಷೆ, ನೋಟಿಸ್ ಪೀರಿಯೆಡ್ ದಿನಗಳ ಕುರಿತು ಉಲ್ಲೇಖಿಸಲು ಅವಕಾಶ ನೀಡಲಾಗಿದೆ.

Read Full Story

07:07 PM (IST) Oct 09

ಹೊಟ್ಟೆಯಿಂದ ಹೊರಗೆ ಬಂದಿದ್ಹೇಗೆ ಕೇಳಿದ ಮಗು - ನಿಜ ತಿಳಿಸಿದರೂ ಒಪ್ಪಲು ಸಿದ್ದಳಿಲ್ಲದ ಮಗುವಿನ ವೀಡಿಯೋ

Birth secret: ಪುಟ್ಟ ಮಕ್ಕಳಿಗಿರುವ ಸಾಮಾನ್ಯ ಡೌಟ್ ಎಂದರೆ ಅಮ್ಮನ ಹೊಟ್ಟೆಯಿಂದಹೊರಗೆ ಬಂದಿದ್ದು ಹೇಗೆ ಎಂಬುದು? ಈ ಪ್ರಶ್ನೆಯನ್ನು ಬಹುತೇಕ ಮಕ್ಕಳು ಕೇಳಿಯೇ ಕೇಳಿರುತ್ತಾರೆ. ಪೋಷಕರು ಇದಕ್ಕೆ ಏನೇನೋ ಸುಳ್ಳು ಹೇಳುತ್ತಾರೆ. ಇಲ್ಲೊಬ್ಬರು ತಾಯಿ ಸತ್ಯ ಹೇಳಿದ್ದಾಳೆ ಇದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು?

Read Full Story

06:45 PM (IST) Oct 09

ಲೀವ್ ಇನ್ ರಿಲೇಶನ್‌ಶಿಪ್‌ನಿಂದ ದೂರವಿರಿ, ಇಲ್ಲಾ 50 ಪೀಸ್ ಆಗ್ತೀರಿ, ಯುಪಿ ರಾಜ್ಯಪಾಲೆ ಎಚ್ಚರಿಕೆ

ಲೀವ್ ಇನ್ ರಿಲೇಶನ್‌ಶಿಪ್‌ನಿಂದ ದೂರವಿರಿ, ಇಲ್ಲಾ 50 ಪೀಸ್ ಆಗ್ತೀರಿ, ಯುಪಿ ರಾಜ್ಯಪಾಲರ ಎಚ್ಚರಿಕೆ ನೀಡಿದ್ದಾರೆ. ಹುಡುಗಿಯರಿಗೆ ನೀಡಿದ ಎಚ್ಚರಿಕೆ ಮಾತು ಇದೀಗ ವಿವಾದಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಯುಪಿ ರಾಜ್ಯಪಾಲೆ ಹೇಳಿದ್ದೇನು?

Read Full Story

05:41 PM (IST) Oct 09

ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್, ಅಂತಾರಾಜ್ಯ ರೈಲಿಗೆ ಕೇಂದ್ರದ ಅನುಮೋದನೆ

ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್, ಅಂತಾರಾಜ್ಯ ರೈಲಿಗೆ ಕೇಂದ್ರದ ಅನುಮೋದನೆ ಸಿಕ್ಕಿದೆ. ಹೊಸ ವಂದೇ ಭಾರತ್ ರೈಲು ಬೆಂಗಳೂರಿನಿಂದ ಯಾವ ನಗರ ಸಂಪರ್ಕಿಸಲಿದೆ, ಯಾವಾಗ ನೂತನ ವಂದೇ ಭಾರತ್ ರೈಲು ಆರಂಭಗೊಳ್ಳುತ್ತಿದೆ?

Read Full Story

05:06 PM (IST) Oct 09

ದೀಪಾವಳಿ ಮುಹೂರ್ತ ಟ್ರೇಡಿಂಗ್ ಡೇಟ್ ಘೋಷಿಸಿದ NSE ಷೇರುಮಾರುಕಟ್ಟೆ, ಒಂದು ದಿನ ಮಾತ್ರ

ದೀಪಾವಳಿ ಮುಹೂರ್ತ ಟ್ರೇಡಿಂಗ್ ಡೇಟ್ ಘೋಷಿಸಿದ NSE ಷೇರುಮಾರುಕಟ್ಟೆ, ಒಂದು ದಿನ ಮಾತ್ರ ಇರಲಿದೆ. ಏನಿದು ಮುಹೂರ್ತ ಟ್ರೇಡಿಂಗ್, ಭಾರತೀಯ ಷೇರುಮಾರುಕಟ್ಟೆಯಲ್ಲಿರುವ ಈ ಸಂಪ್ರದಾಯ ಹೂಡಿಕೆದಾರರಿಗೆ ಶುಭವಾಗುವುದು ಹೇಗೆ?

Read Full Story

05:04 PM (IST) Oct 09

ಕಾಡಿನ ಮಧ್ಯೆ ಭೂಮಿಗಾಗಿ ಅಮ್ಮ ಮಗಳ ಭೀಕರ ಕಾಳಗ - ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ

Tiger Fight Caught on Camera: ಮನುಷ್ಯರು ದೊಡ್ಡವರಾಗುತ್ತಿದ್ದಂತೆ ಆಸ್ತಿಗಾಗಿ ಹೋರಾಡುವುದು ಪರಸ್ಪರ ಕಿತ್ತಾಡುವುದು ಸಾಮಾನ್ಯ.ಆದರೆ ಅಲ್ಲೊಂದು ಕಡೆ ಅಮ್ಮ ಮಗಳು ದಟ್ಟ ಕಾಡಿನ ನಡುವೆ ಭೀಕರ ಕಾಳಗಕ್ಕೆ ಇಳಿದಿದ್ದವು. ರಜೆ ಅಂತ ಕಾಡು ಸುತ್ತಲೂ ಬಂದವರು ಈ ಘೋರ ಕಾಳಗ ನೋಡಿ ದಂಗಾಗಿದ್ದರು.. ಮುಂದೇನಾಯ್ತು…

Read Full Story

04:14 PM (IST) Oct 09

ಬಿಳಿ ಮುಖ ಇಲ್ಲ, ಸ್ಲಂಗೆ ರೀತಿ ಇದೆ, ಭಾರತೀಯರಿರುವ ಬರ್ಮಿಂಗ್‌ಹ್ಯಾಂ ಕುರಿತು ಯುಕೆ ಸಂಸದನ ವಿವಾದ

ಬಿಳಿ ಮುಖ ಇಲ್ಲ, ಸ್ಲಂಗೆ ರೀತಿ ಇದೆ, ಭಾರತೀಯರಿರುವ ಬರ್ಮಿಂಗ್‌ಹ್ಯಾಂ ಕುರಿತು ಯುಕೆ ಸಂಸದನ ವಿವಾದ ಸೃಷ್ಟಿಸಿದ್ದಾರೆ. ಏಷ್ಯಾದ ಜನರೇ ಹೆಚ್ಚಿರುವ ಪ್ರದೇಶದ ಕುರಿತು ನಿಂದಿಸಿದ ಯುಕೆ ಸಂಸದನ ವಿರುದ್ದ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ.

Read Full Story

04:01 PM (IST) Oct 09

ಫೀಸ್ ಕಟ್ಟದ್ದಕ್ಕೆ ವಿದ್ಯಾರ್ಥಿಯನ್ನು ನೆಲದಲ್ಲಿ ಕೂರಿಸಿ ಪರೀಕ್ಷೆ ಬರೆಸಿದ ಶಾಲೆ

Humiliating Student Over Fees: ಪೋಷಕರು ಶಾಲಾ ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲೆಯಲ್ಲಿ ನೆಲದ ಮೇಲೆ ಕೂರಿಸಿ ಇತರ ಮಕ್ಕಳ ಮುಂದೆ ಅವಮಾನಿಸಿದಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಭಿವಾಂಡಿಯಲ್ಲಿ ಇರುವ ಸಲಾಹುದ್ದೀನ್ ಅಯ್ಯುಬಿ ಮೆಮೋರಿಯಲ್ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ.

Read Full Story

03:33 PM (IST) Oct 09

ಯುಪಿಐ ಬಳಸಿ ಎಟಿಎಂನಿಂದ ಹಣ ವಿಥ್‌ಡ್ರಾ, ಸ್ಮಾರ್ಟ್ ಗ್ಲಾಸಸ್ ಪಾವತಿ ಸೇರಿ ಹೊಸ ರೂಲ್ಸ್ ಜಾರಿ

ಯುಪಿಐ ಬಳಸಿ ಎಟಿಎಂನಿಂದ ಹಣ ವಿಥ್‌ಡ್ರಾ, ಸ್ಮಾರ್ಟ್ ಗ್ಲಾಸಸ್ ಪಾವತಿ ಸೇರಿ ಹೊಸ ರೂಲ್ಸ್ ಜಾರಿ, ಬಳಕೆದಾರರ ಪಾವತಿಯಲ್ಲಿ ಸುರಕ್ಷತೆ, ದೇಶಾದ್ಯಂತ ಅಡೆ ತಡೆ ಇಲ್ಲದೆ ಪಾವತಿ ಹಾಗೂ ವ್ಯವಹಾರಕ್ಕಾಗಿ ಮಹತ್ವದ ಅಪ್‌ಡೇಟ್ ಮಾಡಲಾಗಿದೆ. ಹೊಸ ರೂಲ್ಸ್ ಏನು?

Read Full Story

02:41 PM (IST) Oct 09

8ನೇ ಕ್ಲಾಸಲ್ಲಿ ಶಾಲೆ ಬಿಟ್ಟ 15ಕ್ಕೆ ಅಂಗಡಿ ತೆರೆದ - ಈಗ ದುಬೈನ ಬುರ್ಜ್ ಖಲೀಫಾದಲ್ಲಿ ವಾಸ

Living in Burj Khalifa: ಅನೇಕರು ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡ್ತಾರೆ. ಆದರೆ ಓದು ಮುಗಿದ ನಂತರ ಓದಿಗೆ ತಕ್ಕಂತೆ ಸರಿಯಾದ ಉದ್ಯೋಗ ಸಿಗದೆ ಪರದಾಡ್ತಿರ್ತಾರೆ. ಆದರೆ ಇಲ್ಲೊಬ್ಬರು 8ನೇ ಕ್ಲಾಸಲ್ಲಿ ಓದಿಗ ಗುಡ್‌ಬಾಯ್ ಹೇಳಿದ್ರು ಈಗ ಯಶಸ್ವಿ ಉದ್ಯಮಿ ಎನಿಸಿದ್ದಾರೆ ಅವರ ಯಶೋಗಾಥೆ ಇಲ್ಲಿದೆ..

Read Full Story

11:47 AM (IST) Oct 09

55 ವರ್ಷದ ಬಾಯ್‌ಫ್ರೆಂಡ್‌ ಜೊತೆ ಇರೋಕೆ ಟೈಮ್‌ ಸಿಗ್ತಿಲ್ಲ ಅಂತಾ ಗೂಗಲ್‌ನ 3.40 ಕೋಟಿ ವೇತನದ ಕೆಲಸ ತೊರೆದ 37 ವರ್ಷದ ಟೆಕ್ಕಿ!

37-Year-Old Google Techie Quits ₹3.4 Cr Salary to Spend Time With 55-Year-Old Boyfriend ಇತ್ತೀಚಿನ ದಿನಗಳಲ್ಲಿ ಜನರು ಕೋಟಿಗಟ್ಟಲೆ ಮೌಲ್ಯದ ಪ್ಯಾಕೇಜ್‌ಗಳ ಹಿಂದೆ ಓಡುತ್ತಿದ್ದಾರೆ, ಆದರೆ ಗೂಗಲ್‌ನ ಸೀನಿಯರ್ ಮ್ಯಾನೇಜರ್‌ 3.40 ಕೋಟಿ ರೂಪಾಯಿಗಳ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

 

Read Full Story

10:42 AM (IST) Oct 09

ವಿಮಾನದಲ್ಲಿ ಮಾಂಸಹಾರ ತಿನ್ನುವಂತೆ ಒತ್ತಾಯ - 85ರ ಸಸ್ಯಹಾರಿ ವೃದ್ಧ ಉಸಿರುಕಟ್ಟಿ ಸಾವು

vegetarian got Non Veg Meal: ಇಲ್ಲೊಂದು ಕಡೆ ಸಸ್ಯಹಾರಿ ವ್ಯಕ್ತಿಗೆ ವಿಮಾನದಲ್ಲಿ ಸಸ್ಯಹಾರ ಸಿಗದ ಕಾರಣ ಮಾಂಸಹಾರ ಸೇವಿಸುವಂತೆ ಹೇಳಿದ್ದರಿಂದ ಅವರು ಆಘಾತಗೊಂಡು ಸಾವನ್ನಪ್ಪಿದ್ದ ಘಟನೆ ಕತಾರ್ ಏರ್‌ವೇಸ್‌ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

Read Full Story

10:38 AM (IST) Oct 09

'ಅಮಿತ್‌ ಶಾ ಮೀರ್‌ ಜಾಫರ್‌ ಇದ್ದಂತೆ..' ಮೋದಿಗೆ ಎಚ್ಚರಿಕೆಯಿಂದ ಇರಿ ಎಂದ ಮಮತಾ ಬ್ಯಾನರ್ಜಿ!

Mamata Warns Modi Amit Shah Could Be Your Mir Jafar ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಅಮಿತ್ ಶಾ ಚುನಾವಣಾ ಆಯೋಗವನ್ನು ಚಾಣಾಕ್ಷತೆಯಿಂದ ಬಳಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

 

Read Full Story

10:17 AM (IST) Oct 09

ಬಿಹಾರದಲ್ಲಿ 25 ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ, ಬಿಜೆಪಿಗೆ ಚಿರಾಗ್‌ ಬಳಿಕ ಮಾಂಝಿ ಕಾಟ!

Bihar Polls Congress Finalises 25 Candidates; Manjhi Demands 15 Seats from NDA ಬಿಹಾರ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ 25 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

Read Full Story

10:04 AM (IST) Oct 09

ಮೂವರು ಸಾಧಕ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

Chemistry Nobel Prize Awarded to Three Scientists for Metal-Organic Frameworks ಮೆಟಲ್ ಆರ್ಗಾನಿಕ್ ಫೋಮ್‌ವರ್ಕ್ ಅಭಿವೃದ್ಧಿಗಾಗಿ ಪ್ರಶಸ್ತಿ ನೀಡಲಾಗಿದ್ದು, ಜಪಾನ್, ಆಸ್ಟ್ರೇಲಿಯಾ, ಅಮೆರಿಕದ ವಿಜ್ಞಾನಿಗಳಿಗೆ ಗೌರವ ಸಿಕ್ಕಿದೆ.

 

Read Full Story

09:08 AM (IST) Oct 09

21 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಪ್‌ ತಯಾರಿಸಿದ ಕಂಪನಿಯ ಮಾಲೀಕನ ಬಂಧನ!

Srisan Medicals Owner Ranganathan Arrested ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಇದು ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟವನ್ನು ತೀವ್ರಗೊಳಿಸಿತು. ರಂಗನಾಥನ್ ಬಂಧನವನ್ನು ಈಗ ತನಿಖೆಯಲ್ಲಿ ಮಹತ್ವದ ಪ್ರಗತಿ ಎಂದು ಪರಿಗಣಿಸಲಾಗುತ್ತಿದೆ.

 

Read Full Story

08:30 AM (IST) Oct 09

ನವೀ ಮುಂಬೈ ಹೊಸ ಏರ್‌ಪೋರ್ಟ್ 2 ದಾಖಲೆ

Navi Mumbai Airport Inaugurated ದೇಶದ ಮೊದಲ ಸಂಪೂರ್ಣ ಡಿಜಿಟಲ್ ಏರ್ ಪೋರ್ಟ್ ಇದಾಗಿದ್ದು, ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ ಎನಿಸಿಕೊಂಡಿದೆ. ನಿಲ್ದಾಣದ 1ನೇ ಹಂತಕ್ಕೆ ಮೋದಿ ಚಾಲನೆ ನೀಡಿದ್ದು,ಇದು ಮುಂಬೈನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

 

Read Full Story

08:01 AM (IST) Oct 09

ದೇಶದ ಎಲ್ಲಾ ಕೆಮ್ಮು ಸಿರಪ್‌ ತಪಾಸಣೆಗೆ ಕೇಂದ್ರ ಆದೇಶ!

CDSCO Orders Nationwide Cough Syrup Inspection After 20 Child Deaths in MP ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್‌ನಿಂದ 20 ಮಕ್ಕಳ ಸಾವಿನ ನಂತರ, ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ದೇಶಾದ್ಯಂತ ತಪಾಸಣೆಗೆ ಆದೇಶಿಸಿದೆ. 

Read Full Story

07:49 AM (IST) Oct 09

Noel Tata vs Mehli Mistry: ಟಾಟಾ ಟ್ರಸ್ಟ್‌ನಲ್ಲಿ ಅಧಿಕಾರದ ಕಿತ್ತಾಟ, ಮಧ್ಯ ಪ್ರವೇಶಿಸಿದ ಕೇಂದ್ರ ಸರ್ಕಾರ!

156 ವರ್ಷ ಹಳೆಯ ಟಾಟಾ ಸಮೂಹದಲ್ಲಿ ಅಧಿಕಾರದ ಕಿತ್ತಾಟ ಶುರುವಾಗಿದೆ. ಟಾಟಾ ಸನ್ಸ್ ನಿರ್ದೇಶಕರ ನೇಮಕ ವಿಚಾರದಲ್ಲಿ ಟಾಟಾ ಟ್ರಸ್ಟ್‌ನಲ್ಲಿ ನೊಯೆಲ್ ಟಾಟಾ ಮತ್ತು ಮೆಹ್ಲಿ ಮಿಸ್ತ್ರಿ ಬಣಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು, ದೇಶದ ಆರ್ಥಿಕತೆಯ ಮೇಲಿನ ಪರಿಣಾಮದ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯಪ್ರವೇಶಿಸಿದೆ.

 

Read Full Story

More Trending News