ಹೈದರಾಬಾದ್: 2023ರಲ್ಲಿ ಸಿಎಂ ಆದಾಗಿನಿಂದ ರೇವಂತ್ ವಿರುದ್ಧ ಕಾಂಗ್ರೆಸ್ನಲ್ಲಿ ಅಸಮಾಧಾನ ವ್ಯಕ್ತವಾಗಿರುವುದು ಇದೇ ಮೊದಲು. ಶುಕ್ರವಾರ ನಾಗರಕುರ್ನೂಲ್ ಜಿಲ್ಲೆಯಲ್ಲಿ ಮಾತನಾಡುತ್ತಿದ್ದ ಸಿಎಂ ರೆಡ್ಡಿ, ‘ನಾನೇ 10 ವರ್ಷ(2023-2034) ಮುಖ್ಯಮಂತ್ರಿಯಾಗಿ ಇರುತ್ತೇನೆ’ ಎಂದು ಹೇಳಿದ್ದರು. ಇದಕ್ಕೆ ನಲಗೊಂಡಾ ಜಿಲ್ಲೆಯ ಮನುಗೋಡೆ ಶಾಸಕ ರಾಜ್ ಗೋಪಾಲ್ ರೆಡ್ಡಿ ಪ್ರತಿಕ್ರಿಯಿಸಿ, ‘ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ನಲ್ಲಿ, ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ದೇಶನದಂತೆ ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗುತ್ತದೆ. ತೆಲಂಗಾಣವನ್ನು ಸ್ವಂತ ಸಾಮ್ರಾಜ್ಯವಾಗಿಸಿಕೊಳ್ಳಲು ನಿಜವಾದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅನುವು ಮಾಡಿಕೊಡುವುದಿಲ್ಲ’ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
10:57 PM (IST) Jul 20
ಒಂದು ಕುಟುಂಬ ನಿರಂತರ ಅನಾರೋಗ್ಯದಿಂದ ಬಳಲುತ್ತಿತ್ತು. ಔಷಧಿಗಳಿಂದಲೂ ಪರಿಹಾರ ಸಿಗದೇ ಕೊನೆಗೆ ಮನೆಗೆ ಸಿಸಿಟಿವಿ ಅಳವಡಿಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಯಿತು. ಹಾಗಿದ್ರೆ ಆ ಮನೆಯವವರಿಗೆ ಆಗಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ
08:51 PM (IST) Jul 20
ಮರಿಯೊಂದಿಗೆ ಬಂದ ಆನೆಯೊಂದು ಮೊಸಳೆಯನ್ನು ಜಿರಳೆಯನ್ನು ತುಳಿದಂತೆ ತುಳಿದು ಕೆರೆಯಿಂದ ಓಡಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
06:31 PM (IST) Jul 20
04:35 PM (IST) Jul 20
ಇಲ್ಲೊಬ್ಬರು ಎಂಆರ್ಐ ಸ್ಕ್ಯಾನ್ ಮಾಡಿಸುವುದಕ್ಕೆ ಪತ್ನಿಗೆ ಸಹಾಯ ಮಾಡಲು ಹೋದವರನ್ನು ಅವರ ಮೈ ಮೇಲಿದ್ದ ಲೋಹದ ಚೈನ್ನ ಕಾರಣಕ್ಕೆ ಎಂಆರ್ಐ ಸ್ಕ್ಯಾನಿಂಗ್ ಮೆಷಿನ್ ಅವರನ್ನು ಅಚಾನಕ್ ಆಗಿ ಒಳಗೆಳೆದುಕೊಂಡಿದ್ದು ಅವರು ಸಾವನ್ನಪ್ಪಿದ್ದಾರೆ.
03:29 PM (IST) Jul 20
ವಿಮಾನವೊಂದು ಆಕಾಶದಲ್ಲಿ ಹಾರುತ್ತಿದ್ದಾಗಲೇ ಅದರ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನದ ಸಿಬ್ಬಂದಿ ತುರ್ತು ಲ್ಯಾಂಡಿಂಗ್ ಮಾಡಿದ್ದು, ಪ್ರಯಾಣಿಕರ ಜೀವ ಉಳಿದಿದೆ.
02:16 PM (IST) Jul 20
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಕನ್ವರಿಯಾತ್ರಿಗಳು ಸಿಆರ್ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಟಿಕೆಟ್ ವಿಚಾರದಲ್ಲಿ ಆರಂಭವಾದ ವಾಗ್ವಾದ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
01:41 PM (IST) Jul 20
ಆಗಸ್ಟ್ 2ರಂದು ಭೂಮಿಯು ಶತಮಾನದ ಅತಿ ದೀರ್ಘ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಈ ಅಪರೂಪದ ಖಗೋಳ ವಿದ್ಯಮಾನವು 6 ನಿಮಿಷ 23 ಸೆಕೆಂಡುಗಳ ಕಾಲ ಇರುತ್ತದೆ. ಭೂಮಿಯ ಮೇಲಿನ ವಿವಿಧ ಖಂಡಗಳ ಕೋಟ್ಯಂತರ ಜನರು ಹಗಲು ಹೊತ್ತಿನಲ್ಲಿಯೇ ಕತ್ತಲೆಯ ಅನುಭವ ಪಡೆಯಬಹುದು.
12:56 PM (IST) Jul 20
ಪ್ರೇಯಸಿಯನ್ನು ಭೇಟಿಯಾಗಲು 760 ಕಿ.ಮೀ. ಪ್ರಯಾಣಿಸಿ ಬಂದ ಯುವಕ ಯುವತಿಯ ಮನೆಯ ಬಡಿದರೆ, ಬಾಗಿಲು ತೆರೆದಿದ್ದು ಮಾತ್ರ ಆಕೆಯ ಗಂಡ. ನನ್ನ ಭಾವಿ ಹೆಂಡತಿ ಎಂದು ಭೇಟಿ ಮಾಡಲು ಬಂದವನಿಗೆ ಆಕೆಗೆ ಮೊದಲೇ ಮದುವೆ ಆಗಿದೆ ಎಂಬುದನ್ನು ಕೇಳಿ ಬರಸಿಡಿಲು ಬಡಿದಂತಾಗಿದೆ. ಮುಂದೆ ಏನಾಯ್ತು ವೈರಲ್ ವಿಡಿಯೋ ನೋಡಿ.
12:44 PM (IST) Jul 20
ತೆರಿಗೆ ತಪ್ಪಿಸುವಿಕೆ ತಡೆಗೆ ಈ ಒಪ್ಪಂದ ಮಹತ್ವದ್ದಾಗಿದ್ದು, ಒಪ್ಪಂದವಾಗದಿದ್ದಲ್ಲಿ ಅಮೆರಿಕ ಭಾರತದ ಮೇಲೆ ಶೇ.26ರಷ್ಟು ತೆರಿಗೆ ವಿಧಿಸಬಹುದು. ಡಿಜಿಟಲ್ ಆರ್ಥಿಕತೆ, ಉನ್ನತ ತಂತ್ರಜ್ಞಾನ ವ್ಯಾಪಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ.
12:36 PM (IST) Jul 20
ರಾಜಸ್ಥಾನದ ಅಜ್ಮೀರ್ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ನೀರಿನಲ್ಲಿ ಪ್ರವಾಸಿಗರೊಬ್ಬರು ಕೊಚ್ಚಿಹೋದ ಘಟನೆ ನಡೆದಿದೆ. ಹಾಗೆಯೇ ಗುಜರಾತ್ನಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.
11:31 AM (IST) Jul 20
10:21 AM (IST) Jul 20
Gold And Silver Price Today: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ದೇಶದಲ್ಲಿಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಮತ್ತು ಬೆಳ್ಳಿ ದರ ಎಷ್ಟಿದೆ?
09:36 AM (IST) Jul 20
ತಿರುಮಲ ಶ್ರೀನಿವಾಸನ ದರ್ಶನಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ ಬಹಳಷ್ಟು ಜನ ₹300 ಟಿಕೆಟ್ ಬುಕ್ ಮಾಡಿ ಟೂರ್ ಪ್ಲಾನ್ ಮಾಡ್ತಾರೆ. ಆದ್ರೆ ಈ ಟಿಕೆಟ್ ಇಲ್ಲದೇಯೂ ಕಡಿಮೆ ಸಮಯದಲ್ಲಿ ಶ್ರೀನಿವಾಸನ ದರ್ಶನ ಪಡೆದುಕೊಳ್ಳಬಹುದು.