ಪಟನಾ: ಬಿಹಾರದಲ್ಲಿ ಪರಸ್ಪರ ಸೀಟು ಹಂಚಿಕೆ ಬಿಕ್ಕಟ್ಟು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ವಿಫಲವಾಗಿದ್ದ ವಿಪಕ್ಷ ಇಂಡಿಯಾ ಮೈತ್ರಿ ಕೂಟ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ತಾನೇ ಬಾಸ್ ಎಂದು ಆರ್ಜೆಡಿ ಮತ್ತು ಅದರ ನಾಯಕ ತೇಜಸ್ವಿ ಯಾದವ್ ಸಾಬೀತುಪಡಿಸಿದ್ದಾರೆ. ಈ ಹಿಂದೆ ದೆಹಲಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಹೀಗೆ ಬಾಸ್ ಆಗುವ ಕಾಂಗ್ರೆಸ್ ಯತ್ನ ವಿಫಲವಾಗಿ ಇತರೆ ಪಕಗಳ ಒತ್ತಡಕ್ಕೆ ಬಲಿಯಾಗಿತು.

08:35 PM (IST) Oct 24
ಹೂಡಿಕೆದಾರರಿಗೆ ಅಂಬಾನಿ ಬಂಪರ್ ಗಿಫ್ಟ್, IPO ವೇಳೆ ಜಿಯೋ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂ, ಷೇರುಗಳಲ್ಲಿ ಹೂಡಿಕೆ ಮಾಡುವವರಿಗೆ ಅತ್ಯಂತ ಆಕರ್ಷಕ ಅವಕಾಶ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
06:50 PM (IST) Oct 24
4 ಬಾರಿ ನನ್ನ ಮೇಲೆ ಇನ್ಸ್ಪೆಕ್ಟರ್.. ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯಗೊಳಿಸಿದ ವೈದ್ಯೆ, ಈ ಪ್ರಕರಣ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಕಳೆದ 5 ತಿಂಗಳಲ್ಲಿ ನಡೆದ ಘಟನೆ ಸೇರಿದಂತೆ ಕರಾಳ ಘಟನೆ ಕುರಿತು ನೋಟ್ನಲ್ಲಿ ಹೇಳಲಾಗಿದೆ.
06:38 PM (IST) Oct 24
ಕೇರಳದ ಸಿಪಿಎಂ ನಾಯಕ ಪಿ.ವಿ ಭಾಸ್ಕರನ್, ತಮ್ಮ ಪಾರ್ಶ್ವವಾಯು ಪೀಡಿತ ಮಗಳು ಮುಸ್ಲಿಂ ವಿವಾಹಿತನ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ಕಣ್ಣೀರು ಇಡುತ್ತಿದ್ದಾರೆ. ಮಗಳು ಮಾತ್ರ ತಂದೆಯ ವಿರುದ್ಧವೇ ಆರೋಪ ಮಾಡಿರುವುದು ಪ್ರಕರಣಕ್ಕೆ ತಿರುವು ನೀಡಿದೆ.
05:04 PM (IST) Oct 24
ಹಮಾಸ್ ಉಗ್ರರನ್ನು ಸ್ವಾತಂತ್ರ್ಯವೀರ ಭಗತ್ ಸಿಂಗ್ಗೆ ಹೋಲಿಸಿದ ಕಾಂಗ್ರೆಸ್ ಸಂಸದ, ಭುಗಿಲೆದ್ದ ಆಕ್ರೋಶ, ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದೆ. ಕಾಂಗ್ರೆಸ್ ಸಂಸದನ ವಿರುದ್ಧ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.
04:33 PM (IST) Oct 24
04:25 PM (IST) Oct 24
ಭಾರತದ CDSCO ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಿ ಕಳಪೆ, ಖರೀದಿಸುವ ಮುನ್ನ ತಿಳಿದಿರಲಿ, ಯಾವೆಲ್ಲಾ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ ಅನ್ನೋ ಸಂಪೂರ್ಣ ಲಿಸ್ಟ್ನ್ನು ಸಿಡಿಎಸ್ಸಿಒ ಬಹಿರಂಗಪಡಿಸಿದೆ.
03:33 PM (IST) Oct 24
ಭಾರತ ಸೇರಿ ಎಲ್ಲೆಡೆ ಗೂಗಲ್ನಿಂದ ಉಚಿತ 5 ಎಐ ಟ್ರೈನಿಂಗ್ ಪ್ರೋಗ್ರಾಂ, ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಇದು ಕಲಿಕಾ ಹಂತದಲ್ಲಿರುವವರಿಗೆ, ವೃತ್ತಿಪರರು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ಪ್ರೋಗ್ರಾಂ ಆರಂಭಿಸಿದೆ.
02:47 PM (IST) Oct 24
ಬಿಹಾರದಲ್ಲಿ ಅಧಿಕಾರಿ ಯಾರಿಗೆ? ಸಮೀಕ್ಷಾ ವರದಿ ಬೆನ್ನಲ್ಲೇ ಅಂತರಂಗ ಬಹಿರಂಗಪಡಿಸಿದ ಮೋದಿ, ಜಾತಿ ಸಮೀಕರಣ, ನಿತೀಶ್ ಕುಮಾರ್ಗೆ ಇರುವ ಆಡಳಿತ ವಿರೋಧಿ ಅಲೆಗಳಿಂದ ಬಿಹಾರ ತೀವ್ರ ಕುತೂಹಲ ಕೆರಳಿಸಿದೆ. ಇದರ ಬೆನ್ನಲ್ಲೇ ಮೋದಿ ವೇದಿಕೆಯಲ್ಲೇ ಹೇಳಿದ ಭವಿಷ್ಯ ಇದೀಗ ಭಾರಿ ಚರ್ಚೆಯಾಗುತ್ತಿದೆ.
09:50 AM (IST) Oct 24
ಅಲಿರೇಜಾ ಮಿರ್ಜಾಯಿನ್ ಮತ್ತು ಆಕಾಶ್ ಶಿಂದೆ ಅವರ ಸೂಪರ್ 10 ಸಾಹಸದಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 54-26 ಅಂಕಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬುಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಪ್ಲೇಆಫ್ಗೆ ಅರ್ಹತೆ ಗಳಿಸಿದೆ.
09:02 AM (IST) Oct 24
08:31 AM (IST) Oct 24
ಮಹಿಳಾ ಏಕದಿನ ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಡೆಕ್ವರ್ಥ್ ಲೂಯಿಸ್ ನಿಯಮದಂತೆ 53 ರನ್ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧನಾ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.