Published : Oct 24, 2025, 07:19 AM ISTUpdated : Oct 24, 2025, 08:35 PM IST

India Latest News Live: ಹೂಡಿಕೆದಾರರಿಗೆ ಅಂಬಾನಿ ಬಂಪರ್ ಗಿಫ್ಟ್, IPO ವೇಳೆ ಜಿಯೋ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂ

ಸಾರಾಂಶ

ಪಟನಾ: ಬಿಹಾರದಲ್ಲಿ ಪರಸ್ಪರ ಸೀಟು ಹಂಚಿಕೆ ಬಿಕ್ಕಟ್ಟು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ವಿಫಲವಾಗಿದ್ದ ವಿಪಕ್ಷ ಇಂಡಿಯಾ ಮೈತ್ರಿ ಕೂಟ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ತಾನೇ ಬಾಸ್ ಎಂದು ಆರ್‌ಜೆಡಿ ಮತ್ತು ಅದರ ನಾಯಕ ತೇಜಸ್ವಿ ಯಾದವ್ ಸಾಬೀತುಪಡಿಸಿದ್ದಾರೆ. ಈ ಹಿಂದೆ ದೆಹಲಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಹೀಗೆ ಬಾಸ್ ಆಗುವ ಕಾಂಗ್ರೆಸ್ ಯತ್ನ ವಿಫಲವಾಗಿ ಇತರೆ ಪಕಗಳ ಒತ್ತಡಕ್ಕೆ ಬಲಿಯಾಗಿತು.

Jio IPO

08:35 PM (IST) Oct 24

ಹೂಡಿಕೆದಾರರಿಗೆ ಅಂಬಾನಿ ಬಂಪರ್ ಗಿಫ್ಟ್, IPO ವೇಳೆ ಜಿಯೋ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂ

ಹೂಡಿಕೆದಾರರಿಗೆ ಅಂಬಾನಿ ಬಂಪರ್ ಗಿಫ್ಟ್, IPO ವೇಳೆ ಜಿಯೋ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂ, ಷೇರುಗಳಲ್ಲಿ ಹೂಡಿಕೆ ಮಾಡುವವರಿಗೆ ಅತ್ಯಂತ ಆಕರ್ಷಕ ಅವಕಾಶ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. 

 

Read Full Story

06:50 PM (IST) Oct 24

4 ಬಾರಿ ನನ್ನ ಮೇಲೆ ಇನ್ಸ್‌ಪೆಕ್ಟರ್.. ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯಗೊಳಿಸಿದ ವೈದ್ಯೆ

4 ಬಾರಿ ನನ್ನ ಮೇಲೆ ಇನ್ಸ್‌ಪೆಕ್ಟರ್.. ಕೈಯಲ್ಲಿ ಡೆತ್ ನೋಟ್ ಬರೆದು ಬದುಕು ಅಂತ್ಯಗೊಳಿಸಿದ ವೈದ್ಯೆ, ಈ ಪ್ರಕರಣ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಕಳೆದ 5 ತಿಂಗಳಲ್ಲಿ ನಡೆದ ಘಟನೆ ಸೇರಿದಂತೆ ಕರಾಳ ಘಟನೆ ಕುರಿತು ನೋಟ್‌ನಲ್ಲಿ ಹೇಳಲಾಗಿದೆ.

Read Full Story

06:38 PM (IST) Oct 24

ಮುಸ್ಲಿಂ ವಿವಾಹಿತನಿಂದ ನನ್ನ ಮಗಳ ಬಚಾವ್​ ಮಾಡಿ - ಕಮ್ಯುನಿಸ್ಟ್​ ಲೀಡರ್ ಕಣ್ಣೀರು! ರಾಜ್ಯಾದ್ಯಂತ ಸಂಚಲನ

ಕೇರಳದ ಸಿಪಿಎಂ ನಾಯಕ ಪಿ.ವಿ ಭಾಸ್ಕರನ್, ತಮ್ಮ ಪಾರ್ಶ್ವವಾಯು ಪೀಡಿತ ಮಗಳು ಮುಸ್ಲಿಂ ವಿವಾಹಿತನ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ಕಣ್ಣೀರು ಇಡುತ್ತಿದ್ದಾರೆ.  ಮಗಳು ಮಾತ್ರ ತಂದೆಯ ವಿರುದ್ಧವೇ ಆರೋಪ ಮಾಡಿರುವುದು ಪ್ರಕರಣಕ್ಕೆ ತಿರುವು ನೀಡಿದೆ.

Read Full Story

05:04 PM (IST) Oct 24

ಹಮಾಸ್ ಉಗ್ರರನ್ನು ಸ್ವಾತಂತ್ರ್ಯವೀರ ಭಗತ್ ಸಿಂಗ್‌ಗೆ ಹೋಲಿಸಿದ ಕಾಂಗ್ರೆಸ್ ಸಂಸದ, ಭುಗಿಲೆದ್ದ ಆಕ್ರೋಶ

ಹಮಾಸ್ ಉಗ್ರರನ್ನು ಸ್ವಾತಂತ್ರ್ಯವೀರ ಭಗತ್ ಸಿಂಗ್‌ಗೆ ಹೋಲಿಸಿದ ಕಾಂಗ್ರೆಸ್ ಸಂಸದ, ಭುಗಿಲೆದ್ದ ಆಕ್ರೋಶ, ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದೆ. ಕಾಂಗ್ರೆಸ್ ಸಂಸದನ ವಿರುದ್ಧ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.

Read Full Story

04:33 PM (IST) Oct 24

KBC 17 - ಪಾನೀಪುರದಲ್ಲಿ ಯಾವ ಬೆರಳು ಬಳಸಿ ರಂಧ್ರ ಮಾಡ್ತಾರೆ? ಅಮಿತಾಭ್​ ಬಚ್ಚನ್​ಗೇ ಎದುರಾಯ್ತು ಪ್ರಶ್ನೆ!

ಕೌನ್​ ಬನೇಗಾ ಕರೋಡ್​ ಪತಿ 17ನೇ ಸೀಸನ್​ನ ವಿಶೇಷ ಸಂಚಿಕೆಯೊಂದರಲ್ಲಿ, ಅಸಲಿ ಅಮಿತಾಭ್​ ಬಚ್ಚನ್​ ಅವರಿಗೆ ನಕಲಿ ಅಮಿತಾಭ್​ ಬಚ್ಚನ್​ ಎದುರಾಗಿದ್ದಾರೆ. ಪಾನೀಪುರಿ ಬಗ್ಗೆ ಕೇಳಿದ ವಿಚಿತ್ರ ಪ್ರಶ್ನೆ ಸೇರಿದಂತೆ ಇವರಿಬ್ಬರ ನಡುವಿನ ಹಾಸ್ಯದ ಜುಗಲ್ಬಂದಿ ಪ್ರೇಕ್ಷಕರಲ್ಲಿ ನಗುವಿನ ಅಲೆ ಎಬ್ಬಿಸಿದೆ.
Read Full Story

04:25 PM (IST) Oct 24

ಭಾರತದ CDSCO ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಿ ಕಳಪೆ, ಖರೀದಿಸುವ ಮುನ್ನ ತಿಳಿದಿರಲಿ

ಭಾರತದ CDSCO ಗುಣಮಟ್ಟ ಪರೀಕ್ಷೆಯಲ್ಲಿ 112 ಔಷಧಿ ಕಳಪೆ, ಖರೀದಿಸುವ ಮುನ್ನ ತಿಳಿದಿರಲಿ, ಯಾವೆಲ್ಲಾ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದೆ ಅನ್ನೋ ಸಂಪೂರ್ಣ ಲಿಸ್ಟ್‌ನ್ನು ಸಿಡಿ‌ಎಸ್‌ಸಿಒ ಬಹಿರಂಗಪಡಿಸಿದೆ.

Read Full Story

03:33 PM (IST) Oct 24

ಭಾರತ ಸೇರಿ ಎಲ್ಲೆಡೆ ಗೂಗಲ್‌ನಿಂದ ಉಚಿತ 5 ಎಐ ಟ್ರೈನಿಂಗ್ ಪ್ರೋಗ್ರಾಂ, ಎಲ್ಲರಿಗೂ ಮುಕ್ತ ಅವಕಾಶ

ಭಾರತ ಸೇರಿ ಎಲ್ಲೆಡೆ ಗೂಗಲ್‌ನಿಂದ ಉಚಿತ 5 ಎಐ ಟ್ರೈನಿಂಗ್ ಪ್ರೋಗ್ರಾಂ, ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಇದು ಕಲಿಕಾ ಹಂತದಲ್ಲಿರುವವರಿಗೆ, ವೃತ್ತಿಪರರು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ಪ್ರೋಗ್ರಾಂ ಆರಂಭಿಸಿದೆ.

Read Full Story

02:47 PM (IST) Oct 24

ಬಿಹಾರದಲ್ಲಿ ಅಧಿಕಾರಿ ಯಾರಿಗೆ? ಸಮೀಕ್ಷಾ ವರದಿ ಬೆನ್ನಲ್ಲೇ ಅಂತರಂಗ ಬಹಿರಂಗಪಡಿಸಿದ ಮೋದಿ

ಬಿಹಾರದಲ್ಲಿ ಅಧಿಕಾರಿ ಯಾರಿಗೆ? ಸಮೀಕ್ಷಾ ವರದಿ ಬೆನ್ನಲ್ಲೇ ಅಂತರಂಗ ಬಹಿರಂಗಪಡಿಸಿದ ಮೋದಿ, ಜಾತಿ ಸಮೀಕರಣ, ನಿತೀಶ್ ಕುಮಾರ್‌ಗೆ ಇರುವ ಆಡಳಿತ ವಿರೋಧಿ ಅಲೆಗಳಿಂದ ಬಿಹಾರ ತೀವ್ರ ಕುತೂಹಲ ಕೆರಳಿಸಿದೆ. ಇದರ ಬೆನ್ನಲ್ಲೇ ಮೋದಿ ವೇದಿಕೆಯಲ್ಲೇ ಹೇಳಿದ ಭವಿಷ್ಯ ಇದೀಗ ಭಾರಿ ಚರ್ಚೆಯಾಗುತ್ತಿದೆ.

Read Full Story

09:50 AM (IST) Oct 24

ಪ್ರೊ ಕಬಡ್ಡಿ - ಗುಜರಾತ್ ಜೈಂಟ್ಸ್‌ ಬಗ್ಗುಬಡಿದು ಮಿನಿ ಕ್ವಾಲಿಫೈಯರ್‌ಗೆ ಬೆಂಗಳೂರು ಬುಲ್ಸ್ ಲಗ್ಗೆ

ಅಲಿರೇಜಾ ಮಿರ್ಜಾಯಿನ್‌ ಮತ್ತು ಆಕಾಶ್‌ ಶಿಂದೆ ಅವರ ಸೂಪರ್‌ 10 ಸಾಹಸದಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 54-26 ಅಂಕಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬುಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಪ್ಲೇಆಫ್‌ಗೆ ಅರ್ಹತೆ ಗಳಿಸಿದೆ.

Read Full Story

09:02 AM (IST) Oct 24

ದೀಪಾವಳಿ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದವರ ದುರಂತ ಅಂತ್ಯಕ್ಕೆ ಕಾರಣವಾಯ್ತಾ ಚಾಲಕರ ಆ ತಪ್ಪು?

ಆಂಧ್ರಪ್ರದೇಶದ ಕರ್ನೂಲು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಬೈಕ್ ಡಿಕ್ಕಿಯಾದ ಪರಿಣಾಮ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡು, 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
Read Full Story

08:31 AM (IST) Oct 24

ಮಹಿಳಾ ವಿಶ್ವಕಪ್ - ಕೊನೆಗೂ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ!

ಮಹಿಳಾ ಏಕದಿನ ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಡೆಕ್ವರ್ಥ್ ಲೂಯಿಸ್ ನಿಯಮದಂತೆ 53 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧನಾ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.  

Read Full Story

More Trending News