Published : Aug 23, 2026, 06:59 AM ISTUpdated : Aug 23, 2026, 11:26 PM IST

India Latest News Live: ‘ನಾನು ಮದ್ಯಪಾನ ಬಿಡಲು ಅವರೇ ಕಾರಣ’.. - ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ ಆ ಘಟನೆಯೇನು?

ಸಾರಾಂಶ

ಲಾತೂರ್ (ಮಹಾರಾಷ್ಟ್ರ): ಕಾಕ್ರೋಚ್‌ ಜನತಾ ಪಕ್ಷದ ಮುಖ್ಯಸ್ಥ ಅಭಿಜಿತ್ ದೀಪ್ಕೆ ಶಾಲೆಗಳನ್ನು ಅಭಿವೃದ್ಧಿಪಡಿಸುವ ಅಭಿಯಾನದ ಭಾಗವಾಗಿ ಲಾತೂರ್‌ನ ಸರ್ಕಾರಿ ಶಾಲೆಗೆ ಅನುಮತಿಯಿಲ್ಲದೆ ಪ್ರವೇಶಿಸಿ ಶಿಕ್ಷಕರಿಗೆ ಬೆದರಿಕೆಯೊಡ್ಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೀಪ್ಕೆ ವಿರುದ್ಧ ಪ್ರಕರಣ ಎಫ್‌ಐಆರ್‌ ದಾಖಲಾಗಿದೆ.

ಇಲ್ಲಿನ ಔಸಾ ಬಳಿಯ ಜವಾಲಿಯಲ್ಲಿರುವ ಜಿಲ್ಲಾ ಪರಿಷತ್‌ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ದೀಪ್ಕೆ ಹಾಗೂ ಸಿಜೆಪಿ ಬೆಂಬಲಿಗರು ಯಾವುದೇ ಅನುಮತಿಯಿಲ್ಲದೆ ಶಾಲೆಗೆ ಭೇಟಿ ನೀಡಿದ್ದಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳ ಜತೆ ಕುಳಿತು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರ ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಶಿಕ್ಷಕರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ ಘಟನೆ ಸಂಬಂಧ ಶಾಲಾ ಶಿಕ್ಷಕರು ನೀಡಿದ ದೂರಿನನ್ವಯ ಔಸಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11:26 PM (IST) Aug 23

‘ನಾನು ಮದ್ಯಪಾನ ಬಿಡಲು ಅವರೇ ಕಾರಣ’.. - ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ ಆ ಘಟನೆಯೇನು?

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ದೇಶಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ರಜನಿಕಾಂತ್, ಶೂಟಿಂಗ್ ವೇಳೆ ನಡೆದ ಘಟನೆಯನ್ನು ವಿವರಿಸಿದ್ದರು.

Read Full Story

10:57 PM (IST) Aug 23

ಪಂತ್ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ಸ್ ಕೊಟ್ಟ ಕೋಚ್! ಮತ್ತೆ ಬ್ಯಾಟಿಂಗ್‌ಗೆ ಬರ್ತಾರಾ?

ಕೊಲಂಬೊ ಟೆಸ್ಟ್‌ನ ಮೊದಲ ದಿನ ಕೈಗೆ ಪೆಟ್ಟು ಬಿದ್ದ ಕಾರಣ ರಿಷಭ್ ಪಂತ್ ಮೈದಾನ ತೊರೆದಿದ್ದರೂ, ಅವರು ಎರಡನೇ ದಿನ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಕೋಚ್ ಖಚಿತಪಡಿಸಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಸಿಡಿಸಿದ ಶತಕದ (117) ನೆರವಿನಿಂದ ಭಾರತ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.

Read Full Story

09:32 PM (IST) Aug 23

ಗಂಡ ಸತ್ತರೆ ಕುಂಕುಮ, ಬಳೆ ಯಾಕೆ ತೆಗೀಬೇಕು? ನಟಿ ಅನಸೂಯಾ ಹೇಳಿಕೆಯಿಂದ ಭಾರೀ ಚರ್ಚೆ

Anasuya Bharadwaj Viral Statement: ಗಂಡ ಸತ್ತ ಮೇಲೆ ಮಹಿಳೆಯರು ಯಾಕೆ ಕುಂಕುಮ, ಬಳೆಗಳನ್ನು ತೆಗೆದುಹಾಕಬೇಕು ಎಂದು ಪುಷ್ಪ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಪ್ರಶ್ನಿಸಿದ್ದಾರೆ.

Read Full Story

09:17 PM (IST) Aug 23

ಆಘಾತ..! ಅಪಘಾತಕ್ಕೆ ಈಡಾದ ಸ್ಟಾರ್ ನಟ ಅಜಿತ್‌ ಕುಮಾರ್‌ ಕಾರು; ಈಗ ಹೇಗಿದೆ 'ತಲಾ'ರ ಆರೋಗ್ಯ?

ಅಜಿತ್ ಅವರ ಕಾರು ನಿಯಂತ್ರಣ ತಪ್ಪಿ ನಿಂತಾಗ, ಅದರ ಬೆನ್ನ ಹಿಂದೆಯೇ ಇತರ ರೇಸಿಂಗ್ ಕಾರುಗಳು ಅತಿ ವೇಗವಾಗಿ ಧಾವಿಸಿ ಬರುತ್ತಿದ್ದವು. ಒಂದು ವೇಳೆ ಹಿಂಬದಿಯಿಂದ ಯಾವುದಾದರೂ ಕಾರ್ ಅಜಿತ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರೆ ಇಂದು ಪರಿಸ್ಥಿತಿ ಏನಾಗುತ್ತಿತ್ತು? ಈಗ ಹೇಗಿದ್ದಾರೆ ಅಜಿತ್?

Read Full Story

09:08 PM (IST) Aug 23

ಬದನೆಕಾಯಿ ಪಲ್ಯ ತಿಂದು ಮುದ್ದಾದ 3 ಹೆಣ್ಮಕ್ಕಳು ಸಾವು; ಹೂತಿದ್ದ ಮೃತದೇಹ ಹೊರ ತೆಗೆದ ಪೊಲೀಸರು

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬದನೆಕಾಯಿ ಪಲ್ಯ ಮತ್ತು ರೊಟ್ಟಿ ತಿಂದ ಒಂದೇ ಕುಟುಂಬದ ಮೂವರು ಹೆಣ್ಣು ಮಕ್ಕಳು (7 ವರ್ಷ, 3 ವರ್ಷ ಮತ್ತು 9 ತಿಂಗಳು) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರಿಗೆ ತಿಳಿಸದೆ ಮಕ್ಕಳನ್ನು ಹೂತುಹಾಕಿದ್ದ ಪೋಷಕರ ಕ್ರಮ ಅನುಮಾನ ಮೂಡಿಸಿದ್ದು, ಅಧಿಕಾರಿಗಳು ಈಗ ಶವಗಳನ್ನು ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ.

Read Full Story

08:55 PM (IST) Aug 23

ಸೀಕ್ರೆಟ್ ಹೊರಬಿತ್ತು.. 'ಟಾಕ್ಸಿಕ್' ಟೈಟಲ್ ಗುಟ್ಟು ಹೇಳಿದ ಯಶ್; 'ಪಾತ್ ಬ್ರೇಕಿಂಗ್' ಸಿನಿಮಾ ಅಂದಿದ್ಯಾಕೆ ರಾಕಿ ಭಾಯ್?

ಯಶ್ ಕೇವಲ ಒಂದು ಸಿನಿಮಾ ಮಾಡಲು ಹೊರಟಿಲ್ಲ, ಬದಲಾಗಿ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಟ್ರೆಂಡ್ ಸೆಟ್ ಮಾಡಲು ಮುಂದಾಗಿದ್ದಾರೆ. ಆಗಸ್ಟ್ 26ರಂದು 'ಟಾಕ್ಸಿಕ್' ವಿಶ್ವಾದ್ಯಂತ ತೆರೆಕಾಣಲಿದ್ದು, ಅಂದು 'ರಾಯ'ನ ಅಸಲಿ ಸೀಕ್ರೆಟ್ ಏನು ಎಂಬುದು ಜಗತ್ತಿಗೆ ತಿಳಿಯಲಿದೆ.

Read Full Story

08:32 PM (IST) Aug 23

ಯಶ್ 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ ಅವಘಡ; ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ ಗೊತ್ತಾ?

ಆ ಕಬ್ಬಿಣದ ಚೌಕಟ್ಟು ಅಷ್ಟು ಜನರ ತೂಕವನ್ನು ತಾಳಲಾರದೆ ಏಕಾಏಕಿ ಧಬಾಬನೆ ನೆಲಕ್ಕುರುಳಿದೆ. ಈ ಭೀಕರ ಅವಘಡದಲ್ಲಿ ಓರ್ವ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದರೆ, ಇನ್ನೂ ಮೂವರು ರಕ್ತಸಿಕ್ತ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದಾರೆ. ಕೇಸ್ ದಾಖಲಿಸಿದ್ದು ಯಾರ ಮೇಲೆ ಗೊತ್ತಾ?

Read Full Story

08:30 PM (IST) Aug 23

‘ಅವರಂತೆ ಕೆಲಸ ಮಾಡಲು ಮತ್ತೊಬ್ಬರು ಹುಟ್ಟಬೇಕು’ - ಯಶ್ ಕೆಲಸದ ಶೈಲಿ ನೋಡಿ ಬೆಚ್ಚಿಬಿದ್ದ ನಯನತಾರಾ

Nayanthara on Yash: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ನಯನತಾರಾ, ಇದೀಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Read Full Story

07:59 PM (IST) Aug 23

ವಿದ್ಯಾರ್ಥಿನಿಯರಿಗೆ ಈಜು ಕಲಿಸುವುದಕ್ಕೆ, ತುಂಡು ಬಟ್ಟೆಯಿಲ್ಲದೇ ನೀರಿಗಿಳಿದ ಪ್ರಿನ್ಸಿಪಾಲ್; ಮುಂದಾಗಿದ್ದೇನು?

ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಸ್ವಾತಂತ್ರ್ಯ ದಿನಾಚರಣೆಯ ನಂತರ ವಿದ್ಯಾರ್ಥಿನಿಯರನ್ನು ನಿಷೇಧಿತ ಡ್ಯಾಂಗೆ ಕರೆದೊಯ್ದು ಅವರೊಂದಿಗೆ ಆಕ್ಷೇಪಾರ್ಹವಾಗಿ ಸ್ನಾನ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಶಿಕ್ಷಣ ಇಲಾಖೆಯು ಅವರನ್ನು ಅಮಾನತುಗೊಳಿಸಿದ್ದು, ಪೊಲೀಸ್ ಮತ್ತು ಇಲಾಖಾ ತನಿಖೆ ನಡೆಯುತ್ತಿದೆ.

Read Full Story

07:38 PM (IST) Aug 23

ಯಶಸ್ವಿ ಜೈಸ್ವಾಲ್ ಬ್ಯಾನ್? ಯುವ ಬ್ಯಾಟರ್‍‌ಗೆ ಡಿಚ್ಚಿ ಕಂಟಕ..!

ಶ್ರೀಲಂಕಾ ವೇಗಿ ಅಸಿತ ಫರ್ನಾಂಡೋಗೆ ಡಿಚ್ಚಿ ಕೊಟ್ಟ ಪ್ರಕರಣದಲ್ಲಿ ಯಶಸ್ವಿ ಜೈಸ್ವಾಲ್ ಅಮಾನತು ಭೀತಿಯಲ್ಲಿದ್ದಾರೆ. ಇದು ಐಸಿಸಿ ಲೆವೆಲ್ 4 ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ 5 ಟೆಸ್ಟ್ ಅಥವಾ 10 ಏಕದಿನ ಪಂದ್ಯಗಳಿಂದ ಇವರು ಬ್ಯಾನ್ ಆಗಬಹುದು.

Read Full Story

07:07 PM (IST) Aug 23

ಕಂಡಕ್ಟರ್‍‌ಗೂ ಕೈಕೊಟ್ಟು ಬಂದಳಾ ಯೂಟ್ಯೂಬರ್ ಪತ್ನಿ? ಓಡಿ ಹೋಗಿದ್ದರ ಹಿಂದಿನ ಸತ್ಯ ಹೇಳಿದ ಮೇಘಾ

ಬಸ್ ಕಂಡಕ್ಟರ್ ಅನೂಪ್ ಜೊತೆ ಓಡಿಹೋಗಿ ಸುದ್ದಿಯಾಗಿದ್ದ ಯೂಟ್ಯೂಬರ್ ಅಖಿಲ್ ಪತ್ನಿ ಮೇಘಾ ನಾಯರ್, ತನ್ನ ನಡೆಯ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಅಕ್ರಮ ಸಂಬಂಧಗಳಿಂದ ಬೇಸತ್ತು ಹೊರಬಂದೆ ಎಂದು ಹೇಳಿದ್ದಾರೆ. ಕಂಡಕ್ಟರ್ ಅನ್ನೂ ಬಿಟ್ಟಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರಸ್ತುತ ತಂದೆಯ ಮನೆಯಲ್ಲಿದ್ದರೂ ಅನೂಪ್ ಜೊತೆಗಿನ ಸಂಬಂಧ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Read Full Story

06:22 PM (IST) Aug 23

ಜಾಂಬಿ ರೆಡ್ಡಿ 2 NXT LVL - ಹನು-ಮಾನ್, ಮಿರಾಯ್ ಬಳಿಕ ತೇಜಾ ಸಜ್ಜಾ ನಟನೆಯ ಮತ್ತೊಂದು ಇಂಟರೆಸ್ಟಿಂಗ್ ಸಬ್ಜೆಕ್ಟ್ ಸ್ಟೋರಿ!

ಸದ್ಯ ಬಿಡುಗಡೆಯಾಗಿರುವ ಗ್ಲಿಂಪ್ಸ್ ವೀಡಿಯೊ ಯಾವುದೇ 'ಎಐ' (AI) ತಂತ್ರಜ್ಞಾನ ಬಳಸದೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಚಾರ್ಮಿನಾರ್ ಹಿನ್ನೆಲೆಯಲ್ಲಿ ತೇಜ ಸಜ್ಜಾ ಕಾರಿನ ಮೇಲೆ ನಿಂತು ಬ್ಯಾಟ್ ಹಿಡಿದು ಜಾಂಬಿಗಳ ವಿರುದ್ಧ ಹೋರಾಡುವ ಆಕ್ಷನ್ ಸನ್ನಿವೇಶಗಳು ಗಮನಸೆಳೆಯುತ್ತವೆ.

Read Full Story

06:02 PM (IST) Aug 23

ಲಂಕಾ ಆಟಗಾರನಿಗೆ ಮೈದಾನದಲ್ಲೇ ಡಿಚ್ಚಿ ಕೊಟ್ಟ ಜೈಸ್ವಾಲ್! ಔಟ್ ಆದ ಬೆನ್ನಲ್ಲೇ ಭಾರೀ ಗಲಾಟೆ!

ಕೊಲಂಬೊ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತ ಫರ್ನಾಂಡೋ ನಡುವೆ ಮೈದಾನದಲ್ಲೇ ಕಿತ್ತಾಟ ನಡೆದಿದೆ. ಔಟ್ ಆದ ಬಳಿಕ ಲಂಕಾ ಬೌಲರ್ ನೀಡಿದ ಸೈಂಡ್ ಆಫ್‌ಗೆ ಕೆರಳಿದ ಜೈಸ್ವಾಲ್, ಆತನಿಗೆ ಡಿಚ್ಚಿ ಕೊಟ್ಟು ಆಕ್ರೋಶ ಹೊರಹಾಕಿದರು. ಬಳಿಕ ಲಂಕಾ ನಾಯಕ ಮಧ್ಯಪ್ರವೇಶಿಸಿ ಗಲಾಟೆ ಸಮಾಧಾನಪಡಿಸಿದರು.

Read Full Story

05:20 PM (IST) Aug 23

Sangita Video - ಭಯಾನಕ ಘಟನೆಗೆ ಬಿಗ್‌ ಟ್ವಿಸ್ಟ್ ಕೊಟ್ಟ ತಾಯಿಯ ಕೊನೆಯ ವಿಡಿಯೋ; ರಿವೀಲ್ ಆಯ್ತು ಶಾಕಿಂಗ್ ವಿಚಾರಗಳು!

ಮಹಾರಾಷ್ಟ್ರದಲ್ಲಿ ಐಫೋನ್ ಇಎಂಐಗಾಗಿ ನಡೆದ ವಾಗ್ವಾದದಲ್ಲಿ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟ ತಾಯಿ ಸಂಗೀತಾ, ಯೂಟ್ಯೂಬರ್ ಆಗಿದ್ದು, ಸಾವಿಗೂ ಮುನ್ನ ಅವರು ಪೋಸ್ಟ್ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸಂಬಂಧಗಳ ಮೌಲ್ಯದ ಬಗ್ಗೆ ಮಾತನಾಡಿದ್ದು, ಇಡೀ ಘಟನೆಗೆ ಹೊಸ ತಿರುವು ನೀಡಿದೆ.
Read Full Story

05:18 PM (IST) Aug 23

2ನೇ ಟೆಸ್ಟ್‌ನಲ್ಲೂ ಕನ್ನಡಿಗನ ಪರಾಕ್ರಮ.. ಸತತ ಎರಡನೇ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಪಡಿಕ್ಕಲ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್, ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದಾರೆ. ತಂಡಕ್ಕೆ ಪಡಿಕ್ಕಲ್ ಅವರ ಮತ್ತೊಂದು ಶತಕ ಆಸರೆಯಾಗಿದ್ದು, ಈ ಕುರಿತ ಸ್ಟೋರಿ ಇಲ್ಲಿದೆ.

Read Full Story

05:17 PM (IST) Aug 23

ಪತಿಯ ಕಣ್ಣು ತಪ್ಪಿಸಿ ಕೂಡಿಟ್ಟ 12 ಲಕ್ಷ ಇಲಿಯ ಪಾಲು! ಭವಿಷ್ಯದ ಬಗ್ಗೆ ಆಲೋಚಿಸಿದ್ದ ಪತ್ನಿಯ ಸ್ಥಿತಿ ಚಿಂತಾಜನಕ

ಉತ್ತರ ಪ್ರದೇಶದ ಗೃಹಿಣಿಯೊಬ್ಬರು ಚಿನ್ನಾಭರಣ ಖರೀದಿಸಲು ಎಂಟು ವರ್ಷಗಳಿಂದ ಟ್ರಂಕ್‌ನಲ್ಲಿ ಕೂಡಿಟ್ಟಿದ್ದ 12 ಲಕ್ಷ ರೂಪಾಯಿ ಹಣವನ್ನು ಇಲಿಗಳು ತಿಂದು ನಾಶಪಡಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೆಯಲ್ಲಿ ಹಣ ಇಡುವುದರ ಅಪಾಯವನ್ನು ಇದು ಎತ್ತಿ ತೋರಿಸುತ್ತದೆ.
Read Full Story

05:12 PM (IST) Aug 23

ಮುಚ್ಚಿದ ಕೋಣೆಯಲ್ಲಿ ಜಾತಿ ನಿಂದನೆ- SC, ST ಕಾಯ್ದೆಯಡಿ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್​

ಖಾಸಗಿಯಾಗಿ ಅಥವಾ ಸಾರ್ವಜನಿಕರ ಗಮನಕ್ಕೆ ಬಾರದಂತೆ ಮುಚ್ಚಿದ ಕೋಣೆಯಲ್ಲಿ ಮಾಡುವ ಜಾತಿ ನಿಂದನೆಯು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಘಟನೆಯು ಸಾರ್ವಜನಿಕರ ಉಪಸ್ಥಿತಿಯಿಲ್ಲದೆ ನಡೆದರೆ, ಅದನ್ನು ಈ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
Read Full Story

04:14 PM (IST) Aug 23

ಇನ್ಮುಂದೆ AI ಇಂಟರ್‍‌ನೆಟ್‌ ಅನ್ನು ಆಳುತ್ತದೆಯೇ? ಏನಿದು Dead Internet Theory?

ಡೆಡ್ ಇಂಟರ್ನೆಟ್ ಥಿಯರಿಯು ಇಂಟರ್ನೆಟ್‌ನಲ್ಲಿ ಮನುಷ್ಯರಿಗಿಂತ ಕೃತಕ ಬುದ್ಧಿಮತ್ತೆ (AI) ಮತ್ತು ಬಾಟ್‌ಗಳ ಹಾವಳಿ ಹೆಚ್ಚುತ್ತಿದೆ ಎಂದು ಪ್ರತಿಪಾದಿಸುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿ 10 ವೆಬ್‌ಸೈಟ್‌ಗಳಲ್ಲಿ ಒಂದು ಎಐನಿಂದ ಸಿದ್ಧವಾಗುತ್ತಿದ್ದು, ಮಾಹಿತಿಯ ವಿಶ್ವಾಸಾರ್ಹತೆಯನ್ನು ಪತ್ತೆ ಹಚ್ಚುವುದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಲಿದೆ.

Read Full Story

01:36 PM (IST) Aug 23

ರಾಮಮಂದಿರದ ತೀರ್ಪಿನ ದಿನ ನ್ಯಾಯಮೂರ್ತಿಗಳನ್ನು ಹಿಂಬಾಲಿಸಿದ್ದ ಆ ಕೋತಿ - ಆತ್ಮಚರಿತ್ರೆಯಲ್ಲಿ ರೋಚಕ ಅನುಭವ

1986ರಲ್ಲಿ ರಾಮಜನ್ಮಭೂಮಿ ಬೀಗ ತೆರೆಯಲು ಆದೇಶಿಸಿದ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ರೋಚಕ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತೀರ್ಪಿನ ದಿನ ನ್ಯಾಯಾಲಯದ ಮೇಲೆ ಕಾಣಿಸಿಕೊಂಡ ಕಪ್ಪು ಕೋತಿಯೊಂದು ನಂತರ ತಮ್ಮ ಬಂಗಲೆಯಲ್ಲಿಯೂ ಕಾಣಿಸಿಕೊಂಡಿದ್ದು, ಅದೊಂದು ದೈವಿಕ ಶಕ್ತಿ ಎಂದು ಅವರು ಭಾವಿಸಿದ್ದರು. ಈ ತೀರ್ಪಿನ ನಂತರ ಅಂದಿನ ರಾಜ್ಯ ಸರ್ಕಾರದಿಂದ ಕಿರುಕುಳವನ್ನೂ ಎದುರಿಸಬೇಕಾಯಿತು.
Read Full Story

12:39 PM (IST) Aug 23

ಆಸ್ಟ್ರೇಲಿಯಾ ಪರ 13 ವರ್ಷ ಆಡಿದರು ಆಗಿಲ್ಲ, ಪೋರ್ಚುಗಲ್ ಪರ ಮೊದಲ ಶತಕ ಸಿಡಿಸಿದ RCB ಮಾಜಿ ಆಟಗಾರ

ಆಸ್ಟ್ರೇಲಿಯಾದ ಆಲ್‌ರೌಂಡರ್ ಮೊಯ್ಸಸ್ ಹೆನ್ರಿಕ್ಸ್, ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಪೋರ್ಚುಗಲ್ ಪರ ಸಿಡಿಸಿದ್ದಾರೆ. ಜೆಕ್ ಗಣರಾಜ್ಯದ ವಿರುದ್ಧ ನಡೆದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ 111 ರನ್ ಗಳಿಸುವ ಮೂಲಕ, ತಮ್ಮ ಪೋರ್ಚುಗೀಸ್ ಮೂಲದ ತಂಡಕ್ಕೆ ನಾಯಕರಾಗಿ ಐತಿಹಾಸಿಕ ಗೆಲುವು ತಂದುಕೊಟ್ಟರು.
Read Full Story

12:04 PM (IST) Aug 23

ಕೋರ್ಟ್ ಮೆಟ್ಟಿಲೇರಿದ್ದ ಜಾಹ್ನವಿ ಕಪೂರ್‌ಗೆ ಸಿಕ್ತು ಸಿಹಿ–ಕಹಿ ಎರಡೂ.. 'ಫ್ಯಾನ್‌ ಪೇಜ್‌' ಫೋಟೋ ತೆಗೆಸಲ್ಲ ಎಂದ ಕೋರ್ಟ್‌, ಸಿಹಿ ಮ್ಯಾಟರ್ ಏನು?

ಜಾಹ್ನವಿ ಕಪೂರ್‌ ಅವರ ಈ ಕಾನೂನು ಹೋರಾಟವು ಇಂಟರ್ನೆಟ್ ಲೋಕದಲ್ಲಿ ಸೆಲೆಬ್ರಿಟಿಗಳ ಹಕ್ಕುಗಳು ಮತ್ತು ಅಭಿಮಾನಿಗಳ ಸ್ವಾತಂತ್ರ್ಯದ ನಡುವಿನ ತೆಳುವಾದ ಗೆರೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಶ್ಲೀಲ ವೆಬ್‌ಸೈಟ್‌ಗಳಿಗೆ ಬೀಗ ಬಿತ್ತಾ? ಆದರೆ ನಿಜವಾಗಿ ಏನಾಯ್ತು? ನೋಡಿ..

Read Full Story

11:01 AM (IST) Aug 23

ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!

ಈ ಕಾರ್ಯಕ್ರಮ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದ ಗ್ರೌಂಡ್‌ನಲ್ಲಿ ನಡೆದಿದೆ. ಈ ಇವೆಂಟ್‌ನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಮಲ್ಲಾರೆಡ್ಡಿ ವಿವಿ ಗ್ರೌಂಡ್ ಕಿಕ್ಕಿರಿದು ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಅವರಲ್ಲಿ ಕೆಲವರು ಸೌಂಡ್‌ಬಾಕ್ಸ್‌ ಸಿಸ್ಟಮ್‌ ಇಟ್ಟಿದ್ದ ಸ್ಟ್ಯಾಂಡ್‌ ಮೇಲೆ ಕುಳಿತು ಕಾರ್ಯಕ್ರಮ ನೋಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

Read Full Story

10:09 AM (IST) Aug 23

Sugar Price Explained - ಸಕ್ಕರೆ ಬೆಲೆ ನಿರ್ಧರಿಸೋರು ಯಾರು? ರೈತರ? ಕಾರ್ಖಾನೆ ಮಾಲೀಕರಾ? ಅಥವಾ ಸರ್ಕಾರ?

ಹಬ್ಬಗಳ ಸೀಸನ್‌ನಲ್ಲಿ ಸಕ್ಕರೆ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರ ಮೇಲೆ ಹೊರೆಯಾಗಿದೆ. ಭಾರತದಲ್ಲಿ ಸಕ್ಕರೆ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ, ಸರ್ಕಾರದ ಪಾತ್ರವೇನು ಮತ್ತು ಕಬ್ಬಿಗೆ ನಿಗದಿಪಡಿಸುವ FRP ಬೆಲೆ ಎಷ್ಟು ಎಂಬುದರ ಕುರಿತು ಈ ಲೇಖನ ಮಾಹಿತಿ ನೀಡುತ್ತದೆ.
Read Full Story

07:22 AM (IST) Aug 23

ಯುರೋಪ್‌ ಕಾಡ್ಗಿಚ್ಚು - ಸ್ಫೋಟಿಸುತ್ತಿರುವ ವಿಶ್ವಯುದ್ಧದ ವೇಳೆ ಹೂತಿಟ್ಟ ಬಾಂಬ್‌ಗಳು

ಯುರೋಪ್‌ನಲ್ಲಿನ ತೀವ್ರ ಬೇಸಿಗೆಯಿಂದ ಉಂಟಾದ ಕಾಡ್ಗಿಚ್ಚು ಹೊಸ ಆತಂಕವನ್ನು ಸೃಷ್ಟಿಸಿದೆ. ಫ್ರಾನ್ಸ್, ಜರ್ಮನಿಯಂತಹ ದೇಶಗಳಲ್ಲಿ ವಿಶ್ವಯುದ್ಧದ ಸಮಯದಲ್ಲಿ ಹೂತಿಟ್ಟಿದ್ದ ಬಾಂಬ್‌ಗಳು ಈಗ ಸ್ಫೋಟಗೊಳ್ಳುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಪ್ರಾಣಭೀತಿ ಎದುರಾಗಿದೆ.
Read Full Story

More Trending News