LIVE NOW
Published : Jan 18, 2026, 06:58 AM ISTUpdated : Jan 18, 2026, 09:45 AM IST

India Latest News Live: U19 ವಿಶ್ವಕಪ್ - ಮಳೆಯಾಟದ ನಡುವೆಯೂ ಬಾಂಗ್ಲಾದೇಶಕ್ಕೆ ಸೋಲುಣಿಸಿದ ಭಾರತ ಯುವ ಪಡೆ!

ಸಾರಾಂಶ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಚಿನ್ನ ನಾಪತ್ತೆ ಪ್ರಕರಣ ದೊಡ್ಡ ಸಂಚಲನ ಸೃಷ್ಟಿಸಿರುವ ನಡುವೆಯೇ ಮತ್ತೊಂದು ಅಕ್ರಮದ ಶಂಕೆ ವ್ಯಕ್ತವಾಗಿದ್ದು, ಪಡೆ ಪೂಜೆ ಕಾಣಿಕೆ ಹಂಚಿಕೆಯಲ್ಲಿಯೂ ಭ್ರಷ್ಟಾಚಾರ, ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳ( ವಿಎಸಿಬಿ)ಯ ಗುಪ್ತಚರ ವಿಭಾಗ ಬಹಿರಂಗ ಪಡಿಸಿದೆ. ಪವಿತ್ರ ಪಡಿಪೂಜೆಯ ಬುಕ್ಕಿಂಗ್‌, ಭಕ್ತರಿಗೆ ಟಿಕೆಟ್‌ ವಿತರಣೆಯಲ್ಲಿ ನಿಗದಿಗಿಂತ ಹಲವು ಪಟ್ಟು ಹೆಚ್ಚು ದರಕ್ಕೆ ಮಾರಾಟ, ಹಣ ನೀಡಿದವರಿಗೆ ಪೂಜೆಯಲ್ಲಿ ಆದ್ಯತೆ ಸೇರಿದಂತೆ ಅನೇಕ ಅಕ್ರಮ ನಡೆದಿರುವ ಸಾಧ್ಯತೆ ಬಗ್ಗೆ ವರದಿ ಮಾಡಿದೆ. ಮಾತ್ರವಲ್ಲದೇ ತಿರುವಾಂಕೂರು ದೇವಸ್ವಂ ಮಂಡಳಿ( ಟಿಡಿಬಿ) ಸಿಬ್ಬಂದಿ ಮತ್ತು ಇತರ ಏಜೆಂಟ್‌ಗಳು ಇದರಲ್ಲಿ ಭಾಗಿದಾರರು ಎಂದು ಉಲ್ಲೇಖಿಸಿದೆ.

Vaibhav Suryavanshi

09:45 AM (IST) Jan 18

U19 ವಿಶ್ವಕಪ್ - ಮಳೆಯಾಟದ ನಡುವೆಯೂ ಬಾಂಗ್ಲಾದೇಶಕ್ಕೆ ಸೋಲುಣಿಸಿದ ಭಾರತ ಯುವ ಪಡೆ!

ಐಸಿಸಿ ಅಂಡರ್‌-19 ವಿಶ್ವಕಪ್‌ನ ಮಳೆ ಪೀಡಿತ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 18 ರನ್‌ಗಳ ರೋಚಕ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂಡು ಅವರ ಅರ್ಧಶತಕಗಳ ನೆರವಿನಿಂದ ಭಾರತ ಉತ್ತಮ ಮೊತ್ತ ಕಲೆಹಾಕಿತು. 

Read Full Story

09:17 AM (IST) Jan 18

ಕಿವೀಸ್ ಎದುರು ಭಾರತಕ್ಕಿಂದು ಸರಣಿ ಗೆಲುವಿನ ಗುರಿ! ಟೀಂ ಇಂಡಿಯಾ ಮುಂದಿದೆ ಬಿಗ್ ಚಾಲೆಂಜ್!

ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಇಂದೋರ್‌ನಲ್ಲಿ ನಡೆಯಲಿದ್ದು, ಸರಣಿ 1-1 ಸಮಬಲಗೊಂಡಿದೆ. ತವರಿನಲ್ಲಿ ಸರಣಿ ಸೋಲದ ದಾಖಲೆ ಉಳಿಸಿಕೊಳ್ಳಲು ಭಾರತ ಸೆಣಸಿದರೆ, 1989ರಿಂದ ಭಾರತದಲ್ಲಿ ಏಕದಿನ ಸರಣಿ ಗೆಲ್ಲದ ನ್ಯೂಜಿಲೆಂಡ್‌ ಇತಿಹಾಸ ಬರೆಯುವ ಗುರಿಯಲ್ಲಿದೆ.
Read Full Story

More Trending News