Top 10 News ರಾವತ್ ಪಾರ್ಥೀವ ಶರೀರವಿದ್ದ ವಾಹನ ಅಪಘಾತ, ಗಂಗೂಲಿ ವಿರುದ್ದ ಫ್ಯಾನ್ಸ್ ಆಕ್ರೋಶ!

Published : Dec 09, 2021, 05:01 PM ISTUpdated : Dec 09, 2021, 08:34 PM IST
Top 10 News ರಾವತ್ ಪಾರ್ಥೀವ ಶರೀರವಿದ್ದ ವಾಹನ ಅಪಘಾತ, ಗಂಗೂಲಿ ವಿರುದ್ದ ಫ್ಯಾನ್ಸ್ ಆಕ್ರೋಶ!

ಸಾರಾಂಶ

ಬಿಪಿನ್ ರಾವತ್ ಪಾರ್ಥೀವ ಶರೀರ ಕೊಂಡಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಬಿಪಿನ್ ರಾವತ್ ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು? ವಿರಾಟ್ ಕೊಹ್ಲಿಯಿಂದ ಕಸಿದು ನಾಯಕತ್ವ ರೋಹಿತ್ ಶರ್ಮಾಗೆ ನೀಡಿದ ಬಿಸಿಸಿಐ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮದುವೆ ಮುಕ್ಕಾಲು ಖರ್ಚು ಕತ್ರಿನಾ ನೋಡಿಕೊಳ್ಳಲಿದ್ದಾರೆ. ರಾವತ್ ಕೊನೆಯ ಮಾತು, ಮಹೀಂದ್ರ ಡಿಸ್ಕೌಂಟ್ ಆಫರ್ ಸೇರಿದಂತೆ ಡಿಸೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Final Salute To Bipin Rawat: ಪ್ರಾರ್ಥಿವ ಶರೀರ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್‌ ಅಪಘಾತ!

ಸಿಡಿಎಸ್ ಬಿಪಿನ್ ರಾವತ್ ಅವರ ಮೃತದೇಹವನ್ನು ತಮಿಳುನಾಡಿನಿಂದ ದೆಹಲಿಗೆ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದ ಆಂಬುಲೆನ್ಸ್ ಮಾರ್ಗಮಧ್ಯೆ ಲಘು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಅಪಘಾತವು ದೊಡ್ಡದಲ್ಲದಿದ್ದರೂ, ಯಾರಿಗೂ ಗಂಭೀರ ಗಾಯಗಳಾಗಿಲ್ಲ. 

IAF Chopper Crash: ನೀಲಗರಿ ಬೆಟ್ಟದಲ್ಲಿ ಹೊಂಚು ಹಾಕಿತ್ತು ಸಾವು: ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು?

ರಾಷ್ಟ್ರ ರಕ್ಷಕ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್ ದುರ್ಮರಣ ಹೊಂದಿದ ವಾಯುಸೇನೆಯ ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು. ನೀಲಗಿರಿ ಪರ್ವತ ( Nilagiri Hills) ಹಾದಿಯಲ್ಲಿ ಹೆಲಿಕಾಪ್ಟರ್‌ ತೆರಳಿದ್ದೇ ತಪ್ಪಾಯ್ತಾ?  ಕಾಡಿನ ಮಧ್ಯೆ ಹೆಲಿಕಾಪ್ಟರ್‌ ಪತನಕ್ಕೆ ಸಿಗುತ್ತಿವೆ ಹಲವು ಕಾರಣಗಳು.ಅಸಲಿ ಮಿಸ್ಟೇಕ್‌ ಯಾರದ್ದು? ದೆಹಲಿ ಟು ಕೂನುರ್‌ Via ಕೊಯಮತ್ತೂರ್‌ ಮಾರ್ಗ ಮಧ್ಯೆ ಆಗಿದಾದ್ದರೇನು?

IAF Chopper Crash: ದುರಂತದಲ್ಲಿ ಮಡಿದ ಹರ್ಜಿಂದರ್ ಸಿಂಗ್ ಕರ್ನಾಟಕದ ಅಳಿಯ!

ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಬಿಪಿನ್ ರಾವತ್ ಆಪ್ತ ಕಾರ್ಯದರ್ಶಿ ಹರ್ಜಿಂದರ್ ಕೂಡಾ ಒಬ್ಬರು. ಸದ್ಯ ಬಂದ ಮಾಹಿತಿ ಅನ್ವಯ ಹರ್ಜಿಂದರ್ ಸಿಂಗ್ ಕರ್ನಾಟಕದ ಜೊತೆ ನಂಟು ಹೊಂದಿದ್ದಾರೆ.

Sonia Gandhi Birthday: ಹೆಲಿಕಾಪ್ಟರ್ ದುರಂತ, ಹುಟ್ಟುಹಬ್ಬ ಆಚರಣೆ ಬೇಡ ಎಂದ ಸೋನಿಯಾ, ಮೋದಿ ಟ್ವೀಟ್ ವಿಶ್

ತಮಿಳುನಾಡಿನ ಕೂನೂರ್​​ನಲ್ಲಿ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್ (Bipin Rawat) ಸೇರಿ 13 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ (Congress president ) ಸೋನಿಯಾ ಗಾಂಧಿ ಇಂದು ತಮ್ಮ ಹುಟ್ಟುಹಬ್ಬ (Sonia Gandhi) ಆಚರಣೆ ಮಾಡಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.

CDS Helicopter Crash: ಜೀವಂತವಾಗಿದ್ರು ಬಿಪಿನ್ ರಾವತ್, ಫೈರ್‌ ಮ್ಯಾನ್‌ ಬಳಿ ಹೇಳಿದ ಕೊನೆಯ ಮಾತಿದು!

ತಮಿಳುನಾಡಿನ ಕುನೂರಿನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದಾರೆ.

Virat Kohli Captaincy ತಲೆದಂಡ, ಬಿಸಿಸಿಐ ವಿರುದ್ದ ತಿರುಗಿಬಿದ್ದ ವಿರಾಟ್ ಫ್ಯಾನ್ಸ್‌..!

 ಭಾರತ ಕ್ರಿಕೆಟ್‌ ಕಂಡ ಅತ್ಯಂತ ಆಕ್ರಮಣಕಾರಿ ಹಾಗೂ ಯಶಸ್ವಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಬಿಸಿಸಿಐ (BCCI) ಏಕಾಏಕಿ ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. 

Katrina Kaif Wedding: ಅದ್ಧೂರಿ ಮದುವೆಯ ಮುಕ್ಕಾಲು ಖರ್ಚು ಕತ್ರೀನಾದ್ದು ?

Katrina Kaif Wedding: ಬಾಲಿವುಡ್ ಜೋಡಿಯ ಅದ್ಧೂರಿ ಮದುವೆ. ಕೋಟಿ ಕೋಟಿ ಸಂಪಾದಿಸೋ ಜೋಡಿ ಮದುವೆಗಾಗಿ ಹೇಗೆ ಖರ್ಚು ಮಾಡಿರುತ್ತಾರೆ ? ಕತ್ರೀನಾ ಮದುವೆಯಲ್ಲಿ ಖರ್ಚು ಹೆಣ್ಣಿನ ಕಡೆಯದಾ ?

Twitter Trends‌ in India: 2021ರಲ್ಲಿ ಟ್ವೀಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ ಯಾವುದು ಗೊತ್ತಾ?

ಭಾರತದಲ್ಲಿ 2021ರಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವೀಟರ್‌ನಲ್ಲಿ (Twitter) ಅತಿ ಹೆಚ್ಚು ಚರ್ಚಿಸಲಾದ ವಿಷಯಗಳ ಬಗ್ಗೆ  ಸಂಸ್ಥೆ ಗುರುವಾರ ಮಾಹಿತಿ ಬಹಿರಂಗಪಡಿಸಿದೆ. 2021ರ ಟ್ರೆಂಡ್‌ಗಳಲ್ಲಿ ಭಾರತದಲ್ಲಿ COVID-19 ಪರಿಹಾರಕ್ಕೆ  ದೇಣಿಗೆ ನೀಡಿದ ಕುರಿತ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ( Pat Cummins) ಅವರ ಟ್ವೀಟ್  ದೇಶದಲ್ಲಿ ಹೆಚ್ಚು ಮರುಟ್ವೀಟ್ ಮಾಡಲಾಗಿದೆ ಎಂದು ಟ್ವೀಟರ್‌ ತಿಳಿಸಿದೆ.

Mahindra car offers:ಡಿಸೆಂಬರ್ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್, ಗರಿಷ್ಠ 81,500 ರೂಪಾಯಿ ಉಳಿಸಿ!

ಮಹೀಂದ್ರ & ಮಹೀಂದ್ರ(Mahindra) ತನ್ನ ಆಯ್ದ ಕಾರುಗಳ(Cars) ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ(Offers). 2021ರ ವರ್ಷಾಂತ್ಯದ ರಿಯಾಯಿತಿ ಘೋಷಿಸಿರುವ ಮಹೀಂದ್ರ ಗ್ರಾಹಕರಿಗೆ ಕಾರು ಖರೀದಿ ಕನಸನ್ನು ಮತ್ತಷ್ಟು ಸುಲಭಗೊಳಿಸಿದೆ. ಸೆಪ್ಟೆಂಬರ್ ತಿಂಗಳಲ್ಲೂ ಮಹೀಂದ್ರ ಕೆಲ ಆಫರ್ ಘೋಷಿಸಿತ್ತು. ಆದರೆ ಈ ಬಾರಿ ಘೋಷಿಸಿರುವ ವರ್ಷಾಂತ್ಯದ ರಿಯಾಯಿತಿಯಲ್ಲಿ(December Offers) ಗರಿಷ್ಠ 81,500 ರೂಪಾಯಿ ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್