
ಮುಂಬೈ: ಜನವರಿಯಲ್ಲಿ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದ ಬಳಿಕ ಪತ್ನಿ ಕರೀನಾ ಕಪೂರ್ ಮೇಲೆಯೂ ಸಹ ದಾಳಿಯ ಯತ್ನ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಸೈಫ್ರನ್ನು ಮನೆಗೆ ಕರೆತರಲು ಕರೀನಾ ಆಸ್ಪತ್ರೆಗೆ ಹೊರಟಿದ್ದರು. ಈ ವೇಳೆ ಸೈಫರ್ರನ್ನು ಮನೆಗೆ ಕರೆತರುವ ವೇಳೆ ಕರೀನಾ ಅವರ ಕಾರಿನ ಮೇಲೆ ಅನಾಮಿಕರು ದಾಳಿ ಮಾಡಿ, ಕಾರು ಅಲುಗಾಡುವಂತೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕರೀನಾ, ವಾಪಸ್ ಮನೆಗೆ ತೆರಳಿ ಸೈಫ್ರನ್ನು ಮನೆಗೆ ತರುವ ಹೊಣೆ ನನಗೆ ವಹಿಸಿದ್ದರು ಎಂದು ಹಾಲಿ ನಟನ ಮನೆಯ ಭದ್ರತೆ ವಹಿಸಿಕೊಂಡಿರುವ ರೋನಿತ್ ರಾಯ್ ಹೇಳಿದ್ದಾರೆ.
'ಶತ್ರು ಆಸ್ತಿ' ಕಬಳಿಸಿದ Saif Ali? 15 ಸಾವಿರ ಕೋಟಿ ರೂ. ಆಸ್ತಿ ಕೈತಪ್ಪತ್ತಾ?
15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಅವರ ಮಧ್ಯಪ್ರದೇಶದ ಕುಟುಂಬಕ್ಕೆ ಭಾರಿ ಹಿನ್ನಡೆಯಾಗಿದೆ. ಭೋಪಾಲ್ನಲ್ಲಿರುವ ಪಟೌಡಿ ಕುಟುಂಬದ ಹಲವು ಆಸ್ತಿಗಳನ್ನು 'ಶತ್ರು ಆಸ್ತಿ' ಎಂದು ಹೈಕೋರ್ಟ್ ಹೇಳಿರುವ ಕಾರಣದಿಂದಾಗಿ ಅಷ್ಟೂ ಆಸ್ತಿ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಈ ಆಸ್ತಿಯು ಪಟೌಡಿ ಅರ್ಥಾತ್ ಸೈಫ್ ಅಲಿಯ ಮುತ್ತಜ್ಜನ ಕುಟುಂಬಕ್ಕೆ ಸೇರಬೇಕು ಎನ್ನುವ 25 ವರ್ಷಗಳಷ್ಟು ಹಳೆಯದಾದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ವಜಾ ಮಾಡಿರುವ ಹಿನ್ನೆಲೆಯಲ್ಲಿ, ಇದೀಗ ಈ ಆಸ್ತಿಯ ಕುರಿತಂತೆ ಸಂಪೂರ್ಣ ತನಿಖೆ ಹೊಸದಾಗಿ ನಡೆಯಲಿದೆ. ಈ ಮೂಲಕ ಸೈಫ್ ಅಲಿ ಖಾನ್ ಹಾಗೂ ತಾಯಿ ಶರ್ಮಿಳಾ ಪಟೌಡಿ, ಸೋದರಿಯರಾದ ಸೋಹಾ, ಸಬಾ ಅವರಿಗೆ ಕಾನೂನು ಹೋರಾಟದಲ್ಲಿ ಹೈಕೋರ್ಟ್ನಲ್ಲಿ ಭಾರೀ ಹಿನ್ನಡೆ ಆಗಿದೆ.
ಏನಿದು ವಿವಾದ? ಶತ್ರು ಆಸ್ತಿ ಕಾಯ್ದೆ ಎಂದರೇನು?
2000 ನೇ ಇಸವಿಯಲ್ಲಿ, ವಿಚಾರಣಾ ನ್ಯಾಯಾಲಯವು ಈ ಆಸ್ತಿಗಳನ್ನು ನವಾಬ್ ಹಮೀದುಲ್ಲಾ ಖಾನ್ ಅವರ ಮೊದಲ ಪತ್ನಿಯ ಮಗಳು ಸಾಜಿದಾ ಸುಲ್ತಾನ್ಗೆ ನೀಡುವ ನಿರ್ಧಾರವನ್ನು ನೀಡಿತ್ತು. ಸಾಜಿದಾ ಸುಲ್ತಾನ್ ಸೈಫ್ ಅವರ ಮುತ್ತಜ್ಜಿಯಾಗಿದ್ದರು. ಆದರೆ ಹೈಕೋರ್ಟ್ ಈ ತೀರ್ಪನ್ನು ತಿರಸ್ಕರಿಸಿದೆ ಮತ್ತು ಈ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಬೇಕೆಂದು ಹೇಳಿದೆ. ಈ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕೆಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
1958 ರಲ್ಲಿ ಜಾರಿಗೆ ತರಲಾದ ಈ ಕಾಯ್ದೆಯು ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋದ ಮಾಲೀಕರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ ಆಸ್ತಿಗಳಿಗೆ ಅನ್ವಯಿಸುತ್ತದೆ. 1965 ರ ಭಾರತ-ಪಾಕ್ ಯುದ್ಧದ ನಂತರ, ಸರ್ಕಾರವು ಅಂತಹ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಈ ಕಾನೂನನ್ನು ಬಿಗಿಗೊಳಿಸಲಾಯಿತು. ನವಾಬ್ ಹಮೀದುಲ್ಲಾ ಖಾನ್ ಅವರ ಮಗಳು ಅಬಿದಾ ಸುಲ್ತಾನ್ ಪಾಕಿಸ್ತಾನದಲ್ಲಿ ನೆಲೆಸಲು ಆಯ್ಕೆ ಮಾಡಿಕೊಂಡ ಕಾರಣ ಪಟೌಡಿ ಕುಟುಂಬದ ಈ ಆಸ್ತಿಯೂ ಈ ವರ್ಗಕ್ಕೆ ಸೇರುತ್ತಿದೆ. ಈ ಕಾರಣದಿಂದಾಗಿ, ಭೋಪಾಲ್ನ ಈ ಆಸ್ತಿಗಳು ಈಗ ಸರ್ಕಾರದ ವ್ಯಾಪ್ತಿಗೆ ಬಂದಿವೆ. ಆದ್ದರಿಂದ ಈ ಬಗ್ಗೆ ಪುನಃ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ. ಇವು ತಮಗೇ ಸಲ್ಲಬೇಕು ಎಂದಿದ್ದ ಸೈಫ್ ಕುಟುಂಬದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ