ಆಕ್ಸ್‌ಫರ್ಡ್‌ ಹಾರ್ವರ್ಡ್‌ನಲ್ಲಿ ಓದಿದ ವಕೀಲರು ಭಾರತೀಯತೆಯನ್ನು ಮರೆಯಬಾರದು

By Anusha KbFirst Published May 4, 2023, 9:46 AM IST
Highlights

ಭಾರತದ ಅನೇಕ ವಕೀಲರು ಮತ್ತು ನ್ಯಾಯಾಧೀಶರು ಇಂಗ್ಲಿಷ್‌ನಲ್ಲಿ ಯೋಚಿಸುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ಅವರು ತಮ್ಮ ಆಲೋಚನೆಗಳಲ್ಲಿ ನಡೆಗಳಲ್ಲಿ 'ಭಾರತೀಯರು' ಆಗಿ ಇರುವುದು ಅಗತ್ಯ ಹಾಗೂ ಬಹಳ ಮುಖ್ಯ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು  ಹೇಳಿದ್ದಾರೆ.

ನವದೆಹಲಿ: ಹಾರ್ವರ್ಡ್ ಮತ್ತು ಆಕ್ಸ್‌ಫರ್ಡ್‌ನಂತಹ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದಿರುವ ಭಾರತದ ಅನೇಕ ವಕೀಲರು ಮತ್ತು ನ್ಯಾಯಾಧೀಶರು ಇಂಗ್ಲಿಷ್‌ನಲ್ಲಿ ಯೋಚಿಸುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ಅವರು ತಮ್ಮ ಆಲೋಚನೆಗಳಲ್ಲಿ ನಡೆಗಳಲ್ಲಿ 'ಭಾರತೀಯರು' ಆಗಿ ಇರುವುದು ಅಗತ್ಯ ಹಾಗೂ ಬಹಳ ಮುಖ್ಯ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು  ಹೇಳಿದ್ದಾರೆ.

ಇಂಗ್ಲಿಷ್ ಮಾತನಾಡುವ ವಕೀಲರು ಸ್ಥಳೀಯ ಭಾಷೆಗಳಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಹೆಚ್ಚು ಶುಲ್ಕವನ್ನು ಪಡೆಯುತ್ತಿರುವ ಬಗ್ಗೆಯೂ ಕಾನೂನು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.  ಭಾರತದಲ್ಲಿರುವ ಅನೇಕ ಒಳ್ಳೆಯ ನ್ಯಾಯಾಧೀಶರು ಹಾಗೂ ವಕೀಲರು ವಿದೇಶಿ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್‌(Harvard)  ಹಾಗೂ ಆಕ್ಸ್‌ಫರ್ಡ್‌ಗಳಲ್ಲಿ  (Oxford) ಶಿಕ್ಷಣ ಪಡೆದವರಾಗಿದ್ದು, ಅವರು ಮಾತು ಹಾಗೂ ಯೋಚನೆ ಕೂಡ ಇಂಗ್ಲೀಷ್‌ನಲ್ಲೇ ಇರುತ್ತದೆ. ಆದರೆ  ಮೂಲದಲ್ಲಿ ಹಾಗೂ  ಆಲೋಚನೆಯಲ್ಲಿ ಅವರು ಭಾರತೀಯರಾಗಿ ಉಳಿಯುವುದು  ಬಹಳ ಅಗತ್ಯ. ಇದರಿಂದ ಅವರು ಬಹಳ ವಿನಮ್ರರಾಗಬಹುದು ಎಂದು ಕಾನೂನು ಸಚಿವ ಕಿರೆನ್ ರಿಜಿಜು ಹೇಳಿದರು. 

ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ, ಜಮ್ಮು ರಸ್ತೆಯಲ್ಲಿ ಘಟನೆ!

ಕುತೂಹಲಕಾರಿ ಅಂಶವೆಂದರೆ ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ .ಚಂದ್ರಚೂಡ್ (DY Chandrachud) ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ (Harvard University) ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಇಂಗ್ಲಿಷ್ ಮಾತನಾಡುವ ವಕೀಲರು ಹೆಚ್ಚು ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.  ದೆಹಲಿ ನ್ಯಾಯಾಲಯದಲ್ಲಿ ಇಂಗ್ಲಿಷ್‌ನ ಮೇಲಿನ ಅಧಿಕಾರದ ಆಧಾರದ ಮೇಲೆ ವಕೀಲರಿಗೆ ಪಾವತಿಸುವ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.  ಇಂಗ್ಲಿಷ್ ಚೆನ್ನಾಗಿ ಮಾತನಾಡುವ ವಕೀಲರಿಗಿಂತ ಭಾರತೀಯ ಭಾಷೆಗಳಲ್ಲಿ ಮಾತನಾಡುವ ವಕೀಲರು ಹೆಚ್ಚು ಸಮರ್ಥರಾಗಿದ್ದಾರೆ ಎಂಬ ಅಂಶವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ರಿಜಿಜು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಕೆಲವು ವಕೀಲರಿದ್ದಾರೆ, ಅವರ ಕಾನೂನು ಜ್ಞಾನವನ್ನು ಲೆಕ್ಕಿಸದೆ, ಅವರು ಉತ್ತಮ ಇಂಗ್ಲಿಷ್ ಮಾತನಾಡುತ್ತಾರೆ ಎಂಬ ಕಾರಣದಿಂದ ಹೆಚ್ಚು ಸಂಬಳ ಪಡೆಯುತ್ತಾರೆ. ನೀವು ಚೆನ್ನಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತೀರಿ ಎಂಬ ಕಾರಣಕ್ಕಾಗಿ ನೀವು ಹೆಚ್ಚು ಹಣವನ್ನು ಪಡೆಯುತ್ತೀರಿ ಎಂಬುದು ಸರಿಯಲ್ಲ. ಸ್ವಲ್ಪ ಯೋಚಿಸಿ, ಮರಾಠಿ (Marathi), ಹಿಂದಿಯಲ್ಲಿ (Hindi) ಉತ್ತಮ ಹಿಡಿತ ಹೊಂದಿರುವ ವಕೀಲರಿದ್ದಾರೆ, ಆದರೆ ಅವರ ಶುಲ್ಕ ಕಡಿಮೆ ಇರುತ್ತದೆ, ಏಕೆಂದರೆ ಅವರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು. ಮುಂದೆ ಇಂತಹ ಪ್ರವೃತ್ತಿ ರಾಷ್ಟ್ರಕ್ಕೆ ಒಳ್ಳೆಯದಲ್ಲ, ಕಾನೂನು ಬಾಂಧವರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.

ಸೂರತ್‌ ಕೋರ್ಟ್‌ನಲ್ಲಿ ಕೈ ಶಕ್ತಿ ಪ್ರದರ್ಶನ: ನ್ಯಾಯಾಲಯಕ್ಕೆ ಒತ್ತಡ ಹೇರುವ ಬಾಲಿಶ ಪ್ರಯತ್ನ ಎಂದ ಬಿಜೆಪಿ

ನಮ್ಮ ನ್ಯಾಯಾಲಯಗಳು ಭಾರತೀಯ ಭಾಷೆಗಳಿಗಿಂತ ಇಂಗ್ಲಿಷ್‌ಗೆ ಆದ್ಯತೆ ನೀಡಿದ ಪರಿಣಾಮ ಇದು ಎಂದು ರಿಜಿಜು ಅಭಿಪ್ರಾಯ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಕಲಾಪಗಳನ್ನು ನಡೆಸುವಾಗ ಹೆಚ್ಚಿನ ಪ್ರಾದೇಶಿಕ ಭಾಷೆಗಳನ್ನು ಬಳಸುವುದನ್ನು ಪರಿಗಣಿಸುವಂತೆ ಅವರು ಸುಪ್ರೀಂಕೋರ್ಟ್‌ಗೆ ಸಲಹೆ ನೀಡಿದರು.

ಭಾರತೀಯ ನ್ಯಾಯಾಲಯಗಳಲ್ಲಿ ನಮ್ಮದೇ ಭಾಷೆಗಳನ್ನು ಏಕೆ ಬಳಸಲು ಸಾಧ್ಯವಾಗುತ್ತಿಲ್ಲ? ಮಹಾರಾಷ್ಟ್ರದಲ್ಲಿ ನಾವು ಮರಾಠಿಯನ್ನು ಏಕೆ ಬಳಸಬಾರದು? ನೀವು ಈ ದಿಕ್ಕಿನಲ್ಲಿ ಯೋಚಿಸಲು ಆರಂಭಿಸಿ ಎಂದು ನಾವು ಸುಪ್ರೀಂಕೋರ್ಟ್‌ಗೆ (Supreme Court) ಕೇಳಿದ್ದೇವೆ  ಮತ್ತು ಎಲ್ಲಾ ಹೈಕೋರ್ಟ್‌ಗಳಿಗೂ ಕೇಳಿದ್ದೇವೆ.  ರಾಜ್ಯದ ಉದ್ದೇಶ ಬಹಳ ಸ್ಪಷ್ಟವಾಗಿದೆ ಎಂದು ರಿಜಿಜು ಹೇಳಿದರು.

ನ್ಯಾಯಾಧೀಶರು ಹೇಳುವುದನ್ನು ತಕ್ಷಣವೇ ಲಿಪ್ಯಂತರ ಮಾಡುವ ಅಥವಾ ಅನುವಾದಿಸುವ ತಂತ್ರಜ್ಞಾನವನ್ನು ದೇಶ ಹೊಂದಿದೆ ಎಂದು ಅವರು ಹೇಳಿದರು. ಮಹಾರಾಷ್ಟ್ರದ 384 ವಕೀಲರ ಸಂಘಗಳಿಗೆ ಇ-ಫೈಲಿಂಗ್ ಘಟಕಗಳು ಮತ್ತು ಸೌಲಭ್ಯ ಕೇಂದ್ರಗಳ ವಿತರಣೆಗಾಗಿ ಮುಂಬೈನಲ್ಲಿ ಮಹಾರಾಷ್ಟ್ರ(Maharashtra) ಮತ್ತು ಗೋವಾದ (Goa) ಬಾರ್ ಕೌನ್ಸಿಲ್ (bar association) ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವರು ಮಾತನಾಡಿದರು. 
 

click me!