ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!

Published : Sep 05, 2023, 09:14 AM ISTUpdated : Sep 05, 2023, 09:15 AM IST
ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!

ಸಾರಾಂಶ

 ಒಡಿಶಾದಲ್ಲಿ ಶನಿವಾರ ಕೇವಲ 2 ತಾಸುಗಳಲ್ಲಿ ಬರೋಬ್ಬರಿ 61 ಸಾವಿರ ಸಿಡಿಲು ಬಡಿದಿದ್ದು, ರಾಜ್ಯದ ವಿವಿಧೆಡೆ 10 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಅತಿಹೆಚ್ಚು ಸಿಡಿಲು ಬಡಿಯುವ ರಾಜ್ಯ ಒಡಿಶಾ ಆಗಿದ್ದು, ಪ್ರತಿ ವರ್ಷ ನೂರಾರು ಜನರು ಸಾವನ್ನಪ್ಪುತ್ತಾರೆ.

ಭುವನೇಶ್ವರ (ಸೆ.5): ಕೇವಲ ಎರಡು ತಾಸುಗಳ ಅವಧಿಯಲ್ಲಿ ಬರೋಬ್ಬರಿ 61 ಸಾವಿರ ಸಿಡಿಲುಗಳು ಅಪ್ಪಳಿಸಿದ್ದರಿಂದ ಒಡಿಶಾದ ಆಯ್ದ ಭಾಗಗಳು ಶನಿವಾರ ಭೀತಿಯಿಂದ ತತ್ತರಿಸಲ್ಪಟ್ಟಿವೆ. ಈ ಸಿಡಿಲು ದಾಳಿಯಲ್ಲಿ 10 ಜನರು ಮೃತಪಟ್ಟಿದ್ದಾರೆ.

Bengaluru crime: ಡ್ರಗ್ಸ್ ಮಾರುತ್ತಿದ್ದ ಒಡಿಶಾ ಮೂಲದ 7 ಮಂದಿ ಸೆರೆ

ಶನಿವಾರ ಮಧ್ಯಾಹ್ನ ಭುವನೇಶ್ವರ ಹಾಗೂ ಆಸುಪಾಸಿನಲ್ಲಿ ಮಧ್ಯಾಹ್ನ ಮಳೆಯಾಯಿತು. ಆನಂತರ ಎರಡು ತಾಸುಗಳ ಅವಧಿಯಲ್ಲಿ 61 ಸಾವಿರ ಸಿಡಿಲುಗಳು ಅಬ್ಬರಿಸಿದವು. ಈ ಪೈಕಿ 36597 ಸಿಡಿಲುಗಳು ಮೋಡದಿಂದ ಮೋಡಕ್ಕೆ ಹಾಗೂ 25,753 ಸಿಡಿಲು ಮೋಡದಿಂದ ಭೂಮಿಗೆ ಅಪ್ಪಳಿಸಿತು. ಇದರಿಂದ ಜನರು ಆತಂಕಕ್ಕೆ ಒಳಗಾಗುವಂತಾಯಿತು. ವಿವಿಧ ಜಿಲ್ಲೆಗಳಲ್ಲಿ ಸಿಡಿಲಿಗೆ 10 ಜನರು ಬಲಿಯಾಗಿದ್ದಾರೆ ಎಂದು ಒಡಿಶಾ ರಾಜ್ಯ ಹವಾಮಾನ ಇಲಾಖೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿದೆ.

ಬೆಳಗಾವಿ ವಿಭಜನೆ ವಿಚಾರದ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ: ಡಿ.ಕೆ.ಶಿವಕುಮಾರ್‌

ಭಾರೀ ಸಿಡಿಲು ಏಕೆ?: ಬಂಗಾಳಕೊಲ್ಲಿಯಿಂದ ಬೀಸಿ ಬರುತ್ತಿರುವ ಗಾಳಿಯಿಂದ ವಾತಾವರಣದಲ್ಲಿ ಶಾಖ ಮತ್ತು ಆದ್ರ್ರತೆ ಹೆಚ್ಚಾಗಿರುವುದರಿಂದ ಸಿಡಿಲು ಬಡಿಯುವುದು ಸಾಮಾನ್ಯವಾಗುತ್ತಿದೆ. ಅತಿಯಾದ ಬಿಸಿ ಗಾಳಿ ಹವಾಮಾನ ಬದಲಾವಣೆಯ ಜೊತೆಗೆ ಸಿಡಿಲು ಬಡಿಯಲು ಕಾರಣವಾಗುತ್ತಿದೆ. ಅಲ್ಲದೇ ಬಂಗಾಳ ಕೊಲ್ಲಿಯ ಮಾರುತದಿಂದ ಹೆಚ್ಚಾಗುತ್ತಿರುವ ಆದ್ರ್ರತೆ ಸಿಡಿಲು ಹೆಚ್ಚಳಕ್ಕೆ ಕಾರಣ ಎಂದು ಭುವನೇಶ್ವರದ ಐಎಂಡಿ ನಿರ್ದೇಶಕ ಎಸ್‌.ಸಿ.ಸಾಹು ಹೇಳಿದ್ದಾರೆ.

ಸಿಡಿಲಿಗೆ ನೂರಾರು ಸಾವು: ಒಡಿಶಾ ದೇಶದಲ್ಲೇ ಅತಿ ಹೆಚ್ಚು ಸಿಡಿಲು ಬಡಿತಕ್ಕೆ ಒಳಗಾಗುವ ರಾಜ್ಯವಾಗಿದೆ. 2020-21ರಲ್ಲಿ ರಾಜ್ಯದಲ್ಲಿ ಒಟ್ಟಾರೆ 20.43 ಲಕ್ಷ ಸಿಡಿಲು ದಾಖಲಾಗಿದ್ದವು. ಸಿಡಿಲು ಬಡಿತಕ್ಕೆ ಪ್ರತಿ ವರ್ಷ ರಾಜ್ಯದಲ್ಲಿ 150-200 ಜನರು ಸಾವನ್ನಪ್ಪುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?