ಬೆಂಗಳೂರಲ್ಲಿ ಮಾಲಿನ್ಯದಿಂದ ವೀರ್ಯದ ಆರೋಗ್ಯ ಕ್ಷೀಣ; ವೈದ್ಯರು ಕಳವಳ

Published : Feb 24, 2025, 10:57 AM ISTUpdated : Feb 24, 2025, 11:00 AM IST
ಬೆಂಗಳೂರಲ್ಲಿ ಮಾಲಿನ್ಯದಿಂದ ವೀರ್ಯದ ಆರೋಗ್ಯ ಕ್ಷೀಣ; ವೈದ್ಯರು ಕಳವಳ

ಸಾರಾಂಶ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಾಲಿನ್ಯವು ವೀರ್ಯದ ಆರೋಗ್ಯವನ್ನು ಕುಂದಿಸುತ್ತಿದೆ ಎಂದು ಡಾ. ಪ್ರವೀಣ್ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಬಂಜೆತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುರುಷರಿಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ.

ಬೆಂಗಳೂರು (ಫೆ.24) : ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ವೀರ್ಯದ ಆರೋಗ್ಯ ಸ್ಥಿತಿಯನ್ನು ಕಡಿಮೆ ಮಾಡುತ್ತಿದೆ ಎಂದು ಸಿಐಸಿ 2025 ಸಂಘಟನಾ ಅಧ್ಯಕ್ಷ ಡಾ ಪ್ರವೀಣ್ ಜೋಶಿ ಕಳವಳ ವ್ಯಕ್ತಪಡಿಸಿದರು.

ಗ್ಲೋಬಲ್ ಹೆಲ್ತ್ ಅಕಾಡೆಮಿ ಆಯೋಜಿಸಿದ್ದ ಸಿಐಸಿ 2025 ಸಮಾವೇಶದಲ್ಲಿ ಅವರು ಮಾತನಾಡಿ, ‘ನಗರ ಪ್ರದೇಶಗಳಲ್ಲಿ ಬಂಜೆತನ ಪ್ರಕರಣ ಹೆಚ್ಚಾಗುತ್ತಿವೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಶೇ.40-50 ರಷ್ಟು ಬಂಜೆತನ ಪ್ರಕರಗಳು ಪುರುಷರಿಗೆ ಸಂಬಂಧಿಸಿವೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟ ವೀರ್ಯದ ಆರೋಗ್ಯ ಸ್ಥಿತಿಯನ್ನು ಕಡಿಮೆ ಮಾಡಲು ಕಾರಣವಾಗಿದೆ. 

ವೀರ್ಯಾಣು ಕಡಿಮೆ ಇರುವುದು, ಹಾರ್ಮೋನು ಅಸಮತೋಲನ, ಅನುವಂಶಿಕ ಪರಿಸ್ಥಿತಿ ಜೊತೆಗೆ ಧೂಮಪಾನ, ಅತಿಯಾದ ಮದ್ಯಪಾನ, ಬೊಜ್ಜು ಮತ್ತು ದೀರ್ಘಕಾಲಗೆ ಶಾಖ ಮತ್ತು ವಿಕಿರಣಕ್ಕೆ ಒಡ್ಡಿಕೊಳ್ಳುವಂತಹ ಜೀವನಶೈಲಿ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಜಿಮ್‌ಗೆ ಹೋಗುವವರಲ್ಲಿ ಪುರುಷ ಬಂಜೆತನ ಹೆಚ್ಚಳ! ತಜ್ಞರಿಂದ ಆಘಾತಕಾರಿ ಸಂಗತಿ ಬಹಿರಂಗ!

ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ನಿರಂಜನ್‌, ಸಮಗ್ರ ಬಂಜೆತನ ನಿವಾರಣೆಗೆ ಸಂತಾನೋತ್ಪತ್ತಿ ಔಷಧದಲ್ಲಿನ ಇತ್ತೀಚಿನ ಆವಿಷ್ಕಾರ, ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿ ಹೆಚ್ಚು ನೆರವಾಗುತ್ತಿದೆ. ಬಂಜೆತನ ನಿರ್ವಹಣೆಗೆ ಹೊಸ ಒಳನೋಟಗಳು ಮತ್ತು ಪರಿಹಾರ ಒದಗಿಸಬೇಕಿದೆ. ವೈದ್ಯಕೀಯ ಪ್ರಗತಿಯನ್ನು ರೋಗಿ-ಕೇಂದ್ರಿತ ವಿಧಾನದೊಂದಿಗೆ ಸಂಯೋಜನೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಮಹಿಳೆಯರ ಬಂಜೆತನದ ಬಗ್ಗೆ ಮತನಾಡಿದ ಡಾ. ಮೇಘನಾ ನ್ಯಾಪತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಪ್ರಕಾರ, ವಿವಾಹವಾದ 15 ರಿಂದ 49 ರ ವಯೋಮಾನದ ಪ್ರತಿ ಸಾವಿರ ಮಹಿಳೆಯರಲ್ಲಿ 18.7 ರಷ್ಟು ಮಂದಿಯಲ್ಲಿ ಬಂಜೆತನ ಸಮಸ್ಯೆ ಎದುರಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯನ್ನು ಸುಧಾರಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

ಇದನ್ನೂ ಓದಿ: ಮಾನವನ ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್, ಹೆಚ್ಚುತ್ತಿದೆ ಪುರುಷ ಬಂಜೆತನದ ಅಪಾಯ!

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷ ಡಾ। ಬಿ.ಎಸ್.ಅಜಯ್ ಕುಮಾರ್, ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕಿ ಡಾ। ಅಂಜಲಿ ಅಜಯ್ ಕುಮಾರ್, ಡಾ। ಮೇಘನಾ, ಡಾ। ಪ್ರವೀಣ್ ಜೋಶಿ, ನಗರದ 300ಕ್ಕೂ ಅಧಿಕ ಖ್ಯಾತ ಸ್ತ್ರೀರೋಗ ತಜ್ಞರು ಪಾಲ್ಗೊಂಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ