ಭೂಮಿಕಾಗೆ ಕ್ಯಾನ್ಸರ್ ಇರುವುದು ಗೌತಮ್ಗೆ ಗೊತ್ತಾಗಿ ಆತ ಮಂಕಾಗಿದ್ದಾನೆ. ಈ ನಡುವೆ, ಮನೆಯಲ್ಲಿ ಏನೋ ನಡೆಯುತ್ತಿದೆ ಎಂದು ಶಕುಂತಲಾಗೆ ಅನುಮಾನ ಮೂಡಿದ್ದು, ಸತ್ಯ ತಿಳಿಯಲು ಪ್ರಯತ್ನಿಸುತ್ತಿದ್ದಾಳೆ. ಇತ್ತ ಭೂಮಿಕಾ ವೈರಾಗ್ಯದಿಂದ ತನ್ನ ಜವಾಬ್ದಾರಿಗಳನ್ನು ಹಸ್ತಾಂತರಿಸುತ್ತಿದ್ದಾಳೆ.
ಅಮೃತಧಾರೆ ಸೀರಿಯಲ್ನಲ್ಲಿ ಶೋಕದ ಛಾಯೆ ಆವರಿಸಿದ್ರೆ, ಶಕುಂತಲಾಗೆ ಮಾತ್ರ ತನ್ನ ಬೆನ್ನ ಹಿಂದೆ ಏನೋ ನಡೀತಾ ಇದೆ ಎಂಬ ಬಲವಾದ ಅನುಮಾನ ಮೂಡಿದೆ. ಗೌತಮ್ ಜೊತೆ ಮಾತನಾಡಿದ್ರೂ ಶಕುಂತಲಾಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ವಿಷಯ ತಿಳಿಯದ ಕಾರಣ ಶಕುಂತಲಾ ವಿಲವಿಲ ಅಂತ ಒದ್ದಾಡುತ್ತಿದ್ದಾಳೆ.
25
ಕ್ಯಾನ್ಸರ್ ವಿಷಯ ಬಯಲಾಗುತ್ತಾ?
ಇಲ್ಲಿವರೆಗಿನ ಸಂಚಿಕೆಗಳ ಪ್ರಕಾರ, ಭೂಮಿಕಾಗೆ ಕ್ಯಾನ್ಸರ್ ಇರೋ ವಿಷಯ ಗೌತಮ್, ಮಲ್ಲಿ, ಆನಂದ್ ಮತ್ತು ಅಪರ್ಣಾಗೆ ಮಾತ್ರ ತಿಳಿದಿದೆ. ಮಗ ಜೈದೇವ್ನನನ್ನು ಮನೆಗೆ ಕರೆದುಕೊಂಡು ಬರಲು ಮತ್ತು ಎಲ್ಲಾ ಆಸ್ತಿಯನ್ನು ಆತನ ಹೆಸರಿಗೆ ಮಾಡಿಸಲು ಶಕುಂತಲಾ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾಳೆ. ಭೂಮಿಕಾಳ ಕ್ಯಾನ್ಸರ್ ವಿಷಯ ತಿಳಿದ್ರೆ ಶಕುಂತಲಾ ಅದನ್ನು ಲಾಭಕ್ಕೆ ಬಳಸಿಕೊಳ್ಳೋದು ಗ್ಯಾರಂಟಿಯಾಗಿದೆ.
35
ಭೂಮಿಕಾಗೆ ವೈರಾಗ್ಯ, ಗೌತಮ್ ಮಂಕು
ಕ್ಯಾನ್ಸರ್ ಅಂತ ಗೊತ್ತಾಗುತ್ತಿದ್ದಂತೆ ಭೂಮಿಕಾಗೆ ವೈರಾಗ್ಯ ಉಂಟಾಗಿದ್ದು, ತನ್ನೆಲ್ಲಾ ಜವಾಬ್ದಾರಿಗಳನ್ನು ಹಸ್ತಾಂತರಿಸುತ್ತಿದ್ದಾಳೆ. ಹಾಗೆಯೇ ಮಕ್ಕಳಿಗೂ ತಮ್ಮ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕೆಂದು ಕಲಿಸುತ್ತಿದ್ದಾಳೆ. ಇತ್ತ ಪತ್ನಿಯ ಅನಾರೋಗ್ಯದ ವಿಷಯ ತಿಳಿದು ಗೌತಮ್ ಸಹ ಮಂಕಾಗಿ ಕುಳಿತಿದ್ದಾನೆ.
ನಿದ್ದೆಯಿಲ್ಲದೇ ಯೋಚನೆಯಲ್ಲಿ ಮಗ್ನನಾಗಿದ್ದ ಗೌತಮ್ ಬಾಯಿಬಿಡಿಸಲು ಶಕುಂತಲಾ ಪ್ರಯತ್ನಿಸಿದ್ದಾಳೆ. ಭೂಮಿಕಾ ಶಾಲೆಯ ಕೆಲಸ ಬಿಟ್ಟಿದ್ಯಾಕೆ? ನಿಮ್ಮಿಬ್ಬರ ನಡುವೆ ಎಲ್ಲವೂ ಸರಿಯಾಗಿದೆಯಾ ಎಂದು ಶಕುಂತಲಾ ಪ್ರಶ್ನೆ ಮಾಡಿದ್ದಾಳೆ. ಆದ್ರೆ ಗೌತಮ್ ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾನೆ. ಆದರೆ ಗೌತಮ್ ನೀಡಿರುವ ಉತ್ತರ ಶಕುಂತಲಾಗೆ ಸಮಾಧಾನ ತಂದಿಲ್ಲ.
55
ಜೈದೇವ್ ಹಿಂದೆಯೇ ಆಪತ್ತು
ಇತ್ತ ಜೈದೇವ್ ಬೆನ್ನಹಿಂದೆಯೇ ಜೀವ ನಿಂತಿದ್ದು, ಆತನ ಪ್ರೇಯಸಿ ದಿಯಾ ಬೇಬಿ ಎಲ್ಲಿ ಹೋದ್ಳು ಎಂದು ಹುಡುಕಾಟ ನಡೆಸುತ್ತಿದ್ದಾನೆ. ಜೈದೇವ್ ಕುತಂತ್ರದಿಂದ ಜೈಲುಪಾಲಾಗಿರುವ ದಿಯಾ ಪ್ರಿಯಕರ ಮತ್ತು ಗೆಳೆಯ ಗೋಕುಲ್ಗಾಗಿ ಜೀವ ಹುಡುಕಾಟ ನಡೆಸುತ್ತಿದ್ದಾನೆ. ಈ ಕೆಲಸಕ್ಕೆ ಐಪಿಎಸ್ ಮಲ್ಲಿ ಎಂಟ್ರಿ ಕೊಟ್ರೆ ಜೈದೇವ್ ಜೈಲು ಪಾಲಾಗೋದು ಗ್ಯಾರಂಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.