ಭೂಮಿಕಾ ಮತ್ತು ಮಲ್ಲಿ, ಜೈದೇವ್ನನ್ನು ಹನಿಟ್ರ್ಯಾಪ್ ಮಾಡಲು ಮಧುರಾಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಪಬ್ನಲ್ಲಿ ಜೀವಾ ಜೊತೆ ಮಾತನಾಡುವಾಗ ಮಧುರಾ ಸಿಕ್ಕಿಬೀಳುವ ಹಂತ ತಲುಪಿದ್ದಾಳೆ. ಮಧುರಾ ಪೊಲೀಸ್ ಎಂಬ ಸತ್ಯ ಜೈದೇವ್ಗೆ ತಿಳಿದರೆ ಮುಂದೇನಾಗಬಹುದು ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾ ಮತ್ತು ಮಲ್ಲಿ ಜೊತೆಯಾಗಿ ಜೈದೇವ್ನನ್ನು ಹನಿಟ್ರ್ಯಾಪ್ಗೆ ಬೀಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೈದೇವ್ ವಿರುದ್ಧ ಮಧುರಾ ಎಂಬ ಬಲೆ ಬೀಸಿದ್ದಾರೆ. ಆದ್ರೆ ಪಬ್ನಲ್ಲಿ ಜೀವಾ ಜೊತೆ ಮಾತನಾಡುವಾಗ ಮಧುರಾ ತಗ್ಲಾಕೊಂಡಿದ್ದಾಳೆ. ಅವನು ನಿನ್ನೊಂದಿಗೆ ಏನು ಮಾತನಾಡಿದ ಎಂದು ಹೇಳುವಂತೆ ಜೈದೇವ್ ಕೇಳಿದ್ದಾನೆ.
25
ಶಕುಂತಲಾಗೆ ಚಡಪಡಿಕೆ
ಮನೆಯವರೆಲ್ಲರೂ ತನ್ನಿಂದ ಯಾವುದೋ ಒಂದು ವಿಷಯವನ್ನು ಬಚ್ಚಿಟ್ಟಿದ್ದಾರೆ ಎಂಬ ಅನುಮಾನ ಶಕುಂತಲಾಗೆ ಬಂದಿದೆ. ಆ ವಿಷಯ ತನ್ನ ಮಗನಿಗೆ ಸಂಬಂಧಿಸಿದ್ದಾ ಎಂದು ಶಕುಂತಲಾ ಆತಂಕಕ್ಕೊಳಗಾಗಿದ್ದಾಳೆ. ಈ ಕುರಿತು ಸೋದರ ಲಕ್ಷ್ಮೀಕಾಂತ್ಗೂ ಕೇಳಿದ್ರೂ, ಆತನೂ ಯಾವುದೇ ವಿಷಯವನ್ನು ಬಿಟ್ಟುಕೊಟ್ಟಿಲ್ಲ.
35
ತುಂಬಾನೇ ಸೆಟೆಲ್ ಆಗಿ ವರ್ತಿಸುತ್ತಿರೋ ಜೈದೇವ್
ಜೈದೇವ್ ಮನೆ ಮುಂದೆಯೇ ಬಂದ ಮಧುರಾ, ಕೆಡಿಯನ್ನು ಭೇಟಿಯಾಗಿದ್ದಾಳೆ. ತಾನೇ ಬಲವಂತವಾಗಿ ಜೈದೇವ್ ಮನೆಯೊಳಗೆ ಕಾಫಿ ಕುಡಿದು ಬಂದಿದ್ದಾಳೆ. ನಂತರ ಆತನ ಕಾರ್ನಲ್ಲಿ ಮಧುರಾ ಡ್ರಾಪ್ ತೆಗೆದುಕೊಂಡಿದ್ದಾಳೆ. ಆದ್ರೆ ಜೈದೇವ್ ಮಾತ್ರ ಮಧುರಾ ಜೊತೆ ತುಂಬಾನೇ ಸೆಟೆಲ್ ಆಗಿ ವರ್ತಿಸುತ್ತಿದ್ದಾನೆ.
ಇಲ್ಲಿಗೆ ಮಧುರಾಳ ಜಾಲ ಇಲ್ಲಿಗೆ ನಿಂತಿಲ್ಲ. ಜೈದೇವ್ ಬಳಿ ನಿಮಗೆ ಎಲ್ಲಾದ್ರೂ ಜಾಬ್ ಇದ್ರೆ ಹೇಳಿ. ನನಗೆ ಪಾರ್ಟ್ ಟೈಂ ಕೆಲಸ ಮಾಡೋದಕ್ಕೆ ಇಷ್ಟ. ರೆಸ್ಯೂಮ್ ಕಳಸ್ತೀನಿ ಅಂತಾ ನಂಬರ್ ತೆಗೆದುಕೊಂಡಿದ್ದಾಳೆ. ನಂತರ ಜೈದೇವ್ ಜೊತೆ ಪಬ್ಗೆ ಹೋಗಿದ್ದಾಳೆ ಮಧುರಾ.
55
ಜೀವಾ ನೇರವಾಗಿ ಮಧುರಾ ಜೊತೆ ಮಾತು
ಪಬ್ ಮೂಲೆಯೊಂದರಲ್ಲಿ ಕುಳಿತ ಮಲ್ಲಿ ಮತ್ತು ಭೂಮಿಕಾ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಭೂಮಿಕಾ ಸೋದರ ಜೀವಾ ನೇರವಾಗಿ ಮಧುರಾ ಜೊತೆ ಮಾತನಾಡಿದ್ದಾನೆ. ಮಧುರಾ ಓರ್ವ ಪೊಲೀಸ್ ಅನ್ನೋದು ತಿಳಿದ್ರೆ ಜೈದೇವ್ ಏನು ಮಾಡ್ತಾನೆ ಅನ್ನೋದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.