ಕನ್ನಡ ಸೀರಿಯಲ್​ಗಳಲ್ಲಿ ಈಗ ಫಸ್ಟ್​ನೈಟ್​ ಸಮಯ: Shravani-Subramanya ಕೊಟ್ರು ಚಾಲನೆ!

Published : Feb 10, 2026, 05:39 PM IST

ಹಲವು ಕನ್ನಡ ಧಾರಾವಾಹಿಗಳು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿವೆ. ಶ್ರಾವಣಿ-ಸುಬ್ರಹ್ಮಣ್ಯ, ಬ್ರಹ್ಮಗಂಟು ಸೀರಿಯಲ್​ನ ಜೋಡಿಗಳು ಅಡೆತಡೆಗಳನ್ನು ಮೀರಿ ಒಂದಾಗುತ್ತಿದ್ದು, ಅವರ ಮೊದಲ ರಾತ್ರಿಗೆ ಮುಹೂರ್ತ ನಿಗದಿಯಾಗಿದೆ. ಇದು ಧಾರಾವಾಹಿಗಳ ಅಂತ್ಯದ ಮುನ್ಸೂಚನೆಯೇ ಎಂಬ ಕುತೂಹಲ ಮೂಡಿಸಿದೆ.

PREV
16
ಸೀರಿಯಲ್​ ಕ್ಲೈಮ್ಯಾಕ್ಸ್​

ಕನ್ನಡದ ಕೆಲವು ಸೀರಿಯಲ್​ಗಳು ಇನ್ನೇನು ಮುಗಿಯುವ ಹಂತಕ್ಕೆ ಬಂದಂತೆ ಕಾಣಿಸುತ್ತಿದೆ. ಈಗಿನ ಹಲವು ಸೀರಿಯಲ್​ಗಳಲ್ಲಿ ಮದುವೆಯಾದರೂ ದೈಹಿಕ ಸಂಪರ್ಕ ಇಲ್ಲದೇ ಇರುವವರ ಸ್ಟೋರಿನೇ ಹೆಚ್ಚು. ಆದ್ದರಿಂದ ಅವರಿಬ್ಬರನ್ನೂ ಒಂದು ಮಾಡಿದರೆ ಅಲ್ಲಿ ಕೆಲವು ಸೀರಿಯಲ್​ಗಳು ಮುಗಿದಂತೆ.

26
ಮೊದಲ ರಾತ್ರಿ ಮುಹೂರ್ತ

ಆದರೆ, ಅದನ್ನು ಟಿಆರ್​ಪಿ ಆಧಾರದ ಮೇಲೆ ಇನ್ನಷ್ಟು ಎಳೆಯುವುದು ಮಾಮೂಲಾದರೂ ಸದ್ಯ ಕೆಲವು ಸೀರಿಯಲ್​​ಗಳು ಕ್ಲೈಮ್ಯಾಕ್ಸ್​ ತಲುಪಿವೆ. ಅವುಗಳಲ್ಲಿ ಒಂದು ಶ್ರಾವಣಿ- ಸುಬ್ರಹ್ಮಣ್ಯ (Shravani-Subramanya). ಈ ಸೀರಿಯಲ್​ನಲ್ಲಿ ಶ್ರಾವಣಿ ಮತ್ತು ಸುಬ್ರಹ್ಮಣ್ಯ ಹಲವಾರು ಅಡೆತಡೆಗಳನ್ನು ಮೀರಿ ಒಂದಾಗಿದ್ದಾರೆ. ಕಾಂತಮ್ಮನ ಕಿತಾಪತಿಯಿಂದ ಇಬ್ಬರೂ ಬೇರೆಬೇರೆಯಾಗಿದ್ದರೂ ಶ್ರಾವಣಿಯ ಅಮ್ಮ ಮಾರುವೇಷದಲ್ಲಿ ಮನೆಯನ್ನು ಪ್ರವೇಶಿಸಿ, ಮುಹೂರ್ತ ಫಿಕ್ಸ್ ಮಾಡಿದ್ದಾಳೆ.

36
ಫಸ್ಟ್​ನೈಟ್​ ಕೋಣೆ

ಇಬ್ಬರೂ ಬೆವರುತ್ತಲೇ ಫಸ್ಟ್​ನೈಟ್​ ಕೋಣೆ ಪ್ರವೇಶಿಸಿದ್ದಾರೆ. ನನಗೆ ಸಿಕ್ಕಾಪಟ್ಟೆ ಟೆನ್ಷನ್​ ಆಗ್ತಿದೆ ಸುಬ್ಬು ಎಂದು ಶ್ರಾವಣಿ ಹೇಳಿದ್ರೆ, ಆಗಲೇ ಬೆವರಿದ ಸುಬ್ಬು, ನನಗೂ ಅಷ್ಟೇ ಮೇಡಂ ಅಂದಿದ್ದಾನೆ. ಒಟ್ಟಿನಲ್ಲಿ ಟೆನ್ಷನ್​ ಟೆನ್ಷನ್​ ಎನ್ನುತ್ತಲೇ ಈ ಜೋಡಿ ಮೊದಲ ರಾತ್ರಿಗೆ ಮುಹೂರ್ತ ಫಿಕ್ಸ್ ಮಾಡಿದೆ.

46
ಚಿರು-ದೀಪಾ ಒಂದಾದ್ರು

ಇನ್ನು, ಬ್ರಹ್ಮಗಂಟು ಸೀರಿಯಲ್​​ (Brahmagantu Serial)ನಲ್ಲಿ ಚಿರು ಮತ್ತು ದೀಪಾ ಒಂದಾಗಿ ಆಗಿದೆ. ಸೌಂದರ್ಯಳ ಕಪಟತನವೂ ಬಹಿರಂಗಗೊಂಡಿದೆ. ಚಿರು ಮತ್ತು ದೀಪಾ ಮೊದಲ ರಾತ್ರಿ ಫಿಕ್ಸ್​ ಆಗೋದೊಂದೇ ಬಾಕಿ ಇದೆ. ಆದ್ದರಿಂದ ಸದ್ಯ ಮದುವೆಯಾದ ಮೇಲೂ ದೂರವೇ ಇದ್ದ ಎರಡನೆಯ ಜೋಡಿ ದೀಪಾ ಮತ್ತು ಚಿರು ಶೀಘ್ರದಲ್ಲಿಯೇ ಒಂದಾಗಲಿದ್ದಾರೆ.

56
ಎರಡನೆಯ ಇನ್ನಿಂಗ್ಸ್​

ಇನ್ನು ಅಮೃತಧಾರೆ (Amruthadhaare). ಇಲ್ಲಿ ಇದಾಗಲೇ ಗೌತಮ್​ ಮತ್ತು ಭೂಮಿಕಾಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಐದು ವರ್ಷಗಳ ಬಳಿಕ ಇಬ್ಬರೂ ಒಂದಾಗಿರುವ ಕಾರಣ, ಎರಡನೆಯ ಇನ್ನಿಂಗ್ಸ್​ ಶುರುವಾಗಿದೆ. ಅಲ್ಲಿಯೂ ಜೋಡಿಯ ಪ್ರೇಮಗೀತೆ ಶುರುವಾಗಿದೆ.

66
ಆದಿಲಕ್ಷ್ಮಿ ಪುರಾಣ- ಕರ್ಣ ಸೀರಿಯಲ್​

ಇನ್ನು ಆದಿಲಕ್ಷ್ಮಿ ಪುರಾಣ (Adi Lakshmi Purana) ಸೀರಿಯಲ್​ನಲ್ಲಿ ಆದಿ ಮತ್ತು ಲಕ್ಷ್ಮಿಯ ಮದುವೆ ವಿಚಿತ್ರವಾಗಿ ನಡೆದಿದೆ. ಮದುವೆಯಾದರೂ ಒಟ್ಟಿಗೇ ಇರದ ಜೋಡಿಯಲ್ಲಿ, ಈಗ ಈ ಜೋಡಿ ಹೊಸ ಸೇರ್ಪಡೆಯಾಗಿದೆ. ಇವರು ಒಂದಾಗಲು ಇನ್ನು ಕೆಲವು ವರ್ಷಗಳೇ ಬೇಕಾಗಬಹುದು ಅನ್ನಿ. ಇನ್ನು ಕರ್ಣ ಸೀರಿಯಲ್​ (Karna Serial)ನಲ್ಲಿ ಕೂಡ ಸದ್ಯ ಕರ್ಣ ಮತ್ತು ನಿಧಿ ಮದುವೆಯಾಗುವುದೇ ಕಷ್ಟ ಎನ್ನುವ ಸ್ಥಿತಿ ಇದ್ದು, ಅವರ ಮೊದಲರಾತ್ರಿಗೆ ಇನ್ನೂ ವೀಕ್ಷಕರು ತುಂಬಾ ಕಾಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories