ದತ್ತಾಭಾಯ್ ಗೂ ಅಷ್ಟೇ, ಬೇರೆ ನಾಯಕರಿಗೆ ಹೋಲಿಕೆ ಮಾಡಿದ್ರೆ, ಸ್ವಲ್ಪ ಖಡಕ್ ಆಗಿರೋದು ದತ್ತಾ ಭಾಯ್, ಆದ್ರೆ ಅಕ್ಕ ಶರಾವತಿ ಅಷ್ಟೇಲ್ಲಾ, ಕಿತಾಪತಿ ಮಾಡಿದ್ರೂ ಆತನ ಕಣ್ಣಿಗೆ ಮಾತ್ರ ಯಾವುದೂ ಕಾಣಿಸೋದೆ ಇಲ್ಲ. ಅಂತ ಜನರು ಆಡಿಕೊಳ್ಳುತ್ತಿದ್ದಾರೆ. ಒಟ್ಟಲ್ಲಿ ಧಾರಾವಾಹಿಗಳಲ್ಲಿ (kannada serial) ನಾಯಕಿಯನ್ನು ಮೇಲಕ್ಕೆ ಹೊತ್ತು ಹೊತ್ತು, ನಾಯಕರನ್ನು ಪೆದ್ದರಂತೆ, ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತೆ ತೋರಿಸ್ತಿರೋದಂತೂ ನಿಜಾ. ವೀಕ್ಷಕರು ಗರಂ ಆಗಿರೋದು ಸರಿಯಾಗಿದೆ ಬಿಡಿ.