ಕಾವೇರಿಯ ಮುದ್ದು ಪೆದ್ದು ಮಗ ವೈಷ್ಣವ್ ಅಮ್ಮ ಹೇಳಿದ್ದನ್ನೆಲ್ಲಾ ನಂಬಿ, ಹೌದು ಇದು ಕೀರ್ತಿಯದ್ದೆ ಆಟ, ನಿನ್ನನ್ನು ಹೇಗಾದ್ರೂ ಮಾಡಿ ನಾನು ಜೈಲಿನಿಂದ ಹೊರಗೆ ತರ್ತೀನಿ ಎನ್ನುತ್ತಾ, ಕೀರ್ತಿ ಮನೆಗೆ ಹೋಗಿ, ಅಲ್ಲಿ ಅವಳನ್ನ ಪ್ರಶ್ನೆ ಮಾಡೋಕ್ಕೆ ನಿಂತಿದ್ದಾನೆ ವೈಷ್ಣವ್. ಇದನ್ನೆಲ್ಲಾ ನೋಡಿ ವೀಕ್ಷಕರು ಇನ್ನು ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ಎಲ್ಲಾದಕ್ಕೂ ಇತಿ ಮಿತಿ ಇದೆ ಎಂದಿದ್ದಾರೆ.