ಜೈಲಿನಲ್ಲಿರುವ ತಾಂಡವ್ ನಿಂದ ತನ್ವಿಗೆ ಬಂತು ಲೆಟರ್ ! ಸಾಕಪ್ಪ, ಮುಗ್ಸಿ ಅಂತಿದ್ದಾರೆ ವೀಕ್ಷಕರು

Published : Apr 23, 2026, 10:10 AM IST

Bhagyalakshmi Serial : ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಜೈಲಿನಲ್ಲಿದ್ದುಕೊಂಡೇ ತನ್ವಿ ದಾರಿತಪ್ಪಿಸುವ ಹುನ್ನಾರ ನಡೆಸಿದ್ದಾನೆ ತಾಂಡವ್. ತನ್ವಿಗೆ ಬಂದ ಪತ್ರದಲ್ಲಿ ಏನಿದೆ ಅನ್ನೋದು ಸದ್ಯದ ಕುತೂಹಲ. 

PREV
15
ಭಾಗ್ಯ ಗೋಳಿಗೆ ಅಂತ್ಯವಿಲ್ಲ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಎಲ್ಲ ಸುಖಾಂತ್ಯವಾಯ್ತು, ಭಾಗ್ಯಾಗೆ ಇನ್ನೊಂದು ಮದುವೆ ಆಯ್ತು , ಈಗ ಸೀರಿಯಲ್ ಮುಗಿಯುತ್ತೆ ಅಂತ ವೀಕ್ಷಕರು ಭಾವಿಸಿದ್ರು. ಆದ್ರೆ ಭಾಗ್ಯಲಕ್ಷ್ಮಿ 2 ಆಗ್ಲೇ ಶುರುವಾಗಿದೆ. ಮೋಸ್ಟ್ಲಿ ಭಾಗ್ಯಾ, ಶತ್ರುಗಳಿಲ್ದೆ ಜೀವನ ನಡೆಸಲು ಸಾಧ್ಯವೇ ಇಲ್ಲ ಅನ್ನಿಸುತ್ತೆ. ಒಂದ್ಕಡೆ ನಾದಿನಿ, ಅತ್ತಿಗೆ ಕಾಟವಾದ್ರೆ ಇನ್ನೊಂದು ಕಡೆ ಮಾಜಿ ಗಂಡನ ಸಮಸ್ಯೆ ತಪ್ಪಂಗೆ ಕಾಣ್ತಿಲ್ಲ.

25
ಜೈಲಿನಲ್ಲಿದ್ರೂ ಸುಮ್ಮನಿರಲ್ವ ತಾಂಡವ್?

ಭಾಗ್ಯಾಗೆ ಮೋಸ ಮಾಡಿ ಈಗಾಗಲೇ ತಾಂಡವ್ ಜೈಲು ಸೇರಾಗಿದೆ. ಭಾಗ್ಯಾ ಆದಿ ಮದುವೆಯಾಗಿ ಹೊಸ ಜೀವನದ ಕನಸು ಕಾಣ್ತಿದ್ದಾಳೆ. ಆದ್ರೆ ಜೈಲಿನಲ್ಲಿದ್ದುಕೊಂಡೇ ತಾಂಡವ್ ತನ್ನ ಆಟ ಶುರು ಮಾಡಿದಂತಿದೆ. ತಾಂಡವ್, ತನ್ವಿಗೆ ಪತ್ರ ಬರೆದಿದ್ದಾನೆ.

35
ತನ್ವಿಯೇ ತಾಂಡವ್ ಅಸ್ತ್ರ

ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸ್ತಲೇ ಬಂದಿರುವ ಭಾಗ್ಯಾಗೆ ಈಗ ಶತ್ರುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟು ದಿನ ಶ್ರೇಷ್ಠಾ ಕಾಟಕೊಡ್ತಿದ್ದಳು. ತಾಂಡವ್ ನೋವು ನೀಡ್ತಿದ್ದ. ಆದ್ರೀಗ ತಾಂಡವ್ ಜೊತೆ ಆದಿ ಇಬ್ಬರು ಸಹೋದರಿಯರು ಸೇರ್ಕೊಂಡಿದ್ದಾರೆ. ಇಷ್ಟು ದಿನ ಒಂದು ಮನೆ, ಒಂದಿಷ್ಟು ಸಮಸ್ಯೆಯಲ್ಲಿದ್ದ ಭಾಗ್ಯಾ ಈಗ ಎರಡು ಮನೆ, ಡಬಲ್ ಸಮಸ್ಯೆ ಮೈಮೇಲೆ ಎಳೆದುಕೊಂಡಂತಿದೆ. ಈ ಮಧ್ಯೆ ತನ್ವಿ ಬದಲಾಗಿದ್ದಾಳೆ. ಆದಿ – ಭಾಗ್ಯ ಮನೆಗೆ ಬಂದ್ರೂ ಬಾಗಿಲು ತೆಗೆಯದೇ ರೂಮಿನಲ್ಲಿದ್ದ ತನ್ವಿ ಕರೆಯೊಂದು ಬರ್ತಿದ್ದಂತೆ ಹೊರಗೆ ಓಡಿದ್ದಾಳೆ. ಅಲ್ಲಿ ಅಪರಿಚಿತನೊಬ್ಬ ತನ್ವಿ ಕೈಗೆ ಲೆಟರ್ ನೀಡಿದ್ದಾನೆ. ಪತ್ರ ತೆಗೆದು ನೋಡಿದ ತನ್ವಿ ಇದು ಅಪ್ಪನ ಅಕ್ಷರ ಅಂತ ಪತ್ತೆ ಮಾಡಿದ್ದಾಳೆ.

45
ಲೆಟರ್ ನಲ್ಲಿ ಏನಿದೆ?

ತನ್ವಿ ಕೈಗೆ ತಾಂಡವ್ ಪತ್ರ ಸಿಕ್ಕಿದೆ. ಅದ್ರಲ್ಲಿ ಏನಿದೆ ಎಂಬುದು ಇನ್ನೂ ಪ್ರೇಕ್ಷಕರಿಗೆ ಗೊತ್ತಾಗಿಲ್ಲ. ತಾಂಡವ್, ಜೈಲಿನಲ್ಲಿದ್ದುಕೊಂಡು ತನ್ವಿಯನ್ನೇ ಅಸ್ತ್ರ ಮಾಡ್ಕೊಂಡು ಭಾಗ್ಯಾ ಜೀವನದಲ್ಲಿ ಮತ್ತೆ ಆಟ ಶುರು ಮಾಡ್ತಾನಾ ಕಾದು ನೋಡ್ಬೇಕಿದೆ. ಸದ್ಯ ಕುಸುಮಾಗೆ ತನ್ವಿ ಕೈನಲ್ಲಿರುವ ಲೆಟರ್ ಸಿಗುತ್ತಾ ಅನ್ನೋದನ್ನೂ ಕಾದು ನೋಡ್ಬೇಕಿದೆ.

55
ವೀಕ್ಷಕರ ಕೋಪ

ಭಾಗ್ಯಲಕ್ಷ್ಮಿ ಸೀರಿಯಲ್ ಇಷ್ಟುದಿನ ನೋಡ್ಕೊಂಡು ಬಂದ ವೀಕ್ಷಕರ ತಾಳ್ಮೆಗೆಟ್ಟಿದೆ. ಎಲ್ಲ ಸರಿಯಾಯ್ತು, ಈಗಲಾದ್ರೂ ಭಾಗ್ಯಾ ಖುಷಿಯಾಗಿರೋದನ್ನು ನೋಡೋಣ ಅಂದ್ಕೊಂಡಿದ್ವಿ ಮತ್ತೆ ನಿಮ್ಮ ಕಥೆ ಬದಲಿಸಿದ್ದೀರಿ. ಆದಿ ಅಕ್ಕತಂಗಿಯರ ಕಾಟವಲ್ದೆ ಈಗ ತನ್ವಿಯನ್ನು ವಿಲನ್ ಮಾಡ್ತಿದ್ದೀರಿ ಅಂತ ವೀಕ್ಷಕರು ಕೋಪಗೊಂಡಿದ್ದಾರೆ. ಸಾಕಪ್ಪ, ಸೀರಿಯಲ್ ಮುಗಿಸಿ ಅನ್ನೋದು ಅನೇಕರ ಅಭಿಪ್ರಾಯ. ಭಾಗ್ಯ ಹೊಸ ಜೀವನಕ್ಕಾಗಿ ಆದಿಯನ್ನು ಮದುವೆ ಆಗಿರ್ಬಹುದು. ಆದ್ರೆ ಮಕ್ಕಳಿಗೆ ಏಕಾಏಕಿ ಹೊಸ ವ್ಯಕ್ತಿಯನ್ನು ತಂದೆ ಅಂತ ಒಪ್ಪಿಕೊಳ್ಳೋದು ಕಷ್ಟ. ತನ್ವಿಯನ್ನು ಈ ವಿಷ್ಯದಲ್ಲಿ ವಿಲನ್ ಮಾಡ್ಬೇಡಿ ಅಂತ ವೀಕ್ಷಕರು ಸಲಹೆ ಕೂಡ ನೀಡಿದ್ದಾರೆ. ಎಲ್ಲರಿಗೂ ಇಷ್ಟವಾಗ್ತಿದ್ದ ಭಾಗ್ಯ ಈಗ ಅನೇಕರಿಗೆ ಶತ್ರುವಾಗಿ ಕಾಣ್ತಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories