ಕೂಗಾಡಿದ್ದ ಮಾವ ತಣ್ಣಗಾದ, ಕ್ಷಮೆ ಕೇಳಿದ ನಂದನಿಗೆ ಮೀನಾ ಹೇಳಿದ್ದೇನು?

Published : Apr 21, 2026, 03:33 PM IST

Nandagokula Serial : ಇನ್ನೇನು ನಂದಗೋಕುಲದಲ್ಲಿ ಮಹಾ ಸ್ಫೋಟವಾಗುತ್ತೆ ಅಂದ್ಕೊಂಡು ಖುರ್ಚಿ ತುದಿಗೆ ಬಂದು ಕುಳಿತಿದ್ದವರಿಗೆ ಶಾಕ್ ಆಗಿದೆ. ಕೇಶವ ಅಪ್ಪನ ಬಳಿ ಪಾಲು ಕೇಳ್ತಾನೆ, ಬೇರೆ ಮನೆ ಮಾಡ್ತಾನೆ ಅಂದ್ಕೊಂಡಿದ್ದ ವೀಕ್ಷಕರು ಈಗ ಪ್ರೋಮೋ ನೋಡಿ, ಟ್ವಿಸ್ಟ್ ಇಷ್ಟಪಟ್ಟಿದ್ದಾರೆ. 

PREV
15
ನಂದನಿಗೆ ಬುದ್ಧಿ ಬಂತು

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ನಂದಗೋಕುಲ ಸೀರಿಯಲ್ ನಲ್ಲಿ ಗಲಾಟೆ ಶುರುವಾಗಿತ್ತು. ಹೊಸ ಸೊಸೆ ಪ್ರಿಯಾ ಬರ್ತಿದ್ದಂತೆ ನಂದನ ಮನೆ ವಾತಾವರಣ ಬದಲಾಗಿತ್ತು. ಪ್ರಿಯಾ ಮಾತನ್ನು ಕಣ್ಮುಚ್ಚಿ ನಂಬಿದ್ದ ನಂದನ ಸ್ವಭಾವ ಬದಲಾಗಿತ್ತು. ಹಿತ್ತಾಳೆ ಕಿವಿ ನಂದ, ಮುದ್ದಿನ ಸೊಸೆ ಮೀನಾಳನ್ನು ತಪ್ಪಾಗಿ ತಿಳಿದುಕೊಂಡಿದ್ದ. ಮೀನಾ ಹಾಗೂ ಕಿರಿ ಸೊಸೆ ಅಮೂಲ್ಯಾಗೆ ಬೈದಿದ್ದ. ಆದ್ರೀಗ ನಂದನಲ್ಲಿ ಬದಲಾವಣೆ ಕಾಣ್ತಿದೆ.

25
ಅಂಗಡಿಯಲ್ಲಿ ಕೇಶವನ ಕಿರುಚಾಟ

ಮೀನಾ ಬದಲಾಗಿದ್ದಾಳೆ ಅಂತ ಸಂಪೂರ್ಣವಾಗಿ ನಂಬಿದ್ದ ನಂದ ಅಂಗಡಿಯಲ್ಲೂ ಸೊಸೆ ಬಗ್ಗೆ ಮಾತನಾಡಿದ್ದ. ಆದ್ರೆ ಇದು ಮೀನಾ ಗಂಡ ಕೇಶವನಿಗೆ ಇಷ್ಟವಾಗಿರಲಿಲ್ಲ. ತಾಳ್ಮೆ ಕಳೆದುಕೊಂಡು ಅಪ್ಪನ ಮುಂದೆ ಕೂಗಾಡಿದ್ದ. ಅಲ್ದೆ ಬೇರೆ ಮನೆ ಮಾಡುವ ಆಲೋಚನೆ ಮಾಡಿದ್ದ. ಇದನ್ನು ನೋಡಿದ ವೀಕ್ಷಕರು, ನಂದನಿಗೆ ಬುದ್ಧಿ ಬರುತ್ತೆ, ಆತನ ಮನೆ ಒಡೆದು ಹೋಳಾಗುತ್ತೆ, ಪಾಪ ಏನೂ ಮಾಡದ ಮೀನಾ ಶಿಕ್ಷೆ ಅನುಭವಿಸ್ತಿದ್ದಾಳೆ ಅಂತ ನಂದನಿಗೆ ಹಿಡಿಶಾಪ ಹಾಕಿದ್ದರು.

35
ಮಾವನ ಬೈಗುಳ ಸುಪ್ರಭಾತ

ಇಂದಿನ ಪ್ರೋಮೋದಲ್ಲಿ ನಂದ, ಸೊಸೆ ಮೀನಾ ಹಾಗೂ ಅಮೂಲ್ಯ ಕ್ಷಮೆ ಕೇಳಿದ್ದಾನೆ. ನನ್ನನ್ನು ಕ್ಷಮಿಸಿ, ನಾನು ನಿಮಗೆ ಆ ರೀತಿ ಬೈಬಾರದಿತ್ತು ಎಂದಿದ್ದಾನೆ. ಇದನ್ನು ಕೇಳಿದ ಮೀನಾ ತಮಾಷೆಯಾಗಿ ಉತ್ತರ ನೀಡಿದ್ದಾಳೆ. ನಾನು ಬೈದಿದ್ದು ಬೇಜಾರಾಯ್ತಾ ಅಂತ ಮಾವ ಕೇಳಿದ್ರೆ, ಬಿಡಿ ಮಾವ, ನೀವು ಬಯ್ಯೋದು ದಿನ ಬೆಳಿಗ್ಗೆ ಎದ್ದು ಸುಪ್ರಭಾತ ಕೇಳ್ತಂಗೆ. ಮತ್ತೆ ಸುಪ್ರಭಾತ ಯಾವಾಗ ಕೇಳ್ತೀವೋ ಅಂತ ಯೋಚ್ನೆ ಮಾಡ್ತಾ ಇದ್ವಿ ಅಂತ ಮೀನಾ ಹೇಳಿದ್ದಾಳೆ. ಆಕೆ ಮಾತು ಕೇಳಿ ನಂದ ಮನಸ್ಪೂರ್ವಕವಾಗಿ ನಕ್ಕಿದ್ದಾನೆ.

45
ಮಾವನಿಗೆ ಅಪ್ಪನ ಸ್ಥಾನ

ಇನ್ನು ಅಮೂಲ್ಯ, ಮಾವನಿಗೆ ಅಪ್ಪನ ಸ್ಥಾನ ನೀಡಿದ್ದಾಳೆ. ಮನೆಯಲ್ಲಿ ಅಪ್ಪ ಬೈಯ್ಯೋದು ಸಾಮಾನ್ಯ. ತಪ್ಪು ಮಾಡಿದೋರಿಗೆ ಅಪ್ಪ ಬೈದು ಬುದ್ಧಿ ಹೇಳ್ತಾರೆ. ನೀವೂ ನಮಗೆ ಅಪ್ಪನಂತೆ ಅಂತ ಅಮೂಲ್ಯ ಹೇಳ್ತಿದ್ದಂತೆ ನಂದ ಭಾವುಕನಾಗಿದ್ದಾನೆ.

55
ನಂದನ ಬದಲಾವಣೆ ಮೆಚ್ಚಿನ ವೀಕ್ಷಕರು

ನಂದನ ಈ ಬದಲಾವಣೆ ವೀಕ್ಷಕರಿಗೆ ಇಷ್ಟವಾಗಿದೆ. ಹನುಮಂತಣ್ಣನಿಂದ ಎಲ್ಲ ಆಗಿದೆ ಅಂತ ವೀಕ್ಷಕರು ಹೇಳ್ತಿದ್ದಾರೆ. ಹನುಮಂತಣ್ಣ ನಂದನಿಗೆ ಬುದ್ಧಿ ಹೇಳಿದ್ದಾರೆ. ಹನುಮಂತಣ್ಣ ಹೇಳಿದ್ದನ್ನು ನಂದ ಕೇಳ್ತಾರೆ ಕೂಡ. ಮಾವ- ಸೊಸೆಯಂದಿರ ಈ ಸೀನ್ ನೋಡಲು ಖುಷಿಯಾಗ್ತಿದೆ. ನಂದ ಹೀಗೆ ಬದಲಾದ್ರೆ ಒಳ್ಳೆಯದು ಅಂತ ಕಮೆಂಟ್ ಮಾಡಿದ್ದಾರೆ. ಹಾಗೇ ಎಲ್ಲರ ಕಣ್ಣು ಪ್ರಿಯಾ ಮೇಲೆ ಬಿದ್ದಿದೆ. ಈ ಪ್ರಿಯಾಗೆ ಹೊಟ್ಟೆ ಉರಿತಿದೆ. ಯಾವಾಗ ಮತ್ತೆ ಮಾವನ ಮನಸ್ಸು ಬದಲಿಸ್ತಾಳೆ ನೋಡ್ಬೇಕು ಅಂತ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories