ಇನ್ನೊಂದು ಕಡೆ ಲಕ್ಷ್ಮೀ ಜೀವನದಲ್ಲಿ ಆಗ್ತಿರೋದಕ್ಕೆ ತಲೆಕೆಡಿಸಿಕೊಂಡು, ಲಕ್ಷ್ಮೀನ ಸಮಧಾನ ಮಾಡೋದಕ್ಕೆ ಬರೋ ವೈಷ್ಣವ್, ಕೀರ್ತಿ ಬಗ್ಗೆ ತಲೆ ಕೆಡಿಸ್ಕೋಬೇಡ, ಅವಳಿಗೆ ನಮ್ಮಿಬ್ಬರ ಮದ್ವೆ ಆಗೋದು ಇಷ್ಟ ಇರ್ಲಿಲ್ಲ, ಅದಕ್ಕೆ ಏನೇನೋ ಹೇಳಿ ತಲೆಕೆಡಿಸಿದ್ದಾರೆ. ಅದನ್ನ ತಲೆಗೆ ಹಾಕ್ಬೇಡಿ ಎನ್ನುತ್ತಾನೆ ವೈಷ್ಣವ್ . ಅಷ್ಟೇ ಅಲ್ಲ ಅಮ್ಮ ನಮ್ಮ ಮೇಲೆ ಜೀವಾನೆ ಇಟ್ಕೊಂಡಿದ್ದಾರೆ, ಕೀರ್ತಿ ಮದ್ವೆ ಬೇಡ ಅಂತ ಹೊರಟಾಗ ನನಗೆ ಮದ್ವೆನೆ ಬೇಡ ಅಂತ ನಾನು ಮದ್ವೆ ಮನೆಯಿಂದಾನೆ ಹೊರಟಿದ್ದೆ, ಆದ್ರೆ ಲಕ್ಷ್ಮೀನೆ ನಿನಗೆ ಸರಿಯಾದ ಜೋಡಿ ಅಂತ ನನ್ನ ತಡೆದು, ನಿಮ್ಮ ಜೊತೆ ಮದ್ವೆ ಮಾಡಿಸಿದ್ದು ನನ್ನ ಅಮ್ಮ. ಅವರೇ ಆರಿಸಿರೋ ಹುಡುಗಿಗೆ ಅವರೇ ಯಾಕೆ ತೊಂದರೆ ಮಾಡ್ತಾರೆ ಎನ್ನುತ್ತಾನೆ ವೈಷ್ಣವ್.