Lakshmi Nivasa: ಜಾಹ್ನವಿ ಎದುರೇ ವಿಶ್ವನ ಮುಗಿಸೋ ಸ್ಕೆಚ್​ ರೆಡಿ! ಪ್ಲ್ಯಾನ್​ ಕೇಳಿ ಶಾಂತಮ್ಮ ಗಡಗಡ

Published : Nov 01, 2025, 12:42 PM IST

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿದ್ದಾಳೆ ಎಂದು ವಿಶ್ವ ಸೈಕೋ ಜಯಂತ್‌ಗೆ ಸವಾಲು ಹಾಕಿದ್ದಾನೆ. ಇದರಿಂದ ಕೋಪಗೊಂಡ ಜಯಂತ್, ಜಾಹ್ನವಿಯನ್ನು ಹುಡುಕಿ ಆಕೆಯ ಮುಂದೆಯೇ ವಿಶ್ವನನ್ನು ಮುಗಿಸಲು ಭಯಾನಕ ಸಂಚು ರೂಪಿಸಿದ್ದಾನೆ. ಈ ಅನಿರೀಕ್ಷಿತ ತಿರುವು ಕಥೆಗೆ ಹೊಸ ರೋಚಕತೆಯನ್ನು ತಂದಿದೆ.

PREV
16
ವಿಶ್ವನ ಪ್ರಾಣಕ್ಕೆ ಕಂಟಕ

ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ಈಗ ವಿಶ್ವನ ಪ್ರಾಣಕ್ಕೆ ಕಂಟಕ ಎದುರಾಗಿದೆ. ಹೋಗಿ ಹೋಗಿ ಸೈಕೋ ಜಯಂತ್​ ಮುಂದೆ ಚಿನ್ನುಮರಿಯನ್ನು ಹುಡುಕು ಎನ್ನುವ ಚಾಲೆಂಜ್​ ಹಾಕಿ ಹೋಗಿದ್ದಾನೆ ವಿಶ್ವ.

26
ಚಾಲೆಂಜ್​ಗೆ ಕೋಪ

ಜಾಹ್ನವಿ ಬದುಕಿದ್ದಾಳೆ. ನಿನಗೆ ತಾಕತ್ತು ಇದ್ದರೆ ಅವಳನ್ನು ಹುಡುಕು ಎಂದಿದ್ದಾನೆ. ಇದನ್ನು ಕೇಳಿ ಜಯಂತ್​ಗೆ ಉರಿದು ಹೋಗಿದೆ. ಜಾಹ್ನವಿ ಪಾತಾಳದಲ್ಲಿ ಇದ್ದರೂ ಹುಡುಕಿ ಬರುವ ತಾಕತ್ತು ಇದೆ ಎಂದಿರೋ ಜಯಂತ್​, ಆ ಬಗ್ಗೆ ಶಾಂತಮ್ಮನಲ್ಲಿ ಎಲ್ಲಾ ವಿವರಿಸುತ್ತಿದ್ದಾನೆ.

36
ವೈಯಕ್ತಿಕ ವಿಷಯ

ತನ್ನ ವೈಯಕ್ತಿಕ ವಿಷಯವನ್ನು ವಿಶ್ವನ ಮುಂದೆ ಹೇಳಿಕೊಂಡಿರುವ ಜಾಹ್ನವಿ ಬಗ್ಗೆ ಜಯಂತ್​ಗೆ ಕೋಪ ಬಂದರೂ, ಆ ತಪ್ಪನ್ನೂ ಅವನು ವಿಶ್ವನ ಮೇಲೆ ಹಾಕುತ್ತಿದ್ದಾನೆ. ನನ್ನ ಚಿನ್ನುಮರಿಗೆ ವಿಶ್ವ ತೊಂದರೆ ಕೊಡುತ್ತಿದ್ದಾನೆ ಎಂದು ಹೇಳಿದ್ದಾನೆ.

46
ಭಯಾನಕ ಪ್ಲ್ಯಾನ್​

ಆದರೆ ಭಯಾನಕ ಪ್ಲ್ಯಾನ್​ ಹಾಕಿದ್ದಾನೆ. ಜಾಹ್ನವಿಯನ್ನು ಹುಡುಕಿ ವಿಶ್ವನ ಮುಂದೆ ತಂದು ನಿಲ್ಲಿಸಿ, ಆಕೆಯ ಎದುರೇ ವಿಶ್ವನನ್ನು ಮುಗಿಸುತ್ತೇನೆ ಎಂದಿದ್ದಾನೆ. ಇದನ್ನು ಕೇಳಿ ಶಾಂತಮ್ಮ ಗಡಗಡ ನಡುಗಿ ಹೋಗಿದ್ದಾಳೆ.

56
ಗೊಂದಲದಲ್ಲಿ ವೀಕ್ಷಕರು

ಮುಂದೇನು ಆಗಬಹುದು ಎನ್ನುವುದನ್ನು ಯಾರೂ ಊಹಿಸಲಾಗದ ಟ್ವಿಸ್ಟ್ ಈ ಸೀರಿಯಲ್​ ಪಡೆದುಕೊಂಡಿದೆ. ಚಿನ್ನುಮರಿ ಜಯಂತ್​ಗೆ ಸಿಗಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ  ವೀಕ್ಷಕರು.

66
ಸಿಕ್ಕರೂ ಕಷ್ಟ, ಸಿಗದಿದ್ದರೂ ಕಷ್ಟ

ಜಾಹ್ನವಿ ಜಯಂತ್​ಗೆ ಸಿಕ್ಕರೂ ಕಷ್ಟ, ಸಿಗದೇ ಹೋದರೂ ಕಷ್ಟ. ಸದ್ಯ ಹೀಗಿದೆ ಪರಿಸ್ಥಿತಿ. ಸಿಕ್ಕರೆ ಜಾಹ್ನವಿ ಪಾಡು ಯಾರಿಗೂ ಬೇಡ. ಇನ್ನು ಸಿಗದೇ ಹೋದರೆ ಈ ಸೈಕೋ ಜಯಂತ್​ ಯಾರಿಗೆ ಏನು ಮಾಡ್ತಾನೋ ಹೇಳದ ಸ್ಥಿತಿ. ಒಟ್ಟಿನಲ್ಲಿ ಈ ಸ್ಟೋರಿ ಊಹಿಸದ ತಿರುವು ಪಡೆದುಕೊಳ್ಳುತ್ತಾ ಸಾಗಿದೆ. 

Read more Photos on
click me!

Recommended Stories