ಆಶ್ರಮದಲ್ಲಿ ಲಕ್ಷ್ಮೀ ದೇಹದಿಂದ ಕೀರ್ತಿಯ ಆತ್ಮವನ್ನು ಬಿಡಿಸುವ ಎಲ್ಲಾ ತಯಾರಿ ನಡೆಯುತ್ತಿದೆ. ಮೊದಲಿಗೆ ಕೋಪಗೊಂಡ ಲಕ್ಷ್ಮೀ ಕಾವೇರಿಗೆ ಬೈದು, ಇದನ್ನೆಲ್ಲಾ ನೀವು ನಂಬುತ್ತಿರಾ, ನಾನು ಇಲ್ಲಿ ನಿಲ್ಲಲ್ಲ ಎಂದು ಹೋಗ್ತಾಳೆ, ಆದ್ರೆ ಅರ್ಧಕ್ಕೆ ಹೋದೋಳು ಮತ್ತೆ ನಿಂತು ನನ್ನನ್ನೇ ಓಡಿಸ್ತ್ಯಾ, ಎಂದು ಕೀರ್ತಿಯಾಗಿ ಬದಲಾಗುತ್ತಾಳೆ, ಇದೀಗ ಲಕ್ಷ್ಮೀಯನ್ನು ಮಂಡಲದ ಮಧ್ಯೆ ಕೂರಿಸಿ, ಸ್ವಾಮಿಗಳು, ಲಕ್ಷ್ಮೀ ದೇಹದಿಂದ ಕೀರ್ತಿ ಹೋಗೋದಕ್ಕೆ ಲಕ್ಷ್ಮೀ ಹೇಳಿರೋದನ್ನ ಮಾಡಬೇಕು ಎನ್ನುತ್ತಾರೆ ಕಾವೇರಿಗೆ.