ಹೌದು, ಕೀರ್ತಿ ವಾಪಾಸ್ ಬಂದಿದ್ದಾರೆ. ಕಾರೊಂದರ ಒಳಗೆ ಲಾಕ್ ಆಗಿರುವ ಕೀರ್ತಿ ಬಾಗಿಲು ಬಡೆಯುತ್ತಿರೋದನ್ನು ನೋಡಿ ಲಕ್ಷ್ಮೀ ಶಾಕ್ ಆಗಿ, ಆಕೆಯ ರಕ್ಷಣೆ ಧಾವಿಸಿದ್ದಾಳೆ. ಇದನ್ನು ನೋಡಿ ಜನ ದೇವರೆ ಇದು ಕನಸು ಆಗದೇ ಇರ್ಲಿ, ಇದು ನಿಜವಾಗಿರಲೇಬೇಕು. ಕೀರ್ತಿ ಇದ್ದರೇನೆ ಕಥೆ ಮುಂದುವರೆಯೋದಕ್ಕೆ ಸಾಧ್ಯ ಎಂದಿದ್ದಾರೆ. ಒಟ್ಟಲ್ಲಿ ಕೀರ್ತಿ ಬಂದಿರೋದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.