Anchor Anushree ಉತ್ತರ ಕರ್ನಾಟಕ ಜನರ ನಿಷ್ಕಲ್ಮಶ ಪ್ರೀತಿಗೆ ಆ್ಯಂಕರ್ ಅನುಶ್ರೀ ಫಿದಾ

First Published May 17, 2024, 2:03 PM IST

ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಉತ್ತರ ಕರ್ನಾಟಕದ ಜನರ ಪ್ರೀತಿಗೆ ನಾನು ಚಿರರುಣಿ ಎಂದಿದ್ದಾರೆ . ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಸಂದರ್ಶನ ಲಭ್ಯವಿದೆ.

 ಜೀವನದಲ್ಲಿ ಏನೂ ಇಲ್ಲ ಎಂದಾಗ ಯಾವುತ್ತೂ ಶಾರ್ಟ್ ಕಟ್‌ ತೆಗೆದುಕೊಳ್ಳಬೇಡಿ. ಹುಟ್ಟಿಸಿದ ದೇವರು ಯಾರಿಗೂ ಮೋಸ ಮಾಡುವುದೇ ಇಲ್ಲ. ಏನಾದರೂ ಒಂದು ಒಳ್ಳೆಯದನ್ನು ಮಾಡಿಯೇ ಮಾಡುತ್ತಾನೆ. ನಂಬಿಕೆ ಇರಬೇಕಷ್ಟೇ. ದೇವರು ನಂಬಿಕೆಗೆ ಮೋಸ ಮಾಡುವುದಿಲ್ಲ. ದೇವರು ಮೂರು ಹೊತ್ತು ಊಟ ಮಾಡುವ ಶಕ್ತಿ ಕೊಟ್ಟಿರ್ತಾನೆ. ಜೀವನದಲ್ಲಿ ದುಡ್ಡು ಮುಖ್ಯ ಹಾಗಂತ ಅದೇ ಜೀವನ ಅಲ್ಲ. ಜೀವನದಲ್ಲಿ ಪ್ರೀತಿ, ಗೌರವ ಸಿಕ್ಕುವುದು ಕೂಡ ಅಷ್ಟೇ ಮುಖ್ಯ. 

ರಾಜ್‌ ಬಿ ಶೆಟ್ಟಿ ನನ್ನ ಆಧ್ಯಾತ್ಮ ಗುರು, ರಕ್ಷಿತ್‌ ಶೆಟ್ಟಿ ಜಂಟಲ್‌ ಮ್ಯಾನ್‌: ನಿರೂಪಕಿ ಅನುಶ್ರೀ

ನಾನು ಉತ್ತರ ಕರ್ನಾಟಕದ ಭಾಗಗಳಿಗೆ ಹೋದರೆ ಅವರು ಕೊಡುವಷ್ಟು ಪ್ರೀತಿ ನಂಗೆ ಎಲ್ಲೂ ಸಿಕ್ಕಿಲ್ಲ. ಅಲ್ಲಿನ ಜನ ನನ್ನನ್ನು ಅಷ್ಟು ಪ್ರೀತಿ ಮಾಡ್ತಾರೆ. ಅವರ ಪ್ರೀತಿಯಲ್ಲಿ ಫಿಲ್ಟರ್‌ ಅನ್ನೋದೆ ಇಲ್ಲ. ಅವರಿಗೆ ಜೀವನದಲ್ಲಿ ಒಮ್ಮೆ ನೀವು ಇಷ್ಟ ಆದ್ರೆ ಮತ್ತೆ ನಿಮ್ಮನ್ನು ಬಿಡುವುದೇ ಇಲ್ಲ. ನಾನು ತುಳುವಿನ ಕುವರಿ ಎಂದು ಬೇದ ಭಾವ ಮಾಡಿಲ್ಲ. ನಾನು ಅವರಿಗೆ ಹಾಗೆ ಮಾಡಿಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.

Latest Videos


ಮುಂದುವರೆದು ಮಾತನಾಡಿ ನನಗೆ ದೇವದಾಸ್‌ ಕಾಪಿಕಾಡ್‌ ಅವರ ನಾಟಕಗಳೆಂದರೆ ಬಲು ಇಷ್ಟ, ಬಾಬು ನನ್ನ ಫೆವರೆಟ್‌ ನಾಟಕ. ಆವಾಗೆಲ್ಲ ಕ್ಯಾಸೆಟ್‌ ಹಾಕಿ ಆಡಿಯೋ ಕೇಳುತ್ತಿದ್ದೆವು. ಬುಲ್ಲ, ಪಟಾಕಿ ಮೋನಪ್ಪನ್ನ ಈ ನಾಟಕದಲ್ಲಿ ಬರುತ್ತಿದ್ದ ಡೈಲಾಗ್‌ಗಳೆಲ್ಲ ಬಲು ಇಷ್ಟ. ಕಾಪಿಕಾಡ್‌, ಬೋಜರಾಜ್ ವಾಮಂಜೂರ್ ನವೀನ್‌ ಡಿ ಪಡೀಲ್‌, ಅರವಿಂದ ಬೋಲಾರ್ ಸರ್ ಇವೆರೆಲ್ಲ ತುಂಬಾ ಇಷ್ಟ, ನಾನು ಹೇಳುತ್ತಿರುತ್ತೇನೆ. ಕಾಮಿಡಿ ಎಲ್ಲ  ತುಳುವಲ್ಲಿ ನೋಡಬೇಕು. ಪಂಚ್‌ಗಳು ನೆಕ್ಸ್ಟ್‌ ಲೆವೆಲ್‌ ನಲ್ಲಿ ಇರುತ್ತದೆ. 

ಚಿನ್ನದ ಕರಿಮಣಿ ಇಲ್ಲವೆಂದು ಯಾವ ಸಮಾರಂಭಕ್ಕೂ ಅಮ್ಮನನ್ನ ಕರೆಯುತ್ತಿರಲಿಲ್ಲ: ಆ ದಿನ ನೆನದು ಅನುಶ್ರೀ ಕಣ್ಣೀರು

ನಾಟಕ ಬಿಟ್ಟರೆ ಡಾನ್ಸ್ ಇಷ್ಟ. ಮಂಗಳೂರಿನಲ್ಲಿ ಯಾವುದೇ ಸಮಾರಂಭ ಇರಲಿ,  ನನ್ನದೊಂದು ಡಾನ್ಸ್ ಇರುತ್ತಿತ್ತು. ಹೆಚ್ಚಾಗಿ ನಿಂಬುಡ ನಿಂಬುಡ, ರಂಗೀಲಾ ಮಾರೊಡು ಹಾಡಿಗೆ ನೃತ್ಯ ಮಾಡುತ್ತಿದ್ದೆ. ಎಲ್ಲಿ ಡಾನ್ಸ್ ಮಾಡಿದರೂ ಆವಗೆಲ್ಲ ತಟ್ಟೆ, ಚಮಚ, ಸೌಟು, ಲೋಟ ಸಿಗುತ್ತಿತ್ತು. ನನ್ನ ಬಳಿ ತುಂಬಾ ಸರ್ಟಿಫಿಕೆಟ್‌ ಇದೆ. ಡಾನ್ಸ್ ಎಂದರೆ ಅಷ್ಟು ಹುಚ್ಚು, ಒಂದು ಡ್ರೆಸ್ ಇರುತ್ತಿತ್ತು. ಇಡೀ ವರ್ಷ ಅದನ್ನೇ ಡ್ಯಾನ್ಸ್ ಮಾಡಲು ಹಾಕುತ್ತಿದ್ದೆ. ನನಗೆ ಡಾನ್ಸ್ ಕಲಿಯಬೇಕೆಂದು ಬಹಳ ಆಸೆ ಇತ್ತು. ಆದರೆ ಆರ್ಥಿಕವಾಗಿ ಸಮಸ್ಯೆ ಇದ್ದುದರಿಂದ ಆಗಲಿಲ್ಲ. ಫ್ರೀ ಡಾನ್ಸ್ ಕ್ಲಾಸ್‌ ಚಿಲಿಂಬಿಯಲ್ಲಿ ಒಬ್ಬರು ಕೊಡುತ್ತಿದ್ದರು. ಕೊಡಿಕಲ್‌ನಿಂದ ಅಲ್ಲಿಗೆ ಹೋಗುತ್ತಿದ್ದೆ.

ಉರ್ವ ಸ್ಟೋರ್‌ ಬಳಿ ಭಂಡಾರಿ ಶಾಪ್‌ ಒಂದಿತ್ತು. ಬಿಸ್ಕೆಟ್‌  ಶಾಪ್‌ ಅಲ್ಲಿನ ಅಂಕಲ್ ನನಗೆ ಯಾವಾಗಲೂ ಚಾಕಲೇಟ್‌ ಕೊಡುತ್ತಿದ್ದರು. ಅವರೀಗ ಇಲ್ಲ. ರಿಸಲ್ಟ್ ಬರುವಾರ ಅವರು ನನ್ನ ಬಳಿ ಯಾವಾಗಲೂ ಕೇಳುತ್ತಿದ್ದರು. ಎಷ್ಟು ಮಾರ್ಕ್ ಬಂದಿದೆ ನಿನಗೆ? ಮಾರ್ಕ್ ಒಳ್ಳೆ ರೀತಿಯಲ್ಲಿ ತೆಗೆದಿದ್ದರೆ ಜೀಪ್‌ ಚಿತ್ರ ಇದ್ದ 5 ರೂ, ಡೈರಿ ಮಿಲ್ಕ್‌ ಕೊಡುತ್ತಿದ್ದರು. ಅದೆಲ್ಲ ನನಗೆ ಈಗ ದೊಡ್ಡ ವಿಷ್ಯ. ಈಗ ಆ ಜೀಪ್‌ ಇದ್ದ ಡೈರಿ ಮಿಲ್ಕ್‌ ಈಗ ನಾನು ಇಡೀ ಬಾಕ್ಸ್ ತೆಗೆದುಕೊಳ್ಳುವಷ್ಟು ಬೆಳೆದಿದ್ದೇನೆ. ಆದರೆ ಆ ಟೇಸ್ಟ್ ನನಗೆ ಈಗ ಸಿಗುವುದಿಲ್ಲ. ಹೀಗಾಗಿ ನನಗೆ ಇಲ್ಲಿ ತುಂಬಾ ಸುಂದರ ನೆನಪುಗಳಿದೆ.

 ನಾನು ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನ ವೇಷ ಹಾಕುತ್ತಿದ್ದೆ. ಕೊಡಿಕಲ್‌ ನಲ್ಲಿ ನಮ್ಮ ಮನೆ ಹತ್ತಿರ ಮಾರುತಿ ವ್ಯಾಯಾಮ ಮಂದಿರವಿದೆ. ಅಲ್ಲಿ ಅವರು ಹೇಳುತ್ತಿದ್ದರು ನೀನು ಕೃಷ್ಣ ವೇಷ ಹಾಕೆಂದು. ನಾನು ಸರಿ ನನಗೇನು ಕೊಡ್ತೀರಿ ಅಂದ್ರೆ, ನಿನಗೆ ಚೆನ್ನಾಗಿ ತಿನ್ನಲು ಸಿಗುತ್ತದೆ. ನೀನು ವೇಷ ಹಾಕು ಎನ್ನುತ್ತಿದ್ದರು. ಆ ಟ್ಯಾಬ್ಲೂ ಉರ್ವ ಸ್ಟೋರಿನಿಂದ ಹೊರಟು ಅಶೋಕ ನಗರ ಗ್ರೌಂಡ್ ಗೆ ಹೋಗಿ ಹುಲಿ ಕುಣಿದು ಬರುತ್ತಿತ್ತು.

ನಾನು ಆ ಟ್ಯಾಬ್ಲೋದಲ್ಲಿ ಕೃಷ್ಣ. ಗಾಡಿಗಳು ಬ್ರೇಕ್‌ ಹಾಕಿದಾಗ ಬೀಳಬಾರದು ಅನ್ನುವ ಉದ್ದೇಶಕ್ಕೆ ಹಿಂಬದಿಯಿಂದ ಒಂದು ಕೊಕ್ಕೆ ಹಾಕಿ ನಮ್ಮ ಬಟ್ಟೆಗೆ ಸಿಕ್ಕಿಸುತ್ತಿದ್ದರು. ಆಗ ಚಕ್ಕುಲಿ ತಿಂಡಿ ತಿನಿಸು ಕೊಡುತ್ತಿದ್ದರು ಅದೆಲ್ಲ ನನಗೇ ಆಗಿತ್ತು. ಆಗ ಎಷ್ಟೋ ಜನ, ಈ ಕೃಷ್ಣ ಎಂತ ಮಾರೆ ತಿಂದುಕೊಂಡೇ ಇರುವುದೆಂದು ತಮಾಷೆ ಮಾಡುತ್ತಿದ್ದರು. ಶಾಲೆಯಲ್ಲೂ ಗೇಲಿ ಮಾಡುತ್ತಿದ್ದರು. ಆದರೆ ಶಾಲೆಯಲ್ಲಿ, ನಾನು ವೇಷ ಹಾಕೇ ಇಲ್ಲ ಎನ್ನುತ್ತಿದೆ. 

click me!