Bigg Boss Gilli Nata Debut Sandalwood Hero: ಕೆವಿಎನ್ ಪ್ರೊಡಕ್ಷನ್ ಸಿನಿಮಾಗೆ ಹೀರೋ ಆದ 'ಗಿಲ್ಲಿ ನಟ'!

Published : Jun 16, 2026, 08:16 PM IST

ಬಿಗ್ ಬಾಸ್ ಖ್ಯಾತಿಯ ಹಾಸ್ಯನಟ ಗಿಲ್ಲಿ ನಟ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಡಿಯೋ ಮೂಲಕ ಘೋಷಣೆ ಮಾಡಲಾಗಿದೆ. ಚಿತ್ರದ ಮುಹೂರ್ತವು ಜೂನ್ 21 ರಂದು ನಡೆಯಲಿದೆ.

PREV
112

ಬಿಗ್ ಬಾಸ್ ಸೀಸನ್ 12ರ ವಿಜೇತ ಹಾಸ್ಯನಟ ನಟರಾಜ್ ಅಲಿಯಾಸ್ ಗಿಲ್ಲಿ ನಟ ಅವರು ಇದೀಗ ತಾವು ಬೆಂಗಳೂರಿಗೆ ಬಂದಿದ್ದ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿ ಅವಕಾಶ ಸಿಕ್ಕಿದ್ದು, ಇದೇ ಜೂ.21ರಂದು ಗಿಲ್ಲಿ ಟವರ ಜನ್ಮದಿನದಂದೇ ಸಿನಿಮಾ ಮುಹೂರ್ತ ಇಟ್ಟುಕೊಳ್ಳಲಾಗಿದೆ. 

ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

212

ನಿನ್ನೆಯೇ ನಾಳೆ ಸಂಜೆ ಒಂದು ದೊಡ್ಡ ಘೋಷಣೆ ಮಾಡುವುದಾಗಿ ಗಿಲ್ಲಿನಟ ಮುನ್ಸೂಚನೆ ನೀಡಿದ್ದರು. ಅದರಂತೆ ಇಂದು ಸಂಜೆ ಒಂದು ಹಾಸ್ಯ ವಿಡಿಯೋ ಗಿಲ್ಲಿ ನಟ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದು, ಸದ್ಯಕ್ಕೆ ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ನಡೆದ ಸಂಭಾಷಣೆಯ ವಿವರ ಇಲ್ಲಿದೆ.

312

ನನಗೆ 2028ರವರೆಗೆ ಬಿಟ್ಟುಬಿಡಿ ಸರ್. ಆಲ್‌ ದಿ ಬೆಸ್ಟ್ ಎಂದು ಪ್ರೊಡೂಸರ್ ಅವರು ಹೇಳುತ್ತಾರೆ. ನೀವು ಪದೇಪದೆ ಫೋನ್‌ ಮಾಡಿ ತೊಂದರೆ ಕೊಡ್ತಿದ್ದರೆ ನಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಫಾರಿನ್‌ಗೆ ಹೋಗಿ ಬಿಡ್ತೀನಿ. ಊಟಿ, ಕೊಡೈಕೆನಾಲ್‌ಗೆ ಹೋಗ್ತೇನೆ ಎಂದು ಸಿಟ್ಟಿನಿಂದಲೇ ಗಿಲ್ಲಿನಟ ಫೋನ್ ಕಟ್ ಮಾಡ್ತಾರೆ. ಆಗ ಎಲ್ಲಿಗೆ ಬಂದ ಡೈರೆಕ್ಟರ್, ಪ್ರೊಡೂಸರ್ ಅವರು ಗಿಲ್ಲಿ ನಟ ಅವರಿಗೆ ಕಂಗ್ರಾಟ್ಸ್ ಹೇಳುತ್ತಾ ನೀವು ಹೀರೋ ಎಂದು ಮಾತು ಆರಂಭಿಸುತ್ತಾರೆ.

412

ಆಗ ಗಿಲ್ಲಿಗೆ ಆಶ್ಚರ್ಯವಾಗಿ ನೀವು ತಪ್ಪಾದ ಅಡ್ರೆಸ್‌ಗೆ ಬಂದಿಲ್ಲವಲ್ಲಾ ಎಂದು ಕೇಳುತ್ತಾರೆ. ಆಗ ನಾವೆಲ್ಲರೂ ಮಾತನಾಡಿಕೊಂಡೇ ನಿಮ್ಮನ್ನ ಹೀರೋ ಮಾಡುವುದಕ್ಕೆ ಸಿದ್ಧವಾಗಿ ಬಂದಿದ್ದೇವೆ ಎಂದು ಹೇಳುತ್ತಾರೆ. ಆಗ ಮನಸ್ಸಿನಲ್ಲಿ ಗಿಲ್ಲಿನಟ ಖುಷಿಪಡುತ್ತಾ, ಹೌದು, ನಾನು ಇತ್ತೀಚೆಗೆ ಜಿಮ್‌ಗೆಲ್ಲಾ ಹೋಗಿ ಫಿಟ್ ಆಗಿದ್ದೀನಿ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. 

512

ಮುಂದುವರೆದು, ನನಗೆ ಹೀರೋಯಿನ್ ಯಾರು ಸರ್ ಎಂದು ಗಿಲ್ಲಿ ಕೇಳಿದಾಗ ನಿರ್ದೇಶಕರು ಹಾಗೂ ಪ್ರೊಡೂಸರ್ ಅವರು ಶ್ರೀಲೀಲಾ ಅವರ ಫೋಟೋ ತೋರಿಸುತ್ತಾರೆ. ಆಗ ಡೈರೆಕ್ಟರ್ ನಿಮಗೆ ಆಸೆ ಪಡುವುದಕ್ಕೂ ಒಂದು ಮಿತಿ ಇಲ್ಲವೇ ಬೇರೆ ಫೋಟೋ ಇದೆ ಎಂದು ಹೇಳುತ್ತಾರೆ. ಆದರೆ ಅದನ್ನು ನೋಡಲಾಗುವುದಿಲ್ಲ. ಇದರ ಅರ್ಥ ಸದ್ಯಕ್ಕೆ ಶ್ರೀಲೀಲಾ ಹೀರೋಯಿನ್ ಅನ್ನುವುದು ಖಚಿತವಾಗುತ್ತಿದೆ.

612

ನಿರ್ದೇಶಕರು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿ ನಟ ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಪ್ಯಾನ್ ಕರ್ನಾಟಕ ಸಿನಿಮಾ ಮಾಡೋಣ 4 ಭಾಷೆಗಳಲ್ಲಿ ಎಂದು ಗಿಲ್ಲಿ ನಟ ನಿರ್ದೆಶಕರಿಗೆ ಸಲಹೆ ನೀಡುತ್ತಾರೆ. ಆಗ ಕರ್ನಾಟಕದಲ್ಲಿ ಯಾವ ನಾಲ್ಕು ಭಾಷೆಗಳಿವೆ ಎಂದು ಕೇಳಿದಾಗ ಮಂಡ್ಯ, ಮಂಗಳೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಷೆಗಳನ್ನು ಹೇಳುತ್ತಾರೆ.

712

ಮುಂದುವರೆದು, ಪಾರ್ಟ್‌ 2ಕ್ಕೆ ಪ್ಯಾನ್ ಡಿಸ್ಟ್ರಿಕ್ಟ್, ಪ್ಯಾನ್ ತಾಲೂಕು ಮತ್ತು ಪ್ಯಾನ್ ಪಂಚಾಯಿತಿ ಮಟ್ಟದಲ್ಲಿ ಸಿನಿಮಾ ಮಾಡೋಣ ಎಂದು ಗಿಲ್ಲಿನಟ ಸಲಹೆ ಕೊಡುತ್ತಾರೆ. ಆಗ ಪ್ರೊಡೂಸರ್ ನೀವು ಸೂಪರ್ ಟ್ಯಾಲೆಂಟ್ ಸರ್ ಎಂದು ಹೇಳುತ್ತಾರೆ. ಆದರೆ, ನಿರ್ದೇಶಕರು ಯಾಕಾದರೂ ಇವರು ಇಂತಹ ಕೆಟ್ಟ ಸಲಹೆ ಕೊಡ್ತಾರೆ ಎಂದು ಪೇಚಾಡುತ್ತಾರೆ.

812

ಶೂಟಿಂಗ್ ಎಲ್ಲಿ ಎಂದು ಕೇಳಿದಾಗ ನಿರ್ದೇಶಕರು, ರಾಮನಗರ, ಚನ್ನಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿನಟ ಫಾರಿನ್‌ಗೆ ಹೋಗೋಣ ಎನ್ನುತ್ತಾರೆ. ಡೈರೆಕ್ಟರ್ ಅವರು ಬೇರೆ ದೇಶದವರಿಗೆ ನಮ್ಮ ದೇಶ ಫಾರಿನ್ ಆಗುತ್ತಲ್ವಾ ಸರ್, ಇಲ್ಲಿಯೇ ಶೂಟಿಂಗ್ ಮಾಡೋಣ ಎಂದು ಗಿಲ್ಲಿ ಹೇಳಿದ ಪಾಯಿಂಟ್‌ ಅನ್ನು ವಾಪಸ್ ಹೇಳಿ ಟಾಂಗ್ ಕೊಡ್ತಾರೆ. ಆಗ ಎಷ್ಟು ಸಂಭಾವನೆ ಕೊಡಬೇಕು ಎಂದು ಕೇಳುತ್ತಾರೆ.

912

ಆಗ ದನಗಳ ವ್ಯಾಪಾರವನ್ನು ಮಾಡುವಾಗ ದಲ್ಲಾಳಿಗಳು ಕೈ ಮೇಲೆ ಸೋಫಾ ಕವರ್ ಮುಚ್ಚಿಕೊಂಡು ಹಾಕಿಕೊಂಡು ರೇಟ್ ಕುದುರಿಸುವ ರೀತಿಯಲ್ಲಿ ಗಿಲ್ಲಿಗೆ ಕೊಡುವ ಸಂಭಾವನೆ ಹಣದ ಬಗ್ಗೆ ಮಾತನಾಡುತ್ತಿರುತ್ತಾರೆ.

1012

ಇನ್ನೇನು ಚರ್ಚೆ ಜೋರಾಗಿ ನಡೆಯುತ್ತಿದೆ ಎನ್ನುವಾಗ ಗಿಲ್ಲಿಯ ಮನೆಯವರು ಬಂದು ಅವರ ಕೈಮೇಲಿದ್ದ ಸೋಫಾ ಕವರ್ ಅನ್ನು ತೆಗದು, ಗಾಳಿಗೆ ಬಂದು ಇಲ್ಲಿಗೆ ಬಿದ್ದಿರಬೇಕು ಎಂದು ತೆಗೆದು ಪಕ್ಕಕ್ಕೆ ಇಡುತ್ತಾರೆ. ಕೊನೆಗೆ, ಗಿಲ್ಲಿನಟ ಒಂದಷ್ಟು ಸಂಭಾವನೆಗೆ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರೆ.

1112

ಇದಾದ ನಂತರ ನಾನು ಹೀರೋ ಆಗ್ತೀನಿ ಎನ್ನೋದನ್ನು ಹೊರಗೆ ಯಾರಿಗೂ ಹೇಳಬೇಡಿ ಎಂದು ಡೈರೆಕ್ಟರ್‌ಗೆ ಹೇಳುತ್ತಾರೆ. ಯಾವಾಗ ಮುಹೂರ್ತ ಎಂದು ಚರ್ಚೆ ಮಾಡುವಾಗ ಇದೇ ವೇಳೆ ಜೂ.21 ಗಿಲ್ಲಿನಟ ನನ್ನ ಬರ್ತಡೇ ಎಂದು ಹೇಳುತ್ತಾರೆ. ಆಗ ಅದೇ ದಿನಾಂಕಕ್ಕೆ ಸಿನಿಮಾ ಮುಹೂರ್ತ ಇಟ್ಟುಕೊಳ್ಳೋಣ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

1212

ಈ ಚರ್ಚೆ ಮುಗಿದ ನಂತರ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಗೆ ಹೋಗಿ ಸಿನಿಮಾ ಮಾಡುವುದಕ್ಕೆ ಹಾಗೂ ಮುಹೂರ್ತಕ್ಕೆ ಎಲ್ಲರೂ ಚರ್ಚೆ ಮಾಡಿ ಶುಭಾಶಯ ಕೋರುತ್ತಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈಗಾಗಲೇ ಸಿನಿಮಾಗಳಿಗೆ ನೂರಾರು ಕೋಟಿಬಂಡವಾಳವನ್ನು ಹೂಡಿಕೆ ಮಾಡಿ ಪ್ಯಾನ್ ಇಂಡಿಯಾ ಮತ್ತು ಪ್ಯಾನ್ ವರ್ಲ್ಡ್‌ ಲೆವೆಲ್‌ನಲ್ಲಿ ಹೆಸರು ಮಾಡಿದೆ. ಇದೀಗ ಗಿಲ್ಲಿ ನಟನಿಗೆ ಪ್ರೊಡಕ್ಷನ್ ಒಪ್ಪಿಕೊಂಡಿರುವುದು ಗಿಲ್ಲಿಯ ಟ್ಯಾಲೆಂಟ್‌ಗೆ ಹಿಡಿದ ಕನ್ನಡಿಯಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories