Karna Serial : ಮಧುಮಂಚದಲ್ಲಿ ನಿಧಿಗೆ ಮುತ್ತಿಟ್ಟ ಕರ್ಣ, ನಾಚಿನೀರಾದ ವೀಕ್ಷಕರ ಬೇಡಿಕೆ ಏನು?

Published : May 27, 2026, 04:07 PM IST

ಕರ್ಣ ಸೀರಿಯಲ್ ಫೈನಲಿ ಕರ್ಣ – ನಿಧಿ ಫಸ್ಟ್ ನೈಟ್ ಗೆ ಬಂದು ನಿಂತಿದೆ. ವೀಕ್ಷಕರ ಬಯಕೆಯಂತೆ ನಿಧಿ ಹಾಗೂ ಕರ್ಣನ ಮದುವೆಯಾಗಿದೆ. ಆದ್ರೆ ಮದುವೆ, ಪ್ರವೇಶದ ಮಧ್ಯೆ ಸೀರಿಯಲ್ ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡಿದೆ. 

PREV
15
ಮಧುಮಂಚದಲ್ಲಿ ಕರ್ಣ ನಿಧಿ

ನಿಧಿ ಹಾಗೂ ಕರ್ಣ ಕೊನೆಗೂ ಗಂಡ – ಹೆಂಡತಿಯಾಗಿದ್ದಾರೆ. ಮದುವೆ ನಂತ್ರ ನಿಧಿ ಹಾಗೂ ಕರ್ಣನ ಫಸ್ಟ್ ನೈಟ್ ಗೆ ಎಲ್ಲ ತಯಾರಿ ನಡೆದಿದೆ. ಕರ್ಣನನ್ನು ನೋಡಿದ ನಿಧಿ, ನಾಚಿ ನೀರಾಗಿದ್ದಾಳೆ. ಆಕೆ ಹತ್ತಿರ ಬರುವ ಕರ್ಣ, ದಾಂಪತ್ಯಕ್ಕೆ ಮುತ್ತಿನ ಮುನ್ನುಡಿ ಬರೆದಿದ್ದಾನೆ. ಕೊನೆಗೂ ಈ ಕ್ಷಣ ಬಂತ್ತು. ಇನ್ಮುಂದೆ ಹೆಮ್ಮೆಯಿಂದ ಹೇಳಿಕೊಳ್ತೇನೆ ನನ್ನ ಹೆಂಡ್ತಿ, ನನ್ನವರು ಅಂತ ಎಂದಿದ್ದಾನೆ ಕರ್ಣ.

25
ನಿತ್ಯಾ ತ್ಯಾಗ

ಕರ್ಣ ಹಾಗೂ ನಿಧಿ ಮದುವೆಯಾಗಿದ್ದೇ ವೀಕ್ಷಕರಿಗೆ ದೊಡ್ಡ ಗಿಫ್ಟ್ ಆಗಿತ್ತು. ಕೊನೆಯವರೆಗೂ ಕರ್ಣ ನಿಧಿ ಮದುವೆ ನಡೆಯುತ್ತೇ ಅನ್ನೋದನ್ನು ನಂಬಲು ವೀಕ್ಷಕರು ಸಿದ್ಧ ಇರಲಿಲ್ಲ. ಆದ್ರೆ ನಿತ್ಯಾ ದೊಡ್ಡ ತ್ಯಾಗ ಮಾಡಿ, ಕರ್ಣನನ್ನು ನಿಧಿಗೆ ಬಿಟ್ಟುಕೊಟ್ಟಿದ್ದಾಳೆ. ಬೇಸರದಲ್ಲಿದ್ದ ವೀಕ್ಷಕರಿಗೆ ಕೊನೆಗೂ ಕರ್ಣ- ನಿಧಿ ಒಂದಾಗೋದನ್ನು ನೋಡುವ ಅವಕಾಶ ಸಿಕ್ಕಿದೆ.

35
ಕಳಚಿದ ರಮೇಶನ ಮುಖವಾಡ

ಕರ್ಣನ ಮನೆಗೆ ಸಿದ್ದೆ ಒದ್ದು ನಿಧಿ ಬರ್ತಿದ್ದಂತೆ ದೊಡ್ಡ ಸತ್ಯ ಎಲ್ಲರ ಮುಂದೆ ಸ್ಫೋಟವಾಗಿದೆ. ನಿಧಿ ಹಾಗೂ ಕರ್ಣನ ಮದುವೆಗೆ ಅಡ್ಡಿಯಾಗಿದ್ದು ಯಾರು, ನಿತ್ಯಾ ಬಾಳಲ್ಲಿ ಆಟವಾಡಿದ ವ್ಯಕ್ತಿ ಯಾರು ಎಂಬ ಸತ್ಯವನ್ನು ಕರ್ಣ ಮನೆಯವರಿಗೆ ಹೇಳಿದ್ದಾನೆ. ರಮೇಶನ ಮುಖವಾಡ ಎಲ್ಲರ ಮುಂದೆ ಬಹಿರಂಗವಾಗ್ತಿದ್ದಂತೆ ಎಲ್ಲರೂ ದಂಗಾಗಿದ್ದಾರೆ. ರಮೇಶನನ್ನು ಮನೆಯಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಆದ್ರೆ ನಿಧಿಯ ಮಾತಿಗೆ ಎಲ್ಲರೂ ಕರಗಿದ್ದು, ರಮೇಶನಿಗೆ ಇನ್ನೊಂದು ಅವಕಾಶ ನೀಡಿದ್ದಾರೆ.

45
ನಿತ್ಯಾ ಕ್ಷಮೆ ಕೇಳಿದ ತೇಜಸ್

ನಿತ್ಯಾಗೆ ಅವಮಾನ ಮಾಡಿದ್ದ ತೇಜಸ್ ಈಗ ನಿತ್ಯಾ ಕ್ಷಮೆ ಕೇಳಿದ್ದಾನೆ. ಆದ್ರೆ ನಿತ್ಯಾ ಮದುವೆಯಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಲ್ಲದೆ, ತನಗೆ ಇನ್ನೊಂದು ಮದುವೆಯಾಗಿರುವ ವಿಷ್ಯವನ್ನು ನಿತ್ಯಾ ಮುಂದಿಟ್ಟಿದ್ದಾನೆ. ಈ ಮಧ್ಯೆ ಈ ಎಲ್ಲದರ ಹಿಂದೆ ಲೇಡಿ ಡಾನ್ ಒಬ್ಬರಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ತೋರಿಸಲಾಗಿದ್ದು, ಅದು ಯಾರು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡ್ತಿದೆ.

55
ವೀಕ್ಷಕರ ಕಮೆಂಟ್

ಪ್ರೋಮೋ ನೋಡಿದ ವೀಕ್ಷಕರು, ನಿಧಿ- ಕರ್ಣನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೇವೆ ಅಂತ ಕಮೆಂಟ್ ಮಾಡಿದ್ದಾರೆ. ಆದ್ರೆ ವೀಕ್ಷಕರಿಗೆ ಮೌನದ ರೋಮ್ಯಾನ್ಸ್ ಇಷ್ಟವಾಗ್ತಿಲ್ಲ. ಇಬ್ಬರ ಮಧ್ಯೆ ರೋಮ್ಯಾಂಟಿಕ್ ಮಾತುಗಳು ಬೇಕು, ನಿಧಿ ತನ್ನ ಪ್ರೀತಿಯನ್ನು ಕರ್ಣನ ಮುಂದೆ ಹೇಳಿಕೊಳ್ಬೇಕು ಎನ್ನುವ ಆಸೆ ವೀಕ್ಷಕರದ್ದು. ಇನ್ನಷ್ಟು ರಿಚ್ ಆಗಿರ್ಬೇಕಿತ್ತು ಮದುವೆ, ಫಸ್ಟ್ ನೈಟ್, ತುಂಬಾ ಸಿಂಪಲ್ ಆಯ್ತು ಎನ್ನುವ ಬೇಸರವನ್ನೂ ವೀಕ್ಷಕರು ತೋಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories