Bigg Boss: ಹೀಗೆಲ್ಲಾ ಮಾಡಲು ಇಷ್ಟವಿಲ್ಲ, ನಾನೇ ಬಿಗ್​ಬಾಸ್​ ಮನೆಯಿಂದ ಹೊರ ಹೋಗ್ತೇನೆ: ಸ್ಪರ್ಧಿಯ ಶಾಕಿಂಗ್​ ಹೇಳಿಕೆ

Published : Nov 30, 2025, 04:09 PM IST

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ, ಸ್ಪರ್ಧಿ ಒಬ್ಬರು ಅವರು ನಿಂದನೀಯ ಪದ ಬಳಕೆಯ ಆರೋಪ ಮತ್ತು ಇತರ ಸ್ಪರ್ಧಿಗಳೊಂದಿಗೆ ತೀವ್ರ ಜಗಳದ ನಂತರ ತಾವೇ ಶೋ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಅವರ ಈ ವರ್ತನೆಯು ಮನೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಯಾರವರು? 

PREV
17
ಮತ್ತೊಂದು ಎಲಿಮಿನೇಷನ್​

ಬಿಗ್​ಬಾಸ್​ ಕನ್ನಡ ಸೀಸನ್​ 12 (Bigg Boss Kannada 12) ವೀಕೆಂಡ್​ನಲ್ಲಿ ಇದೀಗ ಮತ್ತೊಂದು ಎಲಿಮಿನೇಷನ್​ ನಡೆಯಲಿದೆ. ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎನ್ನುವ ಬಗ್ಗೆ ವೀಕ್ಷಕರಲ್ಲಿ ಕುತೂಹಲವಿದ್ದು, ಒಬ್ಬೊಬ್ಬರು ಒಂದೊಂದು ಹೆಸರುಗಳನ್ನು ಸೂಚಿಸುತ್ತಿದ್ದಾರೆ.

27
ಖುದ್ದು ಷೋ ಬಿಟ್ಟು ಹೋಗುವ ಮಾತು

ಇವುಗಳ ನಡುವೆಯೇ, ತಾವೇ ಖುದ್ದು ಷೋ ಬಿಟ್ಟು ಹೋಗುವ ಬಗ್ಗೆ ಸ್ಪರ್ಧಿಯೊಬ್ಬರು ಮಾತನಾಡಿದ್ದು, ಈ ವಾರ ಅವರೇ ಮನೆಯಿಂದ ಆ ಕಡೆ ಹೋಗಬಹುದು ಎನ್ನಲಾಗಿದೆ.

37
ಇತರರ ಆರೋಪ

ಒಳ್ಳೆಯ ಮನುಷ್ಯರನ್ನು ಹಾಳು ಮಾಡುವುದೇ ಇವರ ಉದ್ದೇಶ ಎಂದು ಮಾಳು ಹೇಳಿದ್ರು, ಇದೊಂದು ಕುತಂತ್ರಿಕೆಲಸ ಎಂಬ ಆರೋಪ ಕೂಡ ಕೇಳಿಬಂದಾಗ, ಇವೆಲ್ಲಾ ಕೇಳುವ ಬದಲು ಬಿಗ್ಬಾಸ್​ ಷೋ ಬಿಟ್ಟು ಹೋಗುತ್ತೇನೆ ಎಂದರು.

47
ಯಾರವರು?

ಅಂದಹಾಗೆ ಅವರೇ ಧ್ರುವಂತ್​ (Bigg Boss Dhruvanth). ಶೋ ಬಿಡ್ತಾರಾ ಧ್ರುವಂತ್? ಎನ್ನುವ ಶೀರ್ಷಿಕೆಯಲ್ಲಿ ಕಲರ್ಸ್​ ಕನ್ನಡ ಇದನ್ನು ಶೇರ್​ ಮಾಡಿದೆ. ಧ್ರುವಂತ್ ವಿರುದ್ಧ ಆರೋಪಗಳ ಕೇಳಿಬಂದಾಗ ಅವರಿಗೆ ಕೊಟ್ಟ ಟ್ಯಾಗ್​ ಅನ್ನು ಧರಿಸುವಂತೆ ಕಿಚ್ಚ ಸುದೀಪ್​ ಹೇಳಿದರು. ಆಗ ಬೇಸರದಿಂದ ಧ್ರುವಂತ್​ ಹೀಗೆ ಮಾಡುವ ಬದಲು ಷೋ ಬಿಟ್ಟು ಹೋಗಲು ಇಷ್ಟಪಡುತ್ತೇನೆ ಎಂದಿದ್ದಾರೆ!

57
ತಿ* ಗಾಂಚಲಿ ಪದ

ಇದಾಗಲೇ ಧ್ರುವಂತ್​ ಅವರ ವಿರುದ್ಧ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಅವರು ಕೆಟ್ಟ ಶಬ್ದ ಬಳಸಿದ್ದಾರೆ ಎನ್ನಲಾಗಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ತಿ* ಗಾಂಚಲಿ ಪದ ಬಳಸಿ ಸ್ಪರ್ಧಿಗಳು ಒಬ್ಬರನ್ನೊಬ್ಬರನ್ನು ನಿಂದಿಸುತ್ತಿದ್ದಾರೆ. ಈ ಪದದ ಬಳಕೆಯನ್ನು ಧ್ರುವಂತ್ ಆರಂಭಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿಂದೆ ಕಾಕ್ರೋಚ್ ಸುಧಿ ಬಳಸಿದ್ದ ಸಡೆ ಎಂಬ ಪದವೂ ಚರ್ಚೆಗೆ ಕಾರಣವಾಗಿತ್ತು.

67
ಧ್ರುವಂತ್​ ವಿರುದ್ಧ ಆಕ್ರೋಶ

ಮನೆ ಲಕ್ಷುರಿ ಐಟಂ ಪಡೆದುಕೊಳ್ಳುವ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಧ್ರುವಂತ್ ನಿಮಗೆ 'ಟಿ ಗಾಂಚಾಲಿ' ಎಂಬ ಪದ ಬಳಸಿದ್ರು ಎಂದು ಧನುಷ್ ಮುಂದೆ ಸೂರಜ್ ಹೇಳಿದ್ದರು. ಇದೇ ವಿಷಯವಾಗಿ ಧ್ರುವಂತ್ ಮತ್ತು ಧನುಷ್ ನಡುವೆ ಜಗಳ ಆರಂಭವಾಗುತ್ತದೆ. ಈ ಜಗಳದ ವೇಳೆ ಹಿಂದಿನ ದಿನ ಮಹಿಳಾ ಸ್ಪರ್ಧಿಗೂ ಈ ರೀತಿ ಬಳಕೆ ಮಾಡಿದ್ದೀರಿ ಎಂದು ಧ್ರುವಂತ್ ಹೇಳಿದ್ರು ಎಂದು ಧನುಷ್ ಹೇಳಿದ್ದರು.

77
ಎಲ್ಲರ ಅಸಮಾಧಾನ

ಧ್ರುವಂತ್ ಅವರು ಅತಿರೇಕದ ಪದ ಬಳಕೆ ಮಾಡಿದ್ದಕ್ಕೆ ಸೂರಜ್ ಸಿಂಗ್​ ಕೂಡ ಕೋಪಗೊಂಡಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಧನುಷ್ ಈ ಜಗಳದಲ್ಲಿ ಮಧ್ಯ ಬಂದಿದ್ದರು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಜಗಳ. ಜಗಳದ ವೇಳೆ ಸ್ಪಂದನಾ ಮೇಲೆ ಕೂಡ ಧ್ರುವಂತ್ ಅವರು ಕೂಗಾಡಿದ್ದರು. ಇವೆಲ್ಲವುಗಳ ನಡುವೆ ಈಗ ಈ ಮಾತು ಕೇಳಿಬಂದಿದೆ.

Read more Photos on
click me!

Recommended Stories