Bigg Boss: ತಿಂದ ಮನೆಗೆ ಕನ್ನ ಹಾಕೋರು ಇವ್ರು- ವರ್ತೂರು ಸಂತೋಷ್​ ಗರಂ; ಷೋ ಬಗ್ಗೆ ಹೇಳಿದ್ದೇನು?

Published : Dec 14, 2025, 06:14 PM IST

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ಶೋ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಇತರ ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಊಟಕ್ಕೆ ಕೊರತೆ ಇರಲಿಲ್ಲ ಮತ್ತು ಶೋ ಸ್ಕ್ರಿಪ್ಟೆಡ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

PREV
17
ಹುಲಿ ಉಗುರು

ಬಿಗ್​ಬಾಸ್​ 10ರಲ್ಲಿ ಹವಾ ಸೃಷ್ಟಿಸಿದವರ ಪೈಕಿ ವರ್ತೂರು ಸಂತೋಷ್​ ಒಬ್ಬರು. ನಾಲ್ಕನೆಯ ರನ್ನರ್​ ಅಪ್​ ಆಗಿ ಹೊರಬಂದವರು ಇವರು. ಆದರೆ ವರ್ತೂರು ಧರಿಸಿದ್ದ ಹುಲಿಯ ಉರುಗಿನ ಪೆಂಡೆಂಟ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಬಿಗ್​ಬಾಸ್​ 10ರ ಟಿಆರ್​ಪಿ ಕೂಡ ಹೆಚ್ಚಿಸಿದ್ದವರಲ್ಲಿ ಇವರೂ ಒಬ್ಬರಾಗಿದ್ದರು! ಕಾನೂನು ಮೀರಿ ಹುಲಿಯ ಉಗುರು ಧರಿಸಿದ್ದು ಗಲಾಟೆಗೆ ಕಾರಣವಾಗಿ ಕೊನೆಗೆ ಏನೇನೋ ತಿರುವುಗಳನ್ನೂ ಪಡೆದುಕೊಂಡು ಜೈಲಿಗೂ ಹೋಗಿ ಬಂದರು ವರ್ತೂರು.

27
10 ಲಕ್ಷ ಘೋಷಣೆ

ಇದಾಗಲೇ ಬಿಗ್​ಬಾಸ್​​ ಸೀಸನ್​ 12ರಲ್ಲಿ ಎರಡನೆಯ ರನ್ನರ್​ ಅಪ್​ ಗೆ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಸುದೀಪ್​ ಅವರು ಇರುವವರೆಗೂ ಈ ಬಹುಮಾನ ಕೊಡುವುದಾಗಿ ಹೇಳಿದ್ದಾರೆ.

37
ಸ್ಪರ್ಧಿ ಬಗ್ಗೆ ಕಿಡಿ

ಇದೀಗ ವರ್ತೂರು ಸಂತೋಷ್​ ಅವರು, ಬಿಗ್​ಬಾಸ್​ ಷೋ ಬಗ್ಗೆ ಮಾತನಾಡುತ್ತಲೇ ಸ್ಪರ್ಧಿಯ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಕೆಲವರು ಆ ಷೋ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಊಟ ಸರಿಯಾಗಿ ಕೊಡ್ತಾ ಇರಲಿಲ್ಲ, ಅಲ್ಲಿ ಸ್ವಲ್ಪ ದಿನ ಇದ್ದರೆ ಸತ್ತೇ ಹೋಗುತ್ತಿದ್ದೆ ಇತ್ಯಾದಿ ಇತ್ಯಾದಿಯಾಗಿ ಮೀಡಿಯಾಗಳಲ್ಲಿ ಹೇಳುತ್ತಿದ್ದಾರೆ.

47
ಅನ್ನ ತಿಂದು...

ಇವರ ವಿರುದ್ಧ ಕಿಡಿ ಕಾರಿರುವ ವರ್ತೂರು ಸಂತೋಷ್​ (Bigg Boss Varthur Santosh) ಬಿಗ್​ಬಾಸ್​ ಮನೆಯ ಅನ್ನ ತಿಂದು ಕನ್ನ ಹಾಕುವ ಜಾತಿ ಇವರದ್ದು ಎಂದು ಬೈದಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಯಾವತ್ತೂ ಊಟಕ್ಕೆ ಕೊರತೆ ಮಾಡುತ್ತಿರಲಿಲ್ಲ. ಒಂದು ವೇಳೆ ಏನೋ ಕಾರಣಕ್ಕೆ ಊಟ ಕಡಿಮೆ ಆದರೂ ಟಾಸ್ಕ್​ ಹೆಸರಿನಲ್ಲಿ ಊಟ ಕೊಡುತ್ತಾರೆ. ಸುಮ್ಮನೇ ಹೊರಕ್ಕೆ ಬಂದು ಸುಳ್ಳು ಸುದ್ದಿ ಹರಡುತ್ತಾರೆ ಎಂದು ಉಗಿದಿದ್ದಾರೆ.

57
ಸ್ಕ್ರಿಪ್ಟೆಡ್​ ವಿಷ್ಯ...

ಅದೇ ರೀತಿ ಅಲ್ಲಿ ಸ್ಕ್ರಿಪ್ಟೆಡ್​ ಅದೂ ಇದೂ ಏನೂ ಇಲ್ಲ. ಎಲ್ಲವೂ ತಂತಾನೇ ಆಗುತ್ತದೆ. ಸುಖಾ ಸುಮ್ಮನೆ ಇಲ್ಲಸಲ್ಲದನ್ನು ಹರಡುತ್ತಿರುವುದಾಗಿ ಸಂತೋಷ್​ ಅವರು ನ್ಯೂಸ್​ಬೀಟ್​ಕನ್ನಡ ಇನ್​ಸ್ಟಾಗ್ರಾಮ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

67
ವೈಯಕ್ತಿಯ ಚರ್ಚೆ

ಇನ್ನು ವರ್ತೂರು ಸಂತೋಷ್​ ಅವರ ವಿಷ್ಯ ಹೇಳುವುದಾದರೆ, ಇವರು ಫೇಮಸ್​ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್​ ಇರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.

77
ವಿವಾದ

ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್​ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.

Read more Photos on
click me!

Recommended Stories