ಜಯಶ್ರೀ ಆರಾಧ್ಯ ಅವರು “ಪ್ರೇಮಿ ಇಲ್ಲದಿದ್ದರೇನಂತೆ? ತೊಂದರೆ ಇಲ್ಲ. ಅರ್ಹತೆ ಇರೋದಿಕ್ಕೆ ನಾನು ಮರ್ಸಿಡಿಸ್ ತಗೊಂಡೆ. ಖುಷಿಗೆ ಅನಂದಬಾಷ್ಫದ ಜೊತೆಗೆ ಹೃದಯತುಂಬ ಹೆಮ್ಮೆಯಿದೆ. ಕೊನೆಗೂ ನಾನು ಇದನ್ನು ಸಾಧಿಸಿದೆ. ಯಾರೂ ನನ್ನನ್ನು ನಂಬದೇ ಇದ್ದಾಗ, ನಾನು ನನ್ನ ಮೇಲೆ ನಂಬಿಕೆ ಇಟ್ಟಿದ್ದೆ. ನಾನು ನಿರಂತರ ಕೆಲಸ ಮಾಡಿದೆ, ಕಷ್ಟಗಳ ವಿರುದ್ಧ ಹೋರಾಟ ಮಾಡಿದೆ, ತ್ಯಾಗವೂ ಮಾಡಿದೆ. ನನ್ನ ಶಕ್ತಿಯನ್ನು ನಾನು ಇಂದು ಆಚರಿಸುತ್ತಿದ್ದೇನೆ, ಇನ್ನೂ ಒಂದಷ್ಟು ಮೈಲಿಗಲ್ಲು ಸಾಧಿಸಬೇಕಿದೆ” ಎಂದು ಹೇಳಿದ್ದರು.