ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರ ವ್ಯಕ್ತಿತ್ವದ ಆಟ. ಸ್ಪರ್ಧಿಗಳಿಗೆ ಮಾತ್ರ ಈ ಬಾರಿ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಮಾಡಲಾಗುತ್ತಿದೆ. ಅದರಲ್ಲೂ ಮನೆಯವರಿಂದ ಬಂದ ಪತ್ರಗಳು ಸ್ಪರ್ಧಿಗಳ ಕಣ್ಣಲ್ಲಿ ನೀರು ಹಾಕಿಸುತ್ತಿವೆ.
ಕಾವ್ಯ ಶೈವ ಹಾಗೂ ಗಿಲ್ಲಿ ನಟ ಮೊದಲೇ ಸ್ನೇಹಿತರು, ಪರಿಚಯಸ್ಥರು. ಈ ಮನೆಯಲ್ಲಿ ಗಿಲ್ಲಿ, ಕಾವ್ಯ ನಡುವೆ ಒಳ್ಳೆಯ ಸ್ನೇಹ ಇದೆ. ಯಾವಾಗಲೂ ಗಿಲ್ಲಿ ಮಾತ್ರ ಕಾವು, ಕಾವು ಅಂತ ಹೇಳೋದುಂಟು. ಈಗ ಇವರಿಬ್ಬರಿಗೂ ಬಿಗ್ ಬಾಸ್ ಧರ್ಮಸಂಕಟದಲ್ಲಿ ಕೂರಿಸಿದ್ದಾರೆ.
25
ಮನೆಯವರಿಂದ ಪತ್ರ ಬಂತು
ಕಾವ್ಯ ಅವರ ಮುಂದೆ ಗಿಲ್ಲಿ ಮನೆಯವರಿಂದ ಬಂದ ಪತ್ರವಿದೆ. ಗಿಲ್ಲಿ ನಟ ಅವರ ಮುಂದೆ ಕಾವ್ಯ ಶೈವ ಅವರ ಮನೆಯಿಂದ ಪತ್ರವಿತ್ತು. ಇದು ಬಿಗ್ ಬಾಸ್ ನೀಡಿದ ಟಾಸ್ಕ್ ಆಗಿತ್ತು.
35
ಆ ಪತ್ರವನ್ನು ಏನು ಮಾಡಬಹುದು?
ನೀವು ನಿಮ್ಮ ಮುಂದೆ ಇರುವ ಪತ್ರವನ್ನು ತಗೊಂಡು ಹೊರಗಡೆ ಬರಬಹುದು ಅಥವಾ ಅಲ್ಲೇ ಇಡಬಹುದು ಎಂದು ಬಿಗ್ ಬಾಸ್ ಹೇಳಿದ್ದಾರೆ. ಗಿಲ್ಲಿ ಅವರು ಕಾವ್ಯ ಮನೆಯವರ ಪತ್ರವನ್ನು ತಗೊಂಡು ಬಂದರೆ, ಅವರಿಗೆ ಅವರ ಮನೆಯ ಪತ್ರ ಸಿಗೋದಿಲ್ಲ.
ಯಾವಾಗಲೂ ನಾನು ಕಾವ್ಯಳ ನಂಬಿಕೆಯನ್ನು ಉಳಿಸಿಕೊಳ್ತೀನಿ ಎಂದು ಗಿಲ್ಲಿ ಹೇಳುತ್ತಿದ್ದರು. ಗಂಡಿಗೆ ಚಟ ಇರಬಾರದು, ಹೆಣ್ಣಿಗೆ ಹಠ ಇರಬಾರದು ಎಂದು ಗಿಲ್ಲಿ ಹೇಳಿದಾಗ, ಕಾವ್ಯ ಮಾತ್ರ, ನಿನಗೆ ಚಟ ಇದೆ, ನನಗೆ ಹಠ ಇದೆ ಎಂದಿದ್ದರು.
55
ಇವರಿಬ್ಬರು ಏನು ಮಾಡ್ತಾರೆ?
ಈಗ ಇವರಿಬ್ಬರು ಏನು ಮಾಡ್ತಾರೆ ಎನ್ನೋದು ಕುತೂಹಲಕಾರಿಯಾಗಿದೆ. ಇನ್ನೊಂದು ಕಡೆ ಗಿಲ್ಲಿ ಅಥವಾ ಕಾವ್ಯ ನಡುವೆ ಯಾರು ಸ್ವಾರ್ಥ ನೋಡ್ತಾರೆ ಎಂದು ಕೂಡ ಕಾದು ನೋಡಬೇಕಿದೆ. ವೀಕ್ಷಕರಿಗೆ ಎಷ್ಟು ಕುತೂಹಲ ಇದೆಯೋ ಹಾಗೆ, ಕಾವ್ಯ, ಗಿಲ್ಲಿಗೂ ಕೂಡ ನಾವು ಏನು ಮಾಡಬೇಕು ಎಂಬ ಗೊಂದಲದ ಜೊತೆ ಪರಸ್ಪರ ಏನು ಮಾಡಬಹುದು ಎಂಬ ಕುತೂಹಲ ಇರುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.