ರಘು: ನೀವು ಮರ್ಯಾದೆ ಕೊಡಿ, ಬೇರೆಯವರು ಮರ್ಯಾದೆ ಕೊಡುತ್ತಾರೆ, ಗಿಲ್ಲಿ ನಟನಿಗೆ ಹೇಗೆ ಮಾತಾಡ್ತೀರಾ ಅಂತ ಗೊತ್ತಿದೆ.
ರಘು ಅವರು ಏನು ಕಿತ್ತಾಕಿದ್ದೀಯಾ ಎಂದು ಕೇಳಿದ್ದು ಕೂಡ ಅಶ್ವಿನಿ ಗೌಡಗೆ ಸಿಟ್ಟು ಬಂದಿತ್ತು. ಸುದ್ದಿಗೋಷ್ಠಿ ಟಾಸ್ಕ್ವೊಂದರಲ್ಲಿ ಅಶ್ವಿನಿ ಗೌಡ ಅವರು, ಗಿಲ್ಲಿ ನಟನಿಗೆ “ಗಿಲ್ಲಿ ಇಷ್ಟುದಿನ ಏನು ದಬ್ಬಾಕಿದ್ದೀಯಾ?” ಎಂದು ಕೇಳಿದ್ದರು. ಈಗ ರಘು ಅವರು, “ಏನು ಕಿತ್ತಾಕಿದ್ದೀರಾ?” ಎಂದು ಕೇಳಿದ್ದಕ್ಕೆ ಅಶ್ವಿನಿಗೆ ಸಿಟ್ಟು ಬಂದಿತು. ಕಾಕ್ರೋಚ್ ಸುಧಿ ಅವರಯ, ಆ ಯಮ್ಮ ಎಂದು ಹೇಳಿದ್ದಕ್ಕೆ ಸಿಟ್ಟು ಬಂದಿತು. ಅದಾದ ಬಳಿಕ ಕಾಕ್ರೋಚ್ ಸುಧಿ ಬಗ್ಗೆ ಅಶ್ವಿನಿ ಅವರೇ ಜಾಹ್ನವಿ ಬಳಿ ಮಾತನಾಡುವಾಗ, “ಆ ಯಪ್ಪ” ಎಂದಿದ್ದರು. ಅಶ್ವಿನಿ ಗೌಡ ಅವರು ನಾಟಕ ಮಾಡುತ್ತಿದ್ದಾರೆ, ಅವರೇ ಮೊದಲು ಜಗಳ ಮಾಡ್ತಿದ್ದಾರೆ ಎಂದು ಮನೆಯವರು ಕೂಡ ಅಭಿಪ್ರಾಯಪಟ್ಟಿದ್ದಾರೆ.