ಗೌತಮ್ ತನ್ನ ತಂದೆ ಎಂಬ ಸತ್ಯ ತಿಳಿದ ಆಕಾಶ್, ಶಾಲಾ ಪ್ರಾಜೆಕ್ಟ್ ನೆಪದಲ್ಲಿ ಅಪ್ಪ-ಅಮ್ಮನನ್ನು ಒಂದು ಮಾಡಲು ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ, ಜೈದೇವ್ ಮತ್ತು ಶಕುಂತಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಯಾ ಹೊಸ ತಂತ್ರವನ್ನು ರೂಪಿಸುತ್ತಿದ್ದಾಳೆ.
ಅಮೃತಧಾರೆ (Amruthadhaare) ಈಗ ಮುಗಿಯುವ ಎಲ್ಲಾ ಸೂಚನೆಗಳೂ ಸಿಗುತ್ತಿವೆ. ಅತ್ತ ಆಕಾಶ್ಗೆ ಗೌತಮ್ನೇ ತನ್ನ ಅಪ್ಪ ಎನ್ನುವ ವಿಷಯ ತಿಳಿದಿದೆ. ಅಪ್ಪ-ಅಮ್ಮನನ್ನು ಒಂದು ಮಾಡಲು ಆಕಾಶ್ ಮತ್ತು ಮಿಂಚು ಕೈಜೋಡಿಸಿದ್ದಾರೆ.
27
ಅಪ್ಪನ ಬಳಿ ಹೋಗುವ ಪ್ಲ್ಯಾನ್
ಇದೀಗ ಆಕಾಶ್ಗೆ ಶಾಲೆಯಲ್ಲಿ ಪ್ರಾಜೆಕ್ಟ್ ಕೊಟ್ಟಿದ್ದಾರೆ. ಹೇಗಾದರೂ ಮಾಡಿ ಅಪ್ಪನ ಕೈಯಲ್ಲಿ ಪ್ರಾಜೆಕ್ಟ್ ಮಾಡಿಸಿಕೊಳ್ಳುವ ಆಸೆ ಆಕಾಶ್ಗೆ. ಆದ್ದರಿಂದ ಏನಾದರೂ ನೆಪ ಹೇಳುವ ಪ್ಲ್ಯಾನ್ ಮಾಡಿದ್ದಾನೆ.
37
ಆಕಾಶ್ಗೆ ಪ್ರಾಜೆಕ್ಟ್
ಭೂಮಿಕಾಗೆ ಪ್ರಾಜೆಕ್ಟ್ ಬರಲ್ಲ ಎಂದಾಗ, ನಾನೇ ಬರ್ತೇನೆ ಇರು ಎಂದಿದ್ದಾಳೆ ಭೂಮಿಕಾ. ಆದರೆ ಆಕಾಶ್ಗೆ ಅಪ್ಪ ಬೇಕಾಗಿದೆ. ಕೊನೆಗೆ ಮಲ್ಲಿ ಅಲ್ಲಿಗೆ ಬಂದಾಗ, ಆಕಾಶ್ ನಾನು ಫ್ರೆಂಡ್ ಮನೆಯಲ್ಲಿ ಪ್ರಾಜೆಕ್ಟ್ ಮಾಡುವಂತೆ ಏನಾದ್ರೂ ಪ್ಲ್ಯಾನ್ ಮಾಡು ಎಂದಿದ್ದಾನೆ.
ಆಕಾಶ್ಗೆ ಸತ್ಯ ಗೊತ್ತಿರೋ ವಿಷ್ಯ ಮಲ್ಲಿಗೂ ತಿಳಿದಿಲ್ಲ. ಆದರೂ ಗೌತಮ್ ಬಳಿ ಪ್ರಾಜೆಕ್ಟ್ ಮಾಡಿಸಿಕೊಳ್ಳಲು ಅವಳೂ ಬಯಸಿದ್ದರಿಂದ ಏನೋ ನೆಪ ಹೇಳಿದ್ದಾಳೆ. ಕೊನೆಗೆ ಭೂಮಿಕಾಗೆ ವಿಷಯ ಗೊತ್ತಾಗಿ, ಎಲ್ಲಿ ಹೋಗ್ತಿದ್ದಿಯಾ ಎಂದು ಕೇಳಿದ್ದಾಳೆ.
57
ಭೂಮಿಕಾ ಗ್ರೀನ್ ಸಿಗ್ನಲ್
ಅದಕ್ಕೆ ಚಿಕ್ಕಿಗೆ ಪ್ರಾಜೆಕ್ಟ್ ಬರಲ್ಲ, ಫ್ರೆಂಡ್ ಮನೆಗೆ ಹೋಗ್ತಿದ್ದೇನೆ ಎಂದಾಗ ಭೂಮಿಕಾ ಕೂಡ ಎದುರು ಮಾತನಾಡದೇ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ದಾಳೆ. ಮಲ್ಲಿ ಬಿಡ್ತಾಳಾ, ಭೂಮಿಕಾ ಕಾಲೆಳೆದಿದ್ದಾಳೆ.
67
ಮಿಂಚುಗೂ ಖುಷಿ
ಕೊನೆಗೆ ಅಪ್ಪನ ಬಳಿಯೇ ಪ್ರಾಜೆಕ್ಟ್ ಮಾಡಿಸಿಕೊಂಡಿದ್ದಾನೆ ಆಕಾಶ್. ಮಿಂಚು ಇದನ್ನು ನೋಡಿ ಸಕತ್ ಖುಷಿ ಪಟ್ಟುಕೊಂಡಿದ್ದಾಳೆ. ಹೇಗಾದರೂ ಮಾಡಿ ಅಪ್ಪ-ಅಮ್ಮನನ್ನು ಒಂದು ಮಾಡುವುದು ಇಬ್ಬರ ಆಸೆಯಷ್ಟೇ.
77
ಜೈದೇವ್ ಮುಗಿಸಲು ದಿಯಾ ಸ್ಕೆಚ್
ಅದೇ ಇನ್ನೊಂದೆಡೆ ಜೈದೇವ್ ಮತ್ತು ಶಕುಂತಲಾಗೆ ಬುದ್ಧಿ ಕಲಿಸಲು ದಿಯಾ ಸ್ಕೆಚ್ ಹಾಕುತ್ತಿದ್ದಾಳೆ. ಗಂಡನನ್ನು ಪ್ರೀತಿ ಮಾಡಿದಂತೆ ನಾಟಕ ಮಾಡುತ್ತಿದ್ದಾಳೆ. ಮಲ್ಲಿ ಕೊಟ್ಟ ಡಿವೋರ್ಸ್ಗೆ ಸಹಿ ಹಾಕಬೇಡಿ, ಅವಳಿಗೆ ಬುದ್ಧಿ ಕಲಿಸೋಣ ಎಂದು ಜೈದೇವ್ಗೆ ಹೇಳಿ ಜೈದೇವ್ ಮತ್ತು ಶಕುಂತಲಾರನ್ನು ಮುಗಿಸಲು ತಂತ್ರ ರೂಪಿಸುತ್ತಿದ್ದಾಳೆ. ಈಗ ಆಕೆ ಶಕುನಿ ಮಾಮನ ಜೊತೆ ಕೈಜೋಡಿಸುವಲ್ಲಿ ಸಂಶಯವೇ ಇಲ್ಲ!