ಇನ್ನು ಈ ವಾರ ಯಾರೂ ಕೂಡ ಮನೆಯಿಂದ ಹೊರಗಡೆ ಹೋಗುತ್ತಿಲ್ಲ. ಏಕೆಂದರೆ ಶುಕ್ರವಾರದವರೆಗೆ ಓಟಿಂಗ್ ಲೈನ್ ಓಪನ್ ಆಗಿಲ್ಲ. ಕಳೆದವಾರ ಶಿಶಿರ್ ಎಲಿಮಿನೇಟ್ ಆಗಿದ್ದರು. ಅದೇ ದಿನ ಅನಿವಾರ್ಯವಾಗಿ ಗೋಲ್ಡ್ ಸುರೇಶ್ ಹೊರಹೋಗಿದ್ದರು. ಹೀಗಾಗಿ ಓಟಿಂಗ್ ಲೈನ್ ಓಪನ್ ಇಲ್ಲ. ಈ ವಾರ ಮನೆಯಿಂದ ಹೊರಹೋಗಲು ಕೇವಲ 4 ಮಂದಿ ನಾಮಿನೇಟ್ ಆಗಿದ್ದರು. ರಜತ್, ಮೋಕ್ಷಿತಾ, ಹನುಮಂತ ಮತ್ತು ತ್ರಿವಿಕ್ರಮ್ ಇವರೆಲ್ಲರೂ ಸೇಫ್ ಆಗಿರಲಿದ್ದಾರೆ. ಈವರೆಗೆ ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್, ಶಿಶಿರ್ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ರಂಜಿತ್ ಹಾಗೂ ಜಗದೀಶ್ ರನ್ನು ಹೊರಕಳುಹಿಸಲಾಗಿದ್ದು, ಶೋಭಾ ಶೆಟ್ಟಿ ತಾವಾಗಿಯೇ ಹೊರ ನಡೆದಿದ್ದಾರೆ. ವೈಯಕ್ತಿಕ ಕಾರಣದಿಂದ ಅನಿವಾರ್ಯವಾಗಿ ಗೋಲ್ಡ್ ಸುರೇಶ್ ಅವರು ಹೊರಬಂದಿದ್ದಾರೆ.