ಇದನ್ನೆಲ್ಲಾ ನೋಡಿ ಬೇಸರಗೊಂಡ ವೀಕ್ಷಕರೊಬ್ಬರು " ಒಬ್ಬ ರಾಜಕಾರಣಿಗೇ ಅವಶ್ಯಕತೆಗಿಂತ ಹೆಚ್ಚು ನೀತಿ ಬೋಧನೆ ಮಾಡಲು, ಅವನನ್ನು ಎದುರು ಹಾಕಿಕೊಳ್ಳಲು ಭೂಮಿಕಾಗೆ ಧೈರ್ಯ, ತಾಕತ್ತು ಇದೆ. ಆದರೆ, ವರ್ಷಗಳ ಹಿಂದೆ ಶಕುಂತಲಾ ಹಾಕಿದ್ದ ಬೆದರಿಕೆಯ ವಿಷಯವನ್ನು ಈಗಲೂ ಗೌತಮನ ಹತ್ತಿರ ಹೇಳುವ ಧೈರ್ಯ ಭೂಮಿಕಾಗೆ ಇಲ್ಲ.ಇಷ್ಟು ವರ್ಷಗಳ ಬಳಿಕ ಭೇಟಿಯಾದಾಗ, ಯೋಗಕ್ಷೇಮ ವಿಚಾರಿಸುವ ಸೌಜನ್ಯವೂ ಇಲ್ಲ. ಅಷ್ಟು ಸಾಲದು ಅಂತ ಏನೂ ತಪ್ಪು ಮಾಡದಿರುವ ಗೌತಮನಿಗೆ ಬೈಯ್ದು ಅವಮಾನಿಸುವುದು ಬೇರೆ. ಯಾವುದಾದರೂ ಅರ್ಥ, ತರ್ಕ ಇದೆಯಾ?ಹಾಗಾಗಿ, ಭೂಮಿಕಾ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಸ್ವಾದಿಸಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ.