Amruthadhaare Serial: ಮಗನ ಜೊತೆ ಜಯದೇವ್‌ ಮನೆಗೆ ಬಂದ ಗೌತಮ್;‌ ರಣರೋಚಕ ಟ್ವಿಸ್ಟ್‌, ಮುಯ್ಯಿಗೆ ಮುಯ್ಯಿ!

Published : Jan 25, 2026, 04:38 PM IST

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮಮ್ಮ-ಮೊಮ್ಮಕ್ಕಳ ಸಮಾಗಮವಾಗಿದೆ. ಅಂದಹಾಗೆ ಕೇಡಿ ಜಯದೇವ್‌ಗೆ ಕೇಡುಗಾಲ ಶುರುವಾಗಿದೆ. ಹಾಗಾದರೆ ಏನಾಯ್ತು? ಜಯದೇವ್‌ ಕಥೆ ಏನಾಗಬಹುದು? 

PREV
15
ಸೀತಾರಾಮ ಕಲ್ಯಾಣ

ಕೊನೆಗೂ ಎಲ್ಲ ವಿಷಯವನ್ನು ಮನಸಾರೆ ಬಿಚ್ಚಿಟ್ಟು, ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದಾರೆ. ಇದೇ ಖುಷಿಯಲ್ಲಿ ವಠಾರದಲ್ಲಿ ಸೀತಾರಾಮ ಕಲ್ಯಾಣ ಆಯೋಜಿಸಲಾಗಿತ್ತು. ಭೂಮಿ ಮನೆಯವರು, ಗೌತಮ್‌ ತಾಯಿ, ಅಜ್ಜಿ, ಆನಂದ್-ಅಪರ್ಣಾ ಕೂಡ ಈ ಸಮಾರಂಭಕ್ಕೆ ಬಂದಿದ್ದರು.

25
ಜಯದೇವ್‌ ಜಾತಕದಲ್ಲಿ ಸಮಸ್ಯೆ

ಈಗ ಜಯದೇವ್‌ ಜಾತಕದಲ್ಲಿ ಸಮಸ್ಯೆ ಇದೆಯಂತೆ. ಅದರಲ್ಲಿಯೂ ಜಯದೇವ್‌ಗೆ ಎಡಗಣ್ಣು ಹೊಡೆದುಕೊಳ್ಳುತ್ತಿದೆ, ಗಂಡು ಮಕ್ಕಳಿಗೆ ಎಡಗಣ್ಣು ಹೊಡೆದುಕೊಂಡರೆ ಅಪಶಕುನ ಆಗುವುದು. ಈಗ ಜಯದೇವ್‌ಗೆ ಗತಿ ಕಾಣಿಸಬೇಕು ಎಂದು ಅವನ ಎರಡನೇ ಪತ್ನಿ ದಿಯಾ ಕೂಡ ಪ್ಲ್ಯಾನ್‌ ಮಾಡಿದ್ದಾಳೆ.

35
ತನ್ನ ಹಳೆ ಮನೆಗೆ ಬಂದ ಗೌತಮ್

ಜಯದೇವ್‌ ಹಾಗೂ ಶಕುಂತಲಾರಿಂದ ಏನೆಲ್ಲ ಸಮಸ್ಯೆ ಆಗಿದೆ? ತನ್ನ ಮಗ ಆಕಾಶ್‌ಗೂ ಕೂಡ ಅಪಾಯ ಆಗುತ್ತಿತ್ತು ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ತನ್ನ ಮನೆಗೆ ಬಂದಿದ್ದಾನೆ. ಸದ್ಯ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ಜಯದೇವ್‌ಗೆ ಏನು ಮಾಡಲಿದ್ದಾನೆ ಎಂದು ಕಾದು ನೋಡಬೇಕಿದೆ.

45
ಜಯದೇವ್‌ ಸೊಕ್ಕು ಮುರಿಯೋದು ಡೌಟ್

ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದಾರೆ. ಇನ್ನೊಂದು ಕಡೆ ಜಯದೇವ್‌ಗೆ ತಕ್ಕ ಶಾಸ್ತಿಯೂ ಆಗಬೇಕಿದೆ. ಈ ದುಷ್ಟರಿಗೆ ಶಿಕ್ಷೆ ಕೊಡಿಸೋದು ನನ್ನ ಉದ್ದೇಶ ಅಲ್ಲ ಎಂದು ಭೂಮಿಕಾ ಹೇಳಿದ್ದಾಳೆ. ಹೀಗಾಗಿ ಗೌತಮ್‌ ಈಗ ಜಯದೇವ್‌ ಸೊಕ್ಕು ಮುರಿಯೋದು ಡೌಟ್.‌ ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲಕಾರಿಯಾಗಿವೆ.

55
ಜಯದೇವ್‌ ಕಥೆ ಏನು?

ಈಗಾಗಲೇ ಸೀರಿಯಲ್‌ ಸಾವಿರ ಸಂಚಿಕೆಯತ್ತ ದಾಪುಗಾಲಿಟ್ಟಿದೆ. ಗೌತಮ್‌ ಹಾಗೂ ಭೂಮಿಕಾ ಒಂದಾಗೋದು ಒಂದು ಕಡೆಯಾದರೆ, ಜಯದೇವ್‌ಗೆ ಶಿಕ್ಷೆ ಆಗಬೇಕು ಎನ್ನೋದು ಮತ್ತೊಂದು ಕಡೆಯ ಕಥೆ ಆಗಿತ್ತು. ಹೀಗಾಗಿ ಜಯದೇವ್‌ ಪತನದತ್ತ ಮುಂದೆ ಕಥೆ ಸಾಗಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories