Amruthadhaare: ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!

Published : Dec 15, 2025, 06:18 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಅಜ್ಜಿ ಸಾಯುವ ನಾಟಕವಾಡಿದ್ದಾರೆ. ಅಜ್ಜಿಯ ಕೊನೆಯಾಸೆ ಈಡೇರಿಸಲು ಹೊರಟ ಈ ಜೋಡಿಗೆ, ಅವರ ಮಕ್ಕಳಾದ ಆಕಾಶ್ ಮತ್ತು ಮಿಂಚು ಕೂಡ ಆಟವಾಡಿಸಲು ಸಜ್ಜಾಗಿದ್ದಾರೆ.  

PREV
17
ಸಂಕಷ್ಟದಲ್ಲಿ ಜೋಡಿ

ಅಮೃತಧಾರೆ (Amruthadhaare)ಯಲ್ಲಿ ಅಜ್ಜಿ ಮಾಡಿರೋ ಪ್ಲ್ಯಾನ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಭೂಮಿಕಾ- ಗೌತಮ್​. ಮನಸ್ಸಿನಲ್ಲಿ ಪ್ರೀತಿ ಇದ್ದರೂ ಹುಸಿಮುನಿಸು ಮಾಡಿಕೊಂಡಿರೋ ಈ ಜೋಡಿ ಈಗ ಒಂದಾಗಲೇ ಬೇಕಿದೆ.

27
ಎಲ್ಲರೂ ಫೇಲ್​

ಗೌತಮ್​ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್​ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್​ ಜೊತೆ ಬರಲು ರೆಡಿನೇ ಇಲ್ಲ. ಗೌತಮ್​ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ. ಈಗ ಆ ಭಯ ದೂರವಾಗಿದೆ.

37
ಅಜ್ಜಿ ಪ್ಲ್ಯಾನ್​

ಜೈದೇವನಿಂದ ವೃದ್ಧಾಶ್ರಮಕ್ಕೆ ಸೇರಿರೋ ಅಜ್ಜಿ ಮತ್ತು ಆನಂದ್​​, ಭಾಗ್ಯ ಮಾಡಿರೋ ಪ್ಲ್ಯಾನ್​​ ಈಗ ವರ್ಕ್​ಔಟ್​ ಆಗುತ್ತಿದೆ. ಅಜ್ಜಿ, ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್​ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್​ಗೆ ಹೇಳಿದ್ದಾಳೆ. ಆ ಪ್ಲ್ಯಾನ್​​ನಂತೆ ಭಾಗ್ಯಮ್ಮ ಭೂಮಿಕಾ ಮನೆಗೆ ಬಂದು ಅಜ್ಜಿ ಈಗಲೋ ಆಗಲೋ ಎನ್ನುತ್ತಿದ್ದಾರೆ. ಬೇಗ ಗೌತಮ್​ನನ್ನು ಕರೆದುಕೊಂಡು ಬಾ ಎಂದಿದ್ದಾಳೆ.

47
ಆಕಾಶ್​-ಮಿಂಚು ಶಾಕ್​

ಇದೀಗ ಗೌತಮ್​ನನ್ನು ಭೂಮಿಕಾ ಮನೆಗೆ ಕರೆದಿದ್ದಾಳೆ. ಗೌತಮ್​, ಭೂಮಿಕಾ ಮನೆಗೆ ಹೋಗುವುದನ್ನು ಆಕಾಶ್​ ಮತ್ತು ಮಿಂಚು ನೋಡಿ ಶಾಕ್​ ಆಗಿದ್ದಾರೆ.

57
ಮಕ್ಕಳಿಗೂ ಆಹ್ವಾನ

ಅವರಿಗೆ ಏನಾಗ್ತಿದೆ ಎನ್ನುವುದು ಗೊತ್ತಿಲ್ಲ. ಅಲ್ಲಿ ಅಜ್ಜಿ ಗೌತಮ್​- ಭೂಮಿಕಾ ಮಾತ್ರವಲ್ಲದೇ ಮಕ್ಕಳನ್ನೂ ಕರೆದುಕೊಂಡು ಬನ್ನಿ ಎಂದಿದ್ದಾಳೆ. ಮಕ್ಕಳಿಗೆ ಈ ವಿಷ್ಯ ಹೇಗೆ ಹೇಳೋದು ಗೊತ್ತಾಗ್ತಿಲ್ಲ ಈ ಜೋಡಿದೆ.

67
ಆಟ ಆಡಿಸೋಣ

ಇದನ್ನು ಕೇಳಿಸಿಕೊಂಡ ಮಿಂಚು ಮತ್ತು ಆಕಾಶ್​ ಒಹ್​ ಇದ್ದಾ ವಿಷ್ಯ ಎನ್ನುತ್ತಾ, ಅವರು ಕರೆದ ತಕ್ಷಣ ನಾವು ಒಪ್ಪಿಕೊಳ್ಳೋದು ಬೇಡ, ಆಟ ಆಡಿಸೋಣ ಎಂದು ಪ್ಲ್ಯಾನ್ ಮಾಡಿದ್ದಾರೆ.

77
ವಿಲನ್​ಗಳಿಗೆ ಬುದ್ಧಿ

ಒಟ್ಟಿನಲ್ಲಿ ಭೂಮಿಕಾ ಮತ್ತು ಗೌತಮ್​ ಅಮ್ಮ, ಅಜ್ಜಿಯಿಂದ ಮಾತ್ರವಲ್ಲದೇ ಮಕ್ಕಳಿಂದಲೂ ಟ್ರ್ಯಾಪ್​ಗೆ ಒಳಗಾಗ್ತಿದ್ದಾರೆ. ಒಟ್ಟಿನಲ್ಲಿ ಒಂದಾಗಿ ವಿಲನ್​ಗಳಿಗೆ ಬುದ್ಧಿ ಕಲಿಸುವ ಕಾಲ ಬಂದಾಯ್ತು

Read more Photos on
click me!

Recommended Stories