Amruthadhaareಯಲ್ಲಿ ಆಪರೇಷನ್​ ಅಪ್ಪ-ಅಮ್ಮ! ರೋಚಕ ಸಂಚಿಕೆಯಲ್ಲಿ ಊಹಿಸದ ಮಹಾ ತಿರುವು

Published : Nov 19, 2025, 09:26 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಅಪ್ಪ ಎಂದು ತಿಳಿದ ನಂತರ ಮಿಂಚು ಮತ್ತು ಆಕಾಶ್ 'ಆಪರೇಷನ್ ಅಪ್ಪ-ಅಮ್ಮ' ಶುರುಮಾಡಿದ್ದಾರೆ. ಇಬ್ಬರೂ ಸೇರಿ ಮಾಡಿದ ಪ್ಲ್ಯಾನ್‌ನಿಂದಾಗಿ ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿದ್ದು, ಇಡೀ ಕುಟುಂಬ ಸಂತಸದಲ್ಲಿದೆ.  

PREV
17
ಈಡೇರಿತು ಆಸೆ

ಅಮೃತಧಾರೆಯಲ್ಲಿ (Amruthadhaare) ಈಗ ಭಾರಿ ಟ್ವಿಸ್ಟ್​ ಬಂದಿದೆ. ವೀಕ್ಷಕರ ಆಸೆ ಈಡೇರಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿದ್ದಾರೆ. ಕೊನೆಗೂ ಭೂಮಿಕಾಗೆ ಗೌತಮ್​ನ ಬಿಟ್ಟು ಇರಲು ಆಗುವುದಿಲ್ಲ ಎನ್ನುವ ಸತ್ಯ ಗೊತ್ತಾಗಿದೆ.

27
ಅಪ್ಪನ ಪ್ರೀತಿ

ಅದಕ್ಕಿಂತಲೂ ಮುಖ್ಯವಾಗಿ, ತನ್ನ ಅಪ್ಪ ಆಕಾಶ್​ನನ್ನು ಹೆಚ್ಚು ಪ್ರೀತಿ ಮಾಡ್ತಾನೆ ಎಂದು ಮಿಂಚು ಕೋಪ ಮಾಡಿಕೊಂಡಿದ್ದಳು. ಗೌತಮ್​ ಮತ್ತು ಆಕಾಶ್​ ಫೋಟೋ ನೋಡಿ ಆಕೆಗೆ ಹೊಟ್ಟೆಕಿಚ್ಚು ಆಗಿ, ಆಕಾಶ್​ನನ್ನು ದ್ವೇಷಿಸುತ್ತಿದ್ದಳು.

37
ಮಿಂಚುಗೆ ಸತ್ಯ

ಇದೀಗ, ಆಕಾಶ್​ ಎಲ್ಲಾ ಸತ್ಯವನ್ನು ಮಿಂಚುಗೆ ಹೇಳಿದ್ದಾನೆ. ಗೌತಮ್​ನೇ ತನ್ನ ಅಪ್ಪ ಎನ್ನುವ ಸತ್ಯ ತನಗೆ ಹೇಗೆ ತಿಳಿಯಿರು ಎನ್ನುವ ಬಗ್ಗೆ ಮಿಂಚುಗೆ ಹೇಳಿದಾಗ, ಇಬ್ಬರೂ ಸೇರಿ ಗೌತಮ್​ ಮತ್ತು ಭೂಮಿಕಾನನ್ನು ಒಂದು ಮಾಡಲು ಪ್ಲ್ಯಾನ್​ ರೂಪಿಸಿದ್ದಾರೆ.

47
ಭರ್ಜರಿ ಪ್ಲ್ಯಾನ್​

ಅದೇ ರೀತಿ, ಆಕಾಶ್​ ಮತ್ತು ಮಿಂಚು ಆಪರೇಷನ್​ ಅಪ್ಪ-ಅಮ್ಮ ಶುರುವಿಟ್ಟುಕೊಂಡಿದ್ದಾರೆ. ಹೇಗಾದರೂ ಮಾಡಿ ಇಬ್ಬರನ್ನು ಜೊತೆಗೂಡಿಸಲು ಭರ್ಜರಿ ಪ್ಲ್ಯಾನ್​ ಹಾಗಿದ್ದಾರೆ.

57
ಒಟ್ಟಿಗೇ ಊಟ

ಅದೇ ರೀತಿ, ಎಲ್ಲರೂ ಒಟ್ಟಿಗೇ ಸೇರಿ ಊಟ ಮಾಡೋಣ ಎಂದು ಗೌತಮ್​ನನ್ನು ಕರೆದಿದ್ದಾನೆ ಆಕಾಶ್​. ಆಕಾಶ್​ನಲ್ಲಿ ಆಗಿರೋ ಬದಲಾವಣೆ ನೋಡಿ ಗೌತಮ್​ಗೆ ಆಶ್ಚರ್ಯ ಆಗಿದೆ. ಆದರೆ ಮಿಂಚು ಕೂಡ ಈ ಬಗ್ಗೆ ಬಾಯಿ ಬಿಟ್ಟಿಲ್ಲ.

67
ಕೈತುತ್ತು

ಒಟ್ಟಿನಲ್ಲಿ ಊಟದ ಡಬ್ಬದಲ್ಲಿರೋ ಚಮಚವನ್ನು ಕೆಳಕ್ಕೆ ಬೀಳಿಸಿ ಗೌತಮ್​ನ ಕೈತುತ್ತಿನಿಂದಲೇ ಇಬ್ಬರೂ ಊಟ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದ ಭೂಮಿಕಾಗೆ ಆನಂದ ತಡೆಯಲು ಆಗಲಿಲ್ಲ.

77
ಆಪರೇಷನ್​ ಸಕ್ಸಸ್​

ಕೊನೆಗೆ ಅವಳೂ ಅಲ್ಲಿಗೆ ಬಂದಿದ್ದಾಳೆ. ಅವಳು ಮಿಂಚುಗೆ ಊಟ ಮಾಡಿಸಿದ್ರೆ, ಆಕಾಶ್​ಗೆ ಗೌತಮ್​ ಊಟ ಮಾಡಿಸಿದ್ದಾನೆ. ಅಲ್ಲಿಗೆ ಆಪರೇಷನ್​ ಅಪ್ಪ-ಅಮ್ಮ ಬಹುತೇಕ ಯಶಸ್ವಿಯಾಗಿದೆ. ಹಾಗಿದ್ದರೆ ಶೀಘ್ರದಲ್ಲಿ ಸೀರಿಯಲ್​ ಮುಗಿಯತ್ತಾ ಎನ್ನುವ ಸಂದೇಹವೂ ವೀಕ್ಷಕರನ್ನು ಕಾಡುತ್ತಿದೆ.

Read more Photos on
click me!

Recommended Stories