Amruthadhaare Serial: ಕೊನೆಗೂ ಅಕ್ಕ-ತಮ್ಮನನ್ನು ಒಂದು ಮಾಡಿಬಿಟ್ಟ ಗೌತಮ್​; ಮುನಿಸು ಮಾಯ

Published : Nov 11, 2025, 12:20 PM IST

‘ಅಮೃತಧಾರೆ’ ಧಾರಾವಾಹಿಯಲ್ಲಿ ಆಕಾಶ್ ಮತ್ತು ಮಿಂಚು ಶಾಲೆಯಲ್ಲಿ ಜಗಳವಾಡುತ್ತಾರೆ, ಇದರಿಂದಾಗಿ ಪ್ರಿನ್ಸಿಪಾಲ್ ಗೌತಮ್ ಮತ್ತು ಭೂಮಿಕಾರನ್ನು ಶಾಲೆಗೆ ಕರೆಸುತ್ತಾರೆ. ಗೌತಮ್ ಮಕ್ಕಳನ್ನು ಸಮಾಧಾನಪಡಿಸಿ ಒಂದಾಗಿಸುವುದನ್ನು ತೆರೆಮರೆಯಲ್ಲಿ ನಿಂತು ನೋಡಿದ ಭೂಮಿಕಾ ಮನಸ್ಸಿನಲ್ಲೇ ಖುಷಿಪಡುತ್ತಾಳೆ.

PREV
16
ಆಕಾಶ್​ ಮತ್ತು ಮಿಂಚು ಜಗಳ

ಅಮೃತಧಾರೆ (Amruthadhaare)ಯಲ್ಲಿ ಅತ್ತ ಗೌತಮ್​ ಮತ್ತು ಭೂಮಿಕಾ ಇನ್ನೂ ದೂರ ದೂರ ಇದ್ದರೆ, ಅದೇ ಇನ್ನೊಂದೆಡೆ ಆಕಾಶ್​ ಮತ್ತು ಮಿಂಚು ಜಗಳವಾಡುತ್ತಿದ್ದಾರೆ. ಶಾಲೆಯಲ್ಲಿಯೂ ಇವರ ಜಗಳ ಮುಂದುವರೆದಿದೆ.

26
ಪ್ರಿನ್ಸಿಪಾಲ್​ ಕಿವಿಮಾತು

ಒಂದೇ ಕ್ಲಾಸ್​ನಲ್ಲಿ ಇರುವ ಈ ಇಬ್ಬರೂ ಜಗಳವಾಡಿ, ಕೊನೆಗೆ ಭೂಮಿಕಾ ಮತ್ತು ಗೌತಮ್​ರನ್ನು ಪ್ರಿನ್ಸಿಪಾಲ್​ ಶಾಲೆಗೆ ಕರೆಸುವಂತೆ ಮಾಡಿದ್ದಾರೆ. ಇಬ್ಬರೂ ಪರಸ್ಪರ ಒಬ್ಬರ ಮೇಲೆ ಒಬ್ಬರು ಗೂಬೆ ಕುಳ್ಳರಿಸುತ್ತಾ ನನ್ನ ತಪ್ಪಿಲ್ಲ ಎಂದು ಪ್ರಿನ್ಸಿಪಾಲ್​ ಎದುರೇ ಜಗಳವಾಡಿಕೊಂಡಿದ್ದಾರೆ.

36
ಗೌತಮ್​ ಸಮಾಧಾನ

ಕೊನೆಗೆ ಇಬ್ಬರನ್ನೂ ಸಮಾಧಾನ ಮಾಡಿ ಗೌತಮ್​ ಕಳುಹಿಸಿದ್ದಾನೆ. ಬಳಿಕ ಪ್ರಿನ್ಸಿಪಾಲ್​ ಶಾಲೆಯಲ್ಲಿ ಮಕ್ಕಳು ಇದೆಲ್ಲಾ ಕಾಮನ್​, ಆದರೆ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದಿದ್ದಾರೆ.

46
ಒಂದು ಮಾಡಿದ ಗೌತಮ್​

ಈಗ ಹಾವು-ಮುಂಗುಸಿಯಂತೆ ಕಿತ್ತಾಡಿಕೊಳ್ಳುವ ಅಕ್ಕ-ತಮ್ಮನನ್ನು ಒಂದು ಮಾಡುವ ಜವಾಬ್ದಾರಿ ಗೌತಮ್​ ಮೇಲಿದೆ. ಮಿಂಚು ಭೂಮಿಕಾ ಮತ್ತು ಗೌತಮ್​ಳ ಸ್ವಂತ ಮಗಳು ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಅದೇನೇ ಇದ್ದರೂ ಮಿಂಚು ಗೌತಮ್​ನನ್ನು ಅಪ್ಪ ಎಂದು ಹೇಳುವ ಕಾರಣ, ಸಹಜವಾಗಿ ಭೂಮಿಕಾ ಅಮ್ಮನೇ ಆಗುತ್ತಾಳೆ.

56
ಮಕ್ಕಳಿಗೆ ಬುದ್ಧಿಮಾತು

ಇದೀಗ ಮಕ್ಕಳಿಬ್ಬರನ್ನೂ ಕರೆದ ಗೌತಮ್​, ಹೀಗೆಲ್ಲಾ ಕಿತ್ತಾಡಬಾರದು ಎಂದು ಬುದ್ಧಿ ಹೇಳಿದ್ದಾನೆ. ಕೊನೆಗೆ ಸಾರಿ ಕೇಳುವಂತೆ ಹೇಳಿದಾಗ, ಇಬ್ಬರೂ ಪರಸ್ಪರ ಸಾರಿ ಕೇಳಿಕೊಂಡಿದ್ದಾರೆ.

66
ತೆರೆಮರೆಯಲ್ಲಿ ನೋಡಿದ ಭೂಮಿಕಾ

ಇದನ್ನು ತೆರೆಯ ಮರೆಯಲ್ಲಿಯೇ ನಿಂತು ಭೂಮಿಕಾ ನೋಡುತ್ತಿದ್ದು, ಮನಸ್ಸಿನಲ್ಲಿಯೇ ಖುಷಿಪಟ್ಟುಕೊಂಡಿದ್ದಾಳೆ. ಅಂತೂ ಮೇಲ್ನೋಟಕ್ಕೆ ಈ ಅಕ್ಕ-ತಮ್ಮ ಒಂದಾಗಿದ್ದಾರೆ. ಈಗೇನಿದ್ದರೂ ಮುನಿಸಿಕೊಂಡಿರುವ ಈ ಎರಡು ಮನಸುಗಳು ಒಂದಾಗಬೇಕು ಅಷ್ಟೇ.

ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​​ ಮಾಡಿ

Read more Photos on
click me!

Recommended Stories