ಟಾಪ್ ನಟಿಯಾಗಿದ್ದಾಗ್ಲೆ ಮದುವೆ, ಮೆಂಟಲ್ ಗಂಡನ ಕಿರುಕುಳ, ಕಹಿ ಘಟನೆ ಬಿಚ್ಚಿಟ್ಟ ಸುಧಾರಾಣಿ

First Published Jul 10, 2024, 4:35 PM IST

ಚಂದನವನದ ಎವರ್ ಗ್ರೀನ್ ಬ್ಯೂಟಿ, ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯಾಗಿ ನಟಿಸುತ್ತಿರುವ ಸುಧಾರಾಣಿ ತಮ್ಮ ಜೀವನದ ಕರಾಳ ಘಟನೆಗಳನ್ನ ಬಿಚ್ಚಿಟ್ಟಿದ್ದಾರೆ. 
 

ಕನ್ನಡ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಬ್ಯುಸಿಯಾಗಿರುವ ಚಂದನವನದ ಎವರ್ ಗ್ರೀನ್ ನಟಿ ಸುಧಾರಾಣಿ (Sudharani) ಇದೀಗ ಒಂದು ಸಂದರ್ಶನದಲ್ಲಿ ತಮ್ಮ ಮೊದಲ ಮದುವೆ, ಗಂಡ, ಮತ್ತು ಅವರಿಂದ ಪಡೆದ ಕಿರುಕುಳದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

5ನೇ ವರ್ಷದಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಬಾಲ ನಟಿಯಾಗಿ, ಮಾಡೆಲ್ ಆಗಿ, ವಾಯ್ಷ್ ಆರ್ಟಿಸ್ಟ್ ಆಗಿ, ನಾಯಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡು ಈಗ ಪೋಷಕ ಪಾತ್ರಗಳ ಮೂಲಕ ಜನರನ್ನು ಕಳೆದ 45 ವರ್ಷಗಳಿಂದಲೇ ರಂಜಿಸುತ್ತಾ ಬಂದಿದ್ದಾರೆ ಸುಧಾರಾಣಿ. 
 

Latest Videos


ಸದ್ಯ ಗಂಡ, ಮಗಳು, ಕುಟುಂಬ, ಕರಿಯರ್ ಎಂದು ಸಂತೋಷದ ಜೀವನ ಸಾಗಿಸುತ್ತಿರುವ ನಟಿ ಸುಧಾರಾಣಿ, ಹಿಂದೆ ಜೀವನದಲ್ಲಿ ನರಕಯಾತನೆ ಅನುಭವಿಸಿದ್ದರು. ಆಗ 1996ರ ಸಮಯ, ಸುಧಾರಾಣಿ ಟಾಪ್ ನಟಿಯಾಗಿದ್ದು, ಕರಿಯರ್ ಉತ್ತುಂಗದಲ್ಲಿದ್ದರು ಆವಾಗ್ಲೇ ಅವರಿಗೆ ಸಂಜಯ್ ಎನ್ನುವವರ ಜೊತೆ ಮದುವೆಯಾಗಿ, ಕರಿಯರ್‌ಗೆ ಗುಡ್ ಬೈ ಹೇಳಿ ಅಮೆರಿಕದಲ್ಲಿ ಹೋಗಿ ನೆಲೆಸುವಂತಾಯಿತು. ಆವಾಗ ಅವರು ಅನುಭವಿಸಿದ ಕಹಿ ಘಟನೆಗಳನ್ನು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮನಸು ಬಿಚ್ಚಿ ಹೇಳಿದ್ದಾರೆ. 

ಮದುವೆ ಬಳಿಕದ ಜೀವನದ ಬಗ್ಗೆ ಮಾತನಾಡಿದ ಸುಧಾರಾಣಿ, ಕರಿಯರ್ ಪೀಕ್ ನಲ್ಲಿದ್ದಾಗಲೇ ಮದುವೆಯಾಯಿತು, ಅಮೇರಿಕಾಗೆ ಹೋಗಿ ನೆಲೆಸುವಂತಾಯ್ತು. ಅಲ್ಲಿ ತುಂಬಾ ಕಷ್ಟ ಅನುಭವಿಸಿದೆ. ಅಮೆರಿಕಕ್ಕೆ (America) ಹೋದಾಗ ಅಲ್ಲಿ ಎಲ್ಲವನ್ನು ನಾವೇ ಮಾಡಿಕೊಳ್ಳಬೇಕಿತ್ತು. ಕಲಿಯಲಿಲ್ಲ ಅಂದರೆ ಬದುಕೋಕೆ ಸಾಧ್ಯವಿಲ್ಲ.  ಊರಲ್ಲಿ ಸಿನಿಮಾ ಶೂಟಿಂಗ್ ಅಂತಷ್ಟೇ ಇದ್ದಿದ್ದ ನನಗೆ, ನನ್ನೊಳಗೆ ಹೊಸ ವ್ಯಕ್ತಿ ಕಾಣಿಸಿಕೊಂಡಿದ್ದು ಆವಾಗ. ನಂತರ ಒಂದೊಂದಾಗಿ ಕಲಿತೆ, ಒಬ್ಬಳೇ ಅಮೆರಿಕ ಸುತ್ತಿದೆ. 

ಮೊದಲ ಪತಿಯಿಂದ ಆದ ಸಮಸ್ಯೆಗಳ ಬಗ್ಗೆ ಮಾತನಾಡಿದ ಸುಧಾರಾಣಿ ನನ್ನ ವೈವಾಹಿಕ ಜೀವನದಲ್ಲಿ (married life) ಕಷ್ಟ ಬಂದಾಗ ನನಗೆ ಧೈರ್ಯ ತುಂಬಲು ನೆರವಾಗಿದ್ದೆ, ನಾನು ಮಾಡಿದ ಪಾತ್ರಗಳು. ಹಾಗಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಬಂದಾಗ ನಾನು ಕೂಡಲೇ ಬಿಡೋಕೆ ಹೋಗಲಿಲ್ಲ. ಸರಿಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟೆ. ಸರಿಯಾಗೋದೆ ಇಲ್ಲ ಎಂದು ತಿಳಿದ ಮೇಲೆ ಹೊರ ಬರೋಕೆ ನಿರ್ಧರಿಸಿ, ನನ್ನ ಕಾಲ ಮೇಲೆ ನಾನು ನಿಂತೆ, ಎಂದಿದ್ದಾರೆ ಸುಧಾರಾಣಿ. 

ಅಷ್ಟೇ ಅಲ್ಲ ಸಂಸಾರ ಶುರುವಾದ ಆರಂಭದಲ್ಲೇ ಸಮಸ್ಯೆ ಗೊತ್ತಾಗಿತ್ತು, ಆದರೆ ಗೊತ್ತಾದ ಕೂಡಲೇ ಬಿಟ್ಟು ಬರೋಕೆ ಸಾಧ್ಯ ಇಲ್ಲ. ಒಂದಷ್ಟು ದಿನ ಕಾಯಬೇಕು. ಸರಿ ಮಾಡೋಕೆ ಆದ್ರೆ ಪ್ರಯತ್ನಿಸಬೇಕು. ಸಮಸ್ಯೆ ಇದೆ ಎಂದ ಕೂಡ್ಲೆ ಬಿಟ್ಟು ಬರೋ ನಿರ್ಧಾರ ಹೇಗೆ ತೆಗೊಳೋದು, ಹಾಗಾಗಿ ಒಂದಷ್ಟು ದಿನ ಸಹಿಸಿಕೊಳ್ಳುವ ಪ್ರಯತ್ನ ಮಾಡಿದೆ. ಸಾಧ್ಯವಾಗದೇ ಇದ್ದಾಗ ಬಿಟ್ಟು ಬಂದೆ ಎಂದಿದ್ದಾರೆ. 
 

ಮೊದಲ ಪತಿ ಸಂಜಯ್ ಸುಧಾರಾಣಿಯವರ ಪ್ರಾಣ ತೆಗೆಯೋಕೂ ಬಂದಿದ್ದರಂತೆ, ಈ ವಿಷಯದ ಬಗ್ಗೆ ಮಾತನಾಡಿದ ನಟಿ ಆ ವ್ಯಕ್ತಿಗೆ ನನ್ನ ಮೇಲೆ ಏನು ದ್ವೇಷ ಇತ್ತೋ ಗೊತ್ತಿಲ್ಲ. ಆದರೆ ಅವರಿಗೆ ಮಾನಸಿಕ ಸಮಸ್ಯೆ (mental problem) ಸೇರಿ, ಕೆಲವೊಂದು ಸಮಸ್ಯೆಗಳಿದ್ದವು. ಅದನ್ನ ಯಾರು ಒಪ್ಪೋಕೆ ರೆಡಿ ಇರ್ಲಿಲ್ಲ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ಕೊಡಿಸಬೇಕು ಅನ್ನೋದು ಯಾರಿಗೂ ತಿಳಿಯಲಿಲ್ಲ. ಮೊದಲಿಗೆ ನಾನು ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಎಂದು ಎಲ್ಲವನ್ನೂ ಸಹಿಸಿಕೊಂಡೆ, ಆಗೋದೇ ಇಲ್ಲ ಎನಿಸಿದಾಗ ಆ ಸಂಬಂಧದಿಂದಲೇ ಹೊರಬರಲು ನಿರ್ಧರಿಸಿದೆ ಎಂದಿದ್ದಾರೆ. 

(Divorce)

20ರ ಹರೆಯದಲ್ಲಿ ಡಿವೋರ್ಸ್ (Divorce) ಪಡೆದುದರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ನಟಿ ಆದ ನನಗೆ 22 ವರ್ಷ. ಇಷ್ಟು ಬೇಗ ಡಿವೋರ್ಸ್ ಅಂದಾಗ ಭಯ, ಆತಂಕ ಇತ್ತು. ಸಿನಿಮಾ ಇಂಡಸ್ಟ್ರಿ ಬಿಟ್ಟಿದ್ದೆ, ವಿದ್ಯಾಭ್ಯಾಸವೂ ಅರ್ಧಕ್ಕೆ ನಿಂತಿತ್ತು, ಮುಂದೆ ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ. ಆಮೇಲೆ ಎಲ್ಲವನ್ನೂ ಎದುರಿಸೋದನ್ನ ಕಲಿತೆ. ಸಮಾಜಕ್ಕೆ ಅನಿಸಿದ್ದು ಅವರು ಹೇಳ್ತಾರೆ, ಆದರೆ ನನ್ನ ಜೀವನದಲ್ಲಿ ಏನು ಆಗ್ತಿದೆ ಅನ್ನೋದು ಅವರಿಗೆ ಗೊತ್ತಿಲ್ಲ ಅಲ್ವಾ? ಹಾಗಾಗಿ ಯಾಕೆ ಹೆದರಬೇಕು. ಸಿನಿಮಾ ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ಇಷ್ಟವಾಗಲ್ಲ ಅದನ್ನು ಹೇಗೆ ಸ್ವೀಕರಿಸುತ್ತೀವೋ ಇದನ್ನೂ ಹಾಗೆ ಸ್ವೀಕರಿಸಬೇಕು ಎಂದು ನನ್ನ ಜೀವನದ ನಿರ್ಧಾರ ತಾನೆ ತೆಗೆದುಕೊಳ್ಳಲು ತೀರ್ಮಾನಿಸಿದ್ದಾಗಿ ನಟಿ ಹೇಳಿದ್ದಾರೆ. 

ಸಂಜಯ್ ಜೊತೆಗೆ ಡಿವೋರ್ಸ್ ಬಳಿಕ ಸುಧಾರಣಿ 2000ದಲ್ಲಿ ತಮ್ಮ ಕುಟುಂಬದ ಆತ್ಮೀಯರಾದ ಗೋವರ್ಧನ್ (Govardhan) ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಈ ಜೋಡಿಗೆ ನಿಧಿ ಎನ್ನುವ ಮುದ್ದು ಮಗಳು ಕೂಡ ಇದ್ದಾರೆ. ಸದ್ಯಕ್ಕಂತೂ ನಟಿ ಗಂಡ-ಮಗಳು ಮತ್ತು ಕರಿಯರ್ ಜೊತೆ ಸುಂದರವಾದ ಜೀವನ ಸಾಗಿಸುತ್ತಿದ್ದಾರೆ. 

click me!