ತಮ್ಮ ನೋವಿನ ನಡುವೆಯೂ ಕೆಲಸದ ರೀಲ್ಸ್ ಅಥವಾ ಪ್ರಮೋಷನ್ ವಿಡಿಯೋಗಳನ್ನು ಹಾಕಿದ್ದಕ್ಕೆ ಕೆಲವರು ಮಾಡಿದ ಕ್ರೂರ ಕಮೆಂಟ್ಗಳ ವಿರುದ್ಧ ಕೃಷಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
"ನಾವು ಸತ್ತರೆ ಹೇಡಿಗಳು ಅಂತಾರೆ, ಅದೇ ಎದ್ದು ಬದುಕೋಕೆ ಪ್ರಯತ್ನ ಪಟ್ಟರೆ 'ನಾಚಿಕೆ ಇಲ್ವಾ, ಇಷ್ಟ ಬೇಗ ಮೂವ್ ಆನ್ ಆಗಿಬಿಟ್ರಾ' ಅಂತ ಕೇಳ್ತಾರೆ. ನಾನು ತುಂಬಾ ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಈಗ ನಾನಿಲ್ಲ, ಆದರೆ ಅದರ ಬಾಡಿಗೆಯನ್ನು ನಾನು ಇನ್ನು ಕಟ್ಟುತ್ತಿದ್ದೇನೆ. ನನ್ನ ಮೆಡಿಕಲ್ ಬಿಲ್ಸ್, ಇಎಂಐಗಳನ್ನು ಟ್ರೋಲ್ ಮಾಡುವವರು ಬಂದು ಕಟ್ಟುತ್ತಾರಾ? ನಾನು ಬದುಕಿರೋ ತನಕ ಬಿಲ್ಸ್ ಕಟ್ಟಲು ದುಡಿಯಲೇಬೇಕು.
ನೆಗೆಟಿವ್ ಕಮೆಂಟ್ಗಳನ್ನು ಡಿಲೀಟ್ ಮಾಡುವ ಬಗ್ಗೆ ಮಾತನಾಡಿದ ಅವರು, "ಕೊಳೆತ ಟೊಮೆಟೊ ಇಡೀ ಬುಟ್ಟಿಯನ್ನು ಹಾಳು ಮಾಡಬಾರದು ಅಂತ ಹೇಗೆ ಬಿಸಾಡ್ತೀವೋ, ಹಾಗೆ ನನ್ನ ಮಾನಸಿಕ ನೆಮ್ಮದಿಗಾಗಿ ನೆಗೆಟಿವ್ ಕಮೆಂಟ್ಗಳನ್ನು ಬ್ಲಾಕ್ ಮಾಡ್ತೀನಿ," ಎಂದು ಸ್ಪಷ್ಟಪಡಿಸಿದರು.