ವೀರಬಾಹು ಎಂಪಿ ಶಂಕರ್ ಜನ್ಮದಿನದ ಸವಿನೆನಪು!

Suvarna News   | Asianet News
Published : Aug 20, 2020, 01:20 PM ISTUpdated : Aug 20, 2020, 01:26 PM IST

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಅದ್ಬುತ ಅಭಿನಯದ ಮೂಲಕ ಎಂದೂ ಮರೆಯಲಾಗದ ಖಳ ನಾಯಕ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದವರು ಇವರು. ವನ್ಯಜೀವಿ ,ಕಾಡು,ಪರಿಸರ ಕಾಳಜಿ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಈ ಅಪರೂಪದ ವ್ಯಕ್ತಿ ಪೋಷಕ ಪಾತ್ರಗಳಿಂದಲೂ ಜನಪ್ರಿಯರಾಗಿದ್ದ ಮೇರು ಕಲಾವಿದ. ಇಂದು ಈ ಶ್ರೇಷ್ಠ ವ್ಯಕ್ತಿತ್ವದ ಹುಟ್ಟು ಹಬ್ಬವಾಗಿದ್ದು ಅವರ ಸವಿನೆನಪಿನಲ್ಲಿ ಒಂದಷ್ಟು ಮಾಹಿತಿ ತಿಳಿಯೋಣ.   

PREV
110
ವೀರಬಾಹು ಎಂಪಿ ಶಂಕರ್ ಜನ್ಮದಿನದ ಸವಿನೆನಪು!

ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು 1935 ಆಗಸ್ಟ್ 20 ರಂದು ಜನಿಸಿದರು. 

ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು 1935 ಆಗಸ್ಟ್ 20 ರಂದು ಜನಿಸಿದರು. 

210

ಖ್ಯಾತ ಖಳನಾಯಕನ ಪಟ್ಟ ಅಲಂಕರಿಸಿದ್ದ ಇವರು ರಂಗಭೂಮಿ ನಂಟು ಹೊಂದಿದ್ದರು. 

ಖ್ಯಾತ ಖಳನಾಯಕನ ಪಟ್ಟ ಅಲಂಕರಿಸಿದ್ದ ಇವರು ರಂಗಭೂಮಿ ನಂಟು ಹೊಂದಿದ್ದರು. 

310

ಪರಿಸರ, ಕಾಡು ಹಾಗು ವನ್ಯಜೀವಿ ಸಂರಕ್ಷಣೆಯ ಸಂಬಂಧ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರದು. 

ಪರಿಸರ, ಕಾಡು ಹಾಗು ವನ್ಯಜೀವಿ ಸಂರಕ್ಷಣೆಯ ಸಂಬಂಧ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರದು. 

410

ಡಾ ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹು ಪಾತ್ರ ಇವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದೆ. 

ಡಾ ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹು ಪಾತ್ರ ಇವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದೆ. 

510

ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಪರಿಣಿತರಾಗಿದ್ದ ಇವರು ನಟನೆಯ ಜೊತೆಗೆ,ದಿಗ್ದರ್ಶನ,ಚಿತ್ರನಿರ್ಮಾಣ,ವಿತರಣೆ ಹೀಗೆ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು. 

ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಪರಿಣಿತರಾಗಿದ್ದ ಇವರು ನಟನೆಯ ಜೊತೆಗೆ,ದಿಗ್ದರ್ಶನ,ಚಿತ್ರನಿರ್ಮಾಣ,ವಿತರಣೆ ಹೀಗೆ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು. 

610

ಸತ್ಯಹರಿಶ್ಚಂದ್ರ , ಗಂಧದಗುಡಿ , ಬಂಗಾರಮನುಷ್ಯ , ಭೂತಯ್ಯನ ಮಗ ಅಯ್ಯು ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದರು. 

ಸತ್ಯಹರಿಶ್ಚಂದ್ರ , ಗಂಧದಗುಡಿ , ಬಂಗಾರಮನುಷ್ಯ , ಭೂತಯ್ಯನ ಮಗ ಅಯ್ಯು ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದರು. 

710

 ಸಿನಿಮಾ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದ ಎಂಪಿ ಶಂಕರ್ ಅವರು ತಮ್ಮ ಸಂಸ್ಥೆಯಿಂದ 16 ಯಶಸ್ವಿ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರಿಗೆ ನೀಡಿದ್ದಾರೆ. 

 ಸಿನಿಮಾ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದ ಎಂಪಿ ಶಂಕರ್ ಅವರು ತಮ್ಮ ಸಂಸ್ಥೆಯಿಂದ 16 ಯಶಸ್ವಿ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರಿಗೆ ನೀಡಿದ್ದಾರೆ. 

810

ಗಿಡ್ಡುದಾದ ಮತ್ತು ನಾರದ ವಿಜಯ ಎಂಬ ಹಾಸ್ಯ ಪ್ರಧಾನ ಸಿನಿಮಾಗಳನ್ನು ತಯಾರಿಸಿದ್ದು ಕೂಡ ಮತ್ತೊಂದು ವಿಶೇಷ. 

ಗಿಡ್ಡುದಾದ ಮತ್ತು ನಾರದ ವಿಜಯ ಎಂಬ ಹಾಸ್ಯ ಪ್ರಧಾನ ಸಿನಿಮಾಗಳನ್ನು ತಯಾರಿಸಿದ್ದು ಕೂಡ ಮತ್ತೊಂದು ವಿಶೇಷ. 

910

ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದ " ಕಲ್ಲರಳಿ ಹೂವಾಗಿ "ಎಂಪಿ ಶಂಕರ್ ಅವರ ಕೊನೆಯ ಸಿನಿಮಾವಾಗಿತ್ತು. 

ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದ " ಕಲ್ಲರಳಿ ಹೂವಾಗಿ "ಎಂಪಿ ಶಂಕರ್ ಅವರ ಕೊನೆಯ ಸಿನಿಮಾವಾಗಿತ್ತು. 

1010

ನಟಶಾರ್ದೂಲ,ಕಲಾಶಾರ್ದೂಲ,ಮೈಸೂರುಹುಲಿ,ಕಲಾಸೇವಾಧುರೀಣ,ಕನ್ನಡಭೂಷಣ,ಸಾಹಸೀಚಿತ್ರರತ್ನ,ಕರುಣಾರತ್ನ ಎಂಬ ಅನೇಕ  ಬಿರುದುಗಳನ್ನು ಪಡೆದಿದ್ದಾರೆ.

ನಟಶಾರ್ದೂಲ,ಕಲಾಶಾರ್ದೂಲ,ಮೈಸೂರುಹುಲಿ,ಕಲಾಸೇವಾಧುರೀಣ,ಕನ್ನಡಭೂಷಣ,ಸಾಹಸೀಚಿತ್ರರತ್ನ,ಕರುಣಾರತ್ನ ಎಂಬ ಅನೇಕ  ಬಿರುದುಗಳನ್ನು ಪಡೆದಿದ್ದಾರೆ.

click me!

Recommended Stories