'ಕಬ್ಜ' ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಉಪೇಂದ್ರ!

Published : Mar 16, 2023, 08:45 AM IST

ಕಬ್ಜ ಬಿಡುಗಡೆಗೆ ಕೌಂಟ್‌ಡೌನ್‌ ಶುರು... ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೊರಟ ಉಪ್ಪಿ ಆಂಡ್ ಟೀಂ.....

PREV
16
 'ಕಬ್ಜ' ರಿಲೀಸ್‌ಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಉಪೇಂದ್ರ!

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಮಾರ್ಚ್‌ 17ರಂದು ವಿಶ್ವಾದಾದ್ಯಂತ ಬಿಡುಗಡೆ ಆಗುತ್ತಿದೆ. ಬಿಡುಗಡೆ ಒಂದು ದಿನ ಮುನ್ನ ಇಡೀ ಚಿತ್ರತಂಡ ತಿರುಪತಿಗೆ ಭೇಟಿ ನೀಡಿದ್ದಾರೆ. 

26

'ತಿರುಪತಿಗೆ ಹೊರಟಿದ್ದೀವಿ' ಎಂದು ಬರೆದುಕೊಂಡಿರುವ ಉಪ್ಪಿ ವಿಮಾನದಲ್ಲಿ ಕುಳಿತುಕೊಂಡಿರುವ ಸೆಲ್ಫಿ ಹಂಚಿಕೊಂಡಿದ್ದಾರೆ. ಉಪ್ಪಿ ಜೊತೆ ನಿರ್ದೇಶಕ ಆರ್‌ ಚಂದ್ರ, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಹಲವರಿದ್ದಾರೆ.

36

ಕೆಲವು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉಪೇಂದ್ರ, ಕಿಚ್ಚ ಸುದೀಪ್, ತಾನ್ಯಾ ಹೋಪ್, ಆರ್‌ ಚಂದ್ರ,ಶ್ರೀಯಾ ಶರಣ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ನಿರ್ಮಾಪಕ ಕೆಪಿ ಶ್ರೀ ಕಾಂತ್‌ ಭಾಗಿಯಾಗಿದ್ದರು.

46

'ಉಪ್ಪಿ ಕಿಚ್ಚ ಶಿವಣ್ಣ ಸಹಕಾರದಿಂದ ಕಬ್ಜ ಸಿನಿಮಾ ರೆಡಿಯಾಗಿದೆ.  ಕಬ್ಜ ಪೋಸ್ಟರ್‌ ನೋಡಿ ಅಪ್ಪು ಸರ್‌ ನಾನು ಈ ಸಿನಿಮಾದಲ್ಲಿ ಎಲ್ಲಾ ಪ್ರಮೋಷನ್‌ನಲ್ಲಿ ಇರ್ತೀನಿ ಅಂದಿದ್ರು. ಆದರೆ ಅವರಿಲ್ಲ ಅವರ ಆಶೀರ್ವಾದ ನಮ್ಮ ಮೇಲಿದೆ' ಎಂದು ಆರ್‌ ಚಂದ್ರು ಹೇಳಿದ್ದರು.

56

' ಆರ್‌ ಚಂದ್ರು ಒಂದು ರೀತಿ ವಾಮನ. ಈ ವಾಮನ ತುಳಿದಿದ್ದು ಸಮಸ್ಯೆಗಳನ್ನ. ಕಬ್ಜ ಸಿನಿಮಾ ಟೆಕ್ನೀಷಿಯನ್ಸ್‌ ಸಿನಿಮಾ ಎನ್ನಬಹುದು' ಎಂದು ಉಪೇಂದ್ರ ಮಾತನಾಡಿದ್ದರು.

66

'ಕೆಪಿ ಶ್ರೀಕಾಂತ್ ಅವರ ಆಶೀರ್ವಾದ ಇರೋ ಕಡೆ ಎಲ್ಲಾ ಚೆನ್ನಾಗಿ ನಡೆಯುತ್ತದೆ. ಕಬ್ಜ ಸಿನಿಮಾ ನನ್ನ ಲೈಫ್‌ನಲ್ಲಿ ಆಗಾಗ ಬರ್ತಾ ಇರಲಿ. ಚಂದ್ರು ತುಂಬಾ ಒಳ್ಳೆಯ ವ್ಯಕ್ತಿ. ಸಿನಿಮಾ ಕ್ಲಿಪ್ಪಿಂಗ್ ನೋಡಿ ಪಾತ್ರ ಒಪ್ಪಿಕೊಂಡಿಲ್ಲ ಸ್ನೇಹಕ್ಕಾಗಿ ಒಪ್ಪಿಕೊಂಡೆ' ಎಂದು ಸುದೀಪ್ ಹೇಳಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories