ನಟಿ ಮೇಘನಾ ರಾಜ್ ಅವರು ಪತಿ ಚಿರು ಸರ್ಜಾ ಅವರ ಅಕಾಲಿಕ ಮರಣ ಮತ್ತು ಮಗ ರಾಯನ್ ಜನನದ ಸಂದರ್ಭದಲ್ಲಿ ಅನುಭವಿಸಿದ ದುಃಖ ಮತ್ತು ಸಂತೋಷದ ಮಿಶ್ರ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಮಗನಿಗಾಗಿ ಬದುಕುವ ನಿರ್ಧಾರದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಮೇಘನಾ ರಾಜ್ ಸದ್ಯ ಮಗ ರಾಯನ್ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಗರ್ಭಿಣಿಯಾಗಿದ್ದಾಗಲೇ ಪತಿ ಚಿರು ಅಗಲಿದ್ದರಿಂದ, ಆ ಸಮಯದಲ್ಲಿ ನಟಿ ಪಟ್ಟಿರುವ ಯಾತನೆ, ಸಂಕಟ ಬಹುಶಃ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲದ್ದು. ಒಂದೆಡೆ ಮಗುವಿನ ಜನನದ ಖುಷಿ, ಮತ್ತೊಂದೆಡೆ ಪತಿಯ ಅಕಾಲಿಕ ಮರಣ... ಈ ಸಂದರ್ಭದಲ್ಲಿ ತಾವು ಅನುಭವಿಸಿರುವ ನೋವಿನ ಕಥೆಯನ್ನು ಎಳೆಎಳೆಯಾಗಿ ನಟಿ ತೆರೆದಿಟ್ಟಿದ್ದಾರೆ.
26
ಮನಸ್ಸಿನ ತೊಳಲಾಟ
Rayane Mithun ಎನ್ನುವ ಇಂಗ್ಲಿಷ್ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮೇಘನಾ ರಾಜ್ (Meghana Raj) ಅವರು, ತಮಗೆ ಆ ಸಂದರ್ಭದಲ್ಲಿ ಆಗಿರುವ ನೋವಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಆ ಸಮಯದಲ್ಲಿ ಸೀಮಂತ ಮಾಡಿಕೊಳ್ಳಲೂ ಇಷ್ಟವಿರಲಿಲ್ಲ. ಆದರೆ, ಮನೆಯವರು ಆ ಶಾಸ್ತ್ರವನ್ನು ಮಾಡಿದರು. ಆಗ ನನಗಾದ ಸಂಕಟವನ್ನು ಹೇಗೆ ಹೇಳಲಿ ಎಂದು ಪ್ರಶ್ನಿಸಿದ್ದಾರೆ ನಟಿ.
36
ತುಂಬಾ ಭಯವಿತ್ತು
ನನ್ನೊಳಗಿನ ತೊಳಲಾಟದಲ್ಲಿ, ಆ ಸಂದರ್ಭದಲ್ಲಿನ ಮಾನಸ್ಥಿಕ ಸ್ಥಿತಿಯಲ್ಲಿ ಮಗು ಹೇಗೆ ಹುಟ್ಟುತ್ತದೆಯೋ ಎನ್ನುವ ಭಯವಿತ್ತು. ತುಂಬು ಗರ್ಭಿಣಿಯಾಗಿದ್ದರಿಂದ ಅಮ್ಮನ ಮನಸ್ಥಿತಿ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುವ ಕಾರಣದಿಂದ ನನ್ನ ಮಗು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಹುಟ್ಟಲಿ ಎನ್ನುವ ಆಸೆ ಬಿಟ್ಟರೆ ಮತ್ತಿನ್ನೇನೂ ನನ್ನ ತಲೆಯಲ್ಲಿ ಹೊಳೆಯುತ್ತಿರಲಿಲ್ಲ ಎಂದು ಆ ದಿನಗಳ ನೋವನ್ನು ನಟಿ ತೆರೆದಿಟ್ಟಿದ್ದಾರೆ.
ರಾಯನ್ ಹುಟ್ಟಿದ ಮೇಲೆ ನನ್ನ ಪ್ರಪಂಚವೇ ಬದಲಾಯಿತು. ನನಗೆ ಮಗು ಹುಟ್ಟಿದಾಗ, ಮಗುವನ್ನು ಎತ್ತಿಕೊಂಡ ಡಾಕ್ಟರ್ ಗಂಡು ಮಗು ಹುಟ್ಟಿದೆ. ಪಿಂಕ್ ಪಿಂಕ್ ಬೇಬಿ ಬಾಯ್ ಎಂದು ಹೇಳಿದರು. ಆಗಲೇ ನಾನು ಡಿಸೈಡ್ ಮಾಡಿಬಿಟ್ಟೆ. ಇವನಿಗಾಗಿ ಬದುಕಬೇಕು, ಇವನಿಗಾಗಿ ಜೀವಿಸಬೇಕು, ಖುಷಿಯಾಗಿ ಇರಬೇಕು ಎನ್ನುವುದಾಗಿ ನಟಿ ಹೇಳಿದ್ದಾರೆ.
56
ಎರಡನೆಯ ಮದುವೆಯ ಬಗ್ಗೆ
ಇದೇ ಸಂದರ್ಶನದಲ್ಲಿ ನಟಿ ತಮ್ಮ ಎರಡನೆಯ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. 'ಪ್ರತಿಯೊಬ್ಬರಿಗೂ ಸಂಗಾತಿ ಬೇಕು, ಆತ ಗಂಡನಾಗಿಯೇ ಅಂತಲ್ಲ, ಆದರೆ ಜೊತೆಗಾರನಾಗಿ ಇರಬೇಕು. ಒಂದು ಗಂಡಿಗೆ ಒಂದು ಹೆಣ್ಣು ಹೌದಾದರೂ, ಎಲ್ಲಾ ಸಂದರ್ಭದಲ್ಲಿಯೂ ಅದು ಹಾಗೆಯೇ ಆಗಬೇಕೆಂದೇನೂ ಇಲ್ಲ.ಕೊನೆ ಪಕ್ಷ ನಮ್ಮ ಕಷ್ಟ-ಸುಖ ಮಾತನಾಡಲು ಆದರೂ ಜೊತೆಗಾರ ಬೇಕು ಎಂದಿದ್ದಾರೆ.
66
ತುಂಬಾ ಮಂದಿ ಕೇಳ್ತಾರೆ
ಈ ಬಗ್ಗೆ ತುಂಬಾ ಮಂದಿ ನನ್ನ ಬಳಿ ಮಾತನಾಡುತ್ತಾರೆ. ಮತ್ತೊಂದು ಮದುವೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ಸದ್ಯ ಇನ್ನೊಂದು ಲವ್ ಬಗ್ಗೆ ನಾನು ಮಾನಸಿಕವಾಗಿ ರೆಡಿಯಾಗಿಲ್ಲ. ಹಾಗೆಂದು ಅದು ಆಗುವುದೇ ಇಲ್ಲವೆಂದೇನಲ್ಲ. ಮುಂದೊಮ್ಮೆ ಏನಾದರೂ ಈ ರೀತಿ ಚಾನ್ಸ್ ಬಂದರೆ, ಆ ಕ್ಷಣದಲ್ಲಿ ಏನು ನಿರ್ಧಾರ ಮಾಡಬೇಕು ಎನ್ನುವುದನ್ನು ಯೋಚನೆ ಮಾಡುತ್ತೇನೆ ಎನ್ನುವ ಮೂಲಕ, ಇನ್ನೊಂದು ಮದುವೆಯಾಗುವ ಸೂಚನೆ ಕೊಟ್ಟಿದ್ದರು. ಆದರೆ ಇದೀಗ ಓಪನ್ ಆಗಿ ಅದರ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.