ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ನಾನು ಕನ್ನಡ ಚಿತ್ರರಂಗಕ್ಕೆ ಬಂದಾಗ 1996 ಅಲ್ಲಿ ಸ್ವಲ್ಪನಾದರೂ ನಮ್ಮ ಸಿನಿಮಾ ಭವಿಷ್ಯದ ಬಗ್ಗೆ ಹೋಪ್ ಇತ್ತು. ಆದರೆ, 1997ರಲ್ಲಿ ಮಾತ್ರ ಎಂಟ್ರಿ ಕೊಟ್ರಪ್ಪಾ ಉಪ್ಪಿ ಸರ್, ಎಂಟೈರ್ ಕರ್ನಾಟಕವನ್ನೇ ಅಲ್ಲಾಡಿಸಿಬಿಟ್ಟರು. ನಮಗೆ ಸಿನಿಮಾದಲ್ಲಿ ಸರ್ವೈವ್ ಆಗ್ತೀವಿ ಎಂಬ ಸ್ವಲ್ಪ ನಂಬಿಕೆಯೂ ಹೋಗಿಬಿಡ್ತು ನಮಗೆ. ನಾವೆಲ್ಲಾ ಮುಂದಕ್ಕೆ ಹೇಗೆ ಬರ್ತೀವಿ ಎಂಬ ಚಿಂತೆಯಾಗಿತ್ತು.
ಕ್ರೇಜ್ ಅಂದರೆ ಈ ತರಹ ಎಂಬಂತೆ ತಿರುಗಿಕೊಂಡಿತ್ತು. ಆ ವ್ಯಕ್ತಿ (ಉಪೇಂದ್ರ) ಮಾಡಿದ್ದನ್ನ ಮಾತ್ರ ಜನ ಒಪ್ಕೋತಿದಾರೆ ಅಂದಾಗ ನಾವು ಎಲ್ಲಿ ಫಿಟ್ ಆಗ್ತೀವಿ ಎಂಬ ಆತಂಕ ಶುರುವಾಗಿತ್ತು. ಉಪೇಂದ್ರ ಸರ್ ತರಹ ಮಾಡೋಕೆ ನಮಗೆ ಆಗೊಲ್ಲ. ಅವರಿಗೆ ಬರವಣಿಗೆ, ನಿರ್ದೇಶನ, ಅವರೊಬ್ಬ ಕಂಪ್ಲೀಟ್ ಪ್ಯಾಕೇಜ್ ಆಗಿದ್ದಾರೆ. ಅದು ನಮ್ಮಿಂದ ಸಾಧ್ಯವಿಲ್ಲ.
ವಿಡಿಯೋಗೆ ಈ ಲಿಂಕ್ ಕ್ಲಿಕ್ ಮಾಡಿ: https://youtube.com/shorts/K2PHobL9sCc?si=0xnQxAU9uHb2ZVD1