ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಂಡ ಕಿರುತೆರೆ ನಟಿ ಯಮುನಾ ಶ್ರೀನಿಧಿ!

First Published May 9, 2021, 10:35 AM IST

ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಯಮುನಾ ಶ್ರೀನಿಧಿ ಈ ವರ್ಷ ಹುಟ್ಟು ಹಬ್ಬವನ್ನು ತುಂಬಾನೇ ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದಾರೆ. ರಕ್ತದಾನ ಮಾಡುವಂತೆ ಜನರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.

ನಟಿ, ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ನೃತ್ಯಗಾತಿ ಯಮುನಾ ಶ್ರೀನಿಧಿ ಅವರು ಜನ್ಮದಿನದಂದು ರಕ್ತದಾನ ಮಾಡಿದ್ದಾರೆ.
undefined
ಈ ಮಹಾಮಾರಿ ಸಮಯದಲ್ಲಿ ಜೀವ ಉಳಿಸಲು ರಕ್ತದ ಅಗತ್ಯವಿರುವುದರಿಂದ ಸಾಮಾಜಿಕ ಕಳಕಳಿಯನ್ನು ಈ ಮೂಲಕ ತಿಳಿಸಿದ್ದಾರೆ.
undefined
'ಸಾಮಾಜಿಕ ಕಾಳಜಿಗೆ ಪ್ರತಿಕ್ರಿಯಿಸುವ ಮನಸ್ಸಿಗೆ ಎನ್‌ಸಿಸಿ ತರಬೇತಿ ಅಡಿಪಾಯ ಹಾಕಿದೆ. ನನ್ನ ಎನ್‌ಸಿಸಿ ದಿನಗಳಲ್ಲಿ ನಾನು 18 ವರ್ಷ ವಯಸ್ಸಿನವಳಾಗಿದ್ದಾಗ ರಕ್ತದಾನಕ್ಕೆ ಪರಿಚಯಿಸಲ್ಪಟ್ಟೆ ಮತ್ತು ಇನ್ನೂ ಮುಂದುವರಿಯುತ್ತಿದ್ದೇನೆ' ಎಂದಿದ್ದಾರೆ ಯಮುನಾ ಶ್ರೀನಿಧಿ.
undefined
ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರದಲ್ಲಿ ಕ್ರೀಡಾ ವಿಭಾಗದ ಮುಖ್ಯಸ್ಥೆಯಾಗಿ ಅಭಿನಯಿಸಿದ್ದಾರೆ.
undefined
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿಯಲ್ಲಿ ವಾಸುಕಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.
undefined
ನಟಿ ಯಮುನಾ ಶ್ರೀನಿಧಿಯವರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಕ್ತನಿಧಿಗಳಲ್ಲಿ ರಕ್ತದ ಅಭಾವಕ್ಕೆ ಸ್ಪಂದಿಸಿ,‌ ಸ್ವಇಚ್ಛೆಯಿಂದ ರಕ್ತದಾನವನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.
undefined
ನಾರಾಯಣ ಹೃದಯಾಲಯದ ಸಂಸ್ಥಾಪಕರಾದ ಹೆಸರಾಂತ ವೈದ್ಯರಾದ ಪದ್ಮಭೂಷಣ ಡಾ|| ದೇವಿಶೆಟ್ಟಿ ಅವರು ಶ್ಲಾಘಿಸಿದ್ದಾರೆ
undefined
click me!